<p><strong>ಬೆಂಗಳೂರು</strong>: ಐದು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿರುವ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಕೋರ್ಸ್ಗಳಿಗಾಗಿ ನೂತನ ಶೈಕ್ಷಣಿಕ ವಿಭಾಗ ಸಿದ್ಧವಾಗಿದ್ದು, ಇದೇ ತಿಂಗಳಲ್ಲಿ ಉದ್ಘಾಟನೆಯಾಗಲಿದೆ.</p><p>ರೂಸಾ ಯೋಜನೆಯಡಿ ವಿಶ್ವವಿದ್ಯಾ<br>ಲಯಕ್ಕೆ ₹55 ಕೋಟಿ ಅನುದಾನ ಮಂಜೂರಾಗಿತ್ತು. ಈ ಪೈಕಿ ₹8 ಕೋಟಿ<br>ವೆಚ್ಚದಲ್ಲಿ ಶೈಕ್ಷಣಿಕ ವಿಭಾಗ ನಿರ್ಮಿಸಿದ್ದು, ನೆಲ ಮಹಡಿ, ಮೊದಲ ಹಾಗೂ ಎರಡನೇ ಮಹಡಿಯಲ್ಲಿ 20 ಕೊಠಡಿಗಳು ಇವೆ. ಸ್ನಾತಕೋತ್ತರ ಕೋರ್ಸ್ಗಳ ತರಗತಿಗಳಿಗೆ ಇವು ಬಳಕೆಯಾಗಲಿವೆ.</p><p>‘ಪಿಎಂ ಉಷಾ ಯೋಜನೆಯಡಿ ₹19.77 ಕೋಟಿ ಅನುದಾನ ಬಂದಿದ್ದು, ವಿಶ್ವವಿದ್ಯಾಲಯದ ಅಧೀನದಲ್ಲಿ ಇರುವ ವಿಎಚ್ಡಿ ಕೇಂದ್ರೀಯ ಗೃಹ ವಿಜ್ಞಾನ ಕಾಲೇಜಿನಲ್ಲಿ ಶೈಕ್ಷಣಿಕ ವಿಭಾಗ ನಿರ್ಮಿಸಲಾಗುತ್ತದೆ. ಇದಲ್ಲದೆ ಕ್ಲಸ್ಟರ್ ವಿ.ವಿ ಆವರಣದಲ್ಲಿನ ಶೈಕ್ಷಣಿಕ ವಿಭಾಗದ ಮೇಲೆ ಇನ್ನೂ ಎರಡು ಮಹಡಿಗಳನ್ನು ನಿರ್ಮಿಸುವ ಉದ್ದೇಶವಿದೆ.<br></p><p>ಈ ಕಾರ್ಯ ಪೂರ್ಣಗೊಂಡ ನಂತರ<br>ಇನ್ನಷ್ಟು ಕೋರ್ಸ್ಗಳನ್ನು ಆರಂಭಿ<br>ಸುತ್ತೇವೆ’ ಎಂದು ಹಂಗಾಮಿ ಕುಲಪತಿ ಟಿ.ಎಂ.ಮಂಜುನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.</p><p>ಹೊಸ ಕೋರ್ಸ್: ಮುಂಬರುವ ಶೈಕ್ಷಣಿಕ ಸಾಲಿನಿಂದ (2026–27) ಐದು ವರ್ಷದ ಎಲ್ಎಲ್ಬಿ, ಬಿ.ಇಡಿ ಸೇರಿದಂತೆ ಹೊಸ ಕೋರ್ಸ್ಗಳು ಆರಂಭವಾಗಲಿವೆ. ಇದಕ್ಕೆ ಬೇಕಾದ ಸಿದ್ಧತೆಗಳನ್ನು ಈಗಾಗಲೇ ಮಾಡುತ್ತಿದ್ದು, ಕೈಗೆಟುಕುವ ದರದಲ್ಲಿ ವಿದ್ಯಾರ್ಥಿಗಳು ಹೊಸ ಕೋರ್ಸ್ಗಳಿಗೆ ಪ್ರವೇಶ ಪಡೆಯಬಹುದಾಗಿದೆ.</p><p>ಇದಲ್ಲದೆ ಮುಂದಿನ ವರ್ಷದಿಂದ ಪಿಎಚ್.ಡಿ ವ್ಯಾಸಂಗಕ್ಕೂ ಅವಕಾಶ ಕಲ್ಪಿಸಲಾಗುತ್ತದೆ. ಇಲ್ಲಿ ಮಂಜೂರಾದ 272 ಬೋಧಕ ಹುದ್ದೆಗಳ ಪೈಕಿ 142 ಮಂದಿ ಕಾಯಂ ಬೋಧಕರಿದ್ದಾರೆ. ರಾಜ್ಯದ ಬೇರೆ ಯಾವುದೇ ವಿಶ್ವವಿದ್ಯಾಲಯದಲ್ಲಿ<br>ಇಷ್ಟೊಂದು ಸಂಖ್ಯೆಯಲ್ಲಿ ಕಾಯಂ ಬೋಧಕರಿಲ್ಲ. ಅತಿಥಿ ಉಪನ್ಯಾಸಕರ ಮೇಲೆ ಬಹುತೇಕ ವಿಶ್ವವಿದ್ಯಾಲಯಗಳು<br>ಅವಲಂಬನೆಯಾಗಿವೆ. ಆದರೆ, ನಮ್ಮ ವಿಶ್ವವಿದ್ಯಾಲಯದಲ್ಲಿ ಕಾಯಂ ಬೋಧಕರು ಅಧಿಕ ಸಂಖ್ಯೆಯಲ್ಲಿ ಇರುವುದರಿಂದ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರ ಕೊರತೆ ಇಲ್ಲ ಎಂದು ಮಂಜುನಾಥ್ ತಿಳಿಸಿದರು.</p><p>ವಿಶ್ವವಿದ್ಯಾಲಯದಲ್ಲಿ ಇದುವರೆಗೆ 22 ಸ್ನಾತಕೋತ್ತರ ವಿಭಾಗಗಳು ಇದ್ದವು. ಈ ವರ್ಷ ಕನ್ನಡ ಎಂ.ಎ ಶುರುವಾಗಿದೆ. ಇದೂ ಸೇರಿ 23 ವಿಭಾಗಗಳಿವೆ. ಡೇಟಾ ಸೈನ್ಸ್, ಕೃತಕ ಬುದ್ಧಿಮತ್ತೆಯ (ಎಐ) ಸ್ನಾತಕೋತ್ತರ ಕೋರ್ಸ್ಗಳು ಕಳೆದ ವರ್ಷ ಶುರುವಾಗಿದ್ದು, ಇದಕ್ಕೆ ಭಾರಿ ಬೇಡಿಕೆ ಇದೆ. ವಿವಿಧ ವಿಭಾಗಗಳಲ್ಲಿ ಸುಮಾರು ಐದು ಸಾವಿರ ವಿದ್ಯಾರ್ಥಿನಿಯರು ಕಲಿಯುತ್ತಿದ್ದಾರೆ.</p><p>ಇದಲ್ಲದೆ ಬಿಎಸ್ಸಿ, ಬಿಸಿಎನಲ್ಲಿ ಡೇಟಾ ಸೈನ್ಸ್, ಕೃತಕ ಬುದ್ದಿಮತ್ತೆ ಕೋರ್ಸ್ಗಳಿದ್ದು, ಈಚೆಗೆ ಈ ಕೋರ್ಸ್<br>ಗಳಿಗೆ ಪ್ರವೇಶ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ. ವಾರ್ಷಿಕ ₹35 ಸಾವಿರ ಶುಲ್ಕವನ್ನು ಈ ಕೋರ್ಸ್ಗಳಿಗೆ ನಿಗದಿಪಡಿಸಲಾಗಿದೆ.</p><p>ಮೆಗಾ ಹಾಸ್ಟೆಲ್: ₹15 ಕೋಟಿ ವೆಚ್ಚದಲ್ಲಿ ಮೆಗಾ ಹಾಸ್ಟೆಲ್ ನಿರ್ಮಾಣವಾಗಿದ್ದು,<br>1200 ವಿದ್ಯಾರ್ಥಿನಿಯರಿಗೆ ಪ್ರವೇಶ ಅವಕಾಶ ಕಲ್ಪಿಸಬಹುದು. ಸದ್ಯ 900 ವಿದ್ಯಾರ್ಥಿನಿಯರು ಇದ್ದಾರೆ.</p><p>ಹಿಂದೆ ಇದ್ದ ಎರಡು ಹಳೆಯ ಹಾಸ್ಟೆಲ್ ಕಟ್ಟಡಗಳನ್ನು ನವೀಕರಿಸಬೇಕಾಗಿದೆ. ಈ ಕೆಲಸ ಪೂರ್ಣವಾದರೆ ಇನ್ನೂ 800 ವಿದ್ಯಾರ್ಥಿನಿಯರಿಗೆ ಪ್ರವೇಶ ನೀಡಬಹುದು. ಪಿಎಂ ಉಷಾ ಯೋಜನೆಯಡಿ ಮಂಜೂರಾಗಿರುವ ಅನುದಾನವನ್ನು ನವೀಕರಣಕ್ಕೆ ಬಳಸಿಕೊಳ್ಳಲಾಗುತ್ತದೆ. ಸಂಶೋಧನಾ ವಿದ್ಯಾರ್ಥಿನಿಯರಿಗೆ, ಹೊಸ ಕೋರ್ಸ್ಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿನಿಯರಿಗೆ ಇಲ್ಲಿ ವಸತಿ ವ್ಯವಸ್ಥೆ ಮಾಡಿಕೊಡುವ ಉದ್ದೇಶವನ್ನು ವಿ.ವಿ ಹೊಂದಿದೆ.</p><p><strong>ಇನ್ನೂ ಬಾರದ ಅನುದಾನ</strong></p><p>ಹಳೆಯ ಕಟ್ಟಡಗಳಲ್ಲಿಎಲೆಕ್ಟ್ರಿಕಲ್ ಕೆಲಸಗಳಿಗಾಗಿ ₹3.4 ಕೋಟಿ, ಸಿವಿಲ್ ಕಾಮಗಾರಿಗಳಿಗೆ ₹2.5 ಕೋಟಿ, ಅಭಿವೃದ್ಧಿ ಕಾರ್ಯಗಳಿಗೆ ₹7 ಕೋಟಿ, ಎಸ್ಸಿಎಸ್ಟಿ–ಟಿಎಸ್ಪಿ ಯೋಜನೆಯಡಿ ₹3.7 ಕೋಟಿ ಸೇರಿದಂತೆ ಒಟ್ಟು 20.9 ಕೋಟಿ ಅನುದಾನ ನೀಡುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಆದರೆ, ಇನ್ನೂ ಅನುದಾನ ಮಂಜೂರಾಗಿಲ್ಲ. ಸರ್ಕಾರ ಆದಷ್ಟು ಬೇಗ ಅನುದಾನ ನೀಡಿದರೆ ವಿದ್ಯಾರ್ಥಿನಿಯರಿಗೆ ಇನ್ನಷ್ಟು ಸೌಲಭ್ಯಗಳನ್ನು ಕಲ್ಪಿಸಿಕೊಡಬಹುದು ಎಂದು ಮಂಜುನಾಥ ಅಭಿಪ್ರಾಯಪಟ್ಟರು.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಐದು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿರುವ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಕೋರ್ಸ್ಗಳಿಗಾಗಿ ನೂತನ ಶೈಕ್ಷಣಿಕ ವಿಭಾಗ ಸಿದ್ಧವಾಗಿದ್ದು, ಇದೇ ತಿಂಗಳಲ್ಲಿ ಉದ್ಘಾಟನೆಯಾಗಲಿದೆ.</p><p>ರೂಸಾ ಯೋಜನೆಯಡಿ ವಿಶ್ವವಿದ್ಯಾ<br>ಲಯಕ್ಕೆ ₹55 ಕೋಟಿ ಅನುದಾನ ಮಂಜೂರಾಗಿತ್ತು. ಈ ಪೈಕಿ ₹8 ಕೋಟಿ<br>ವೆಚ್ಚದಲ್ಲಿ ಶೈಕ್ಷಣಿಕ ವಿಭಾಗ ನಿರ್ಮಿಸಿದ್ದು, ನೆಲ ಮಹಡಿ, ಮೊದಲ ಹಾಗೂ ಎರಡನೇ ಮಹಡಿಯಲ್ಲಿ 20 ಕೊಠಡಿಗಳು ಇವೆ. ಸ್ನಾತಕೋತ್ತರ ಕೋರ್ಸ್ಗಳ ತರಗತಿಗಳಿಗೆ ಇವು ಬಳಕೆಯಾಗಲಿವೆ.</p><p>‘ಪಿಎಂ ಉಷಾ ಯೋಜನೆಯಡಿ ₹19.77 ಕೋಟಿ ಅನುದಾನ ಬಂದಿದ್ದು, ವಿಶ್ವವಿದ್ಯಾಲಯದ ಅಧೀನದಲ್ಲಿ ಇರುವ ವಿಎಚ್ಡಿ ಕೇಂದ್ರೀಯ ಗೃಹ ವಿಜ್ಞಾನ ಕಾಲೇಜಿನಲ್ಲಿ ಶೈಕ್ಷಣಿಕ ವಿಭಾಗ ನಿರ್ಮಿಸಲಾಗುತ್ತದೆ. ಇದಲ್ಲದೆ ಕ್ಲಸ್ಟರ್ ವಿ.ವಿ ಆವರಣದಲ್ಲಿನ ಶೈಕ್ಷಣಿಕ ವಿಭಾಗದ ಮೇಲೆ ಇನ್ನೂ ಎರಡು ಮಹಡಿಗಳನ್ನು ನಿರ್ಮಿಸುವ ಉದ್ದೇಶವಿದೆ.<br></p><p>ಈ ಕಾರ್ಯ ಪೂರ್ಣಗೊಂಡ ನಂತರ<br>ಇನ್ನಷ್ಟು ಕೋರ್ಸ್ಗಳನ್ನು ಆರಂಭಿ<br>ಸುತ್ತೇವೆ’ ಎಂದು ಹಂಗಾಮಿ ಕುಲಪತಿ ಟಿ.ಎಂ.ಮಂಜುನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.</p><p>ಹೊಸ ಕೋರ್ಸ್: ಮುಂಬರುವ ಶೈಕ್ಷಣಿಕ ಸಾಲಿನಿಂದ (2026–27) ಐದು ವರ್ಷದ ಎಲ್ಎಲ್ಬಿ, ಬಿ.ಇಡಿ ಸೇರಿದಂತೆ ಹೊಸ ಕೋರ್ಸ್ಗಳು ಆರಂಭವಾಗಲಿವೆ. ಇದಕ್ಕೆ ಬೇಕಾದ ಸಿದ್ಧತೆಗಳನ್ನು ಈಗಾಗಲೇ ಮಾಡುತ್ತಿದ್ದು, ಕೈಗೆಟುಕುವ ದರದಲ್ಲಿ ವಿದ್ಯಾರ್ಥಿಗಳು ಹೊಸ ಕೋರ್ಸ್ಗಳಿಗೆ ಪ್ರವೇಶ ಪಡೆಯಬಹುದಾಗಿದೆ.</p><p>ಇದಲ್ಲದೆ ಮುಂದಿನ ವರ್ಷದಿಂದ ಪಿಎಚ್.ಡಿ ವ್ಯಾಸಂಗಕ್ಕೂ ಅವಕಾಶ ಕಲ್ಪಿಸಲಾಗುತ್ತದೆ. ಇಲ್ಲಿ ಮಂಜೂರಾದ 272 ಬೋಧಕ ಹುದ್ದೆಗಳ ಪೈಕಿ 142 ಮಂದಿ ಕಾಯಂ ಬೋಧಕರಿದ್ದಾರೆ. ರಾಜ್ಯದ ಬೇರೆ ಯಾವುದೇ ವಿಶ್ವವಿದ್ಯಾಲಯದಲ್ಲಿ<br>ಇಷ್ಟೊಂದು ಸಂಖ್ಯೆಯಲ್ಲಿ ಕಾಯಂ ಬೋಧಕರಿಲ್ಲ. ಅತಿಥಿ ಉಪನ್ಯಾಸಕರ ಮೇಲೆ ಬಹುತೇಕ ವಿಶ್ವವಿದ್ಯಾಲಯಗಳು<br>ಅವಲಂಬನೆಯಾಗಿವೆ. ಆದರೆ, ನಮ್ಮ ವಿಶ್ವವಿದ್ಯಾಲಯದಲ್ಲಿ ಕಾಯಂ ಬೋಧಕರು ಅಧಿಕ ಸಂಖ್ಯೆಯಲ್ಲಿ ಇರುವುದರಿಂದ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರ ಕೊರತೆ ಇಲ್ಲ ಎಂದು ಮಂಜುನಾಥ್ ತಿಳಿಸಿದರು.</p><p>ವಿಶ್ವವಿದ್ಯಾಲಯದಲ್ಲಿ ಇದುವರೆಗೆ 22 ಸ್ನಾತಕೋತ್ತರ ವಿಭಾಗಗಳು ಇದ್ದವು. ಈ ವರ್ಷ ಕನ್ನಡ ಎಂ.ಎ ಶುರುವಾಗಿದೆ. ಇದೂ ಸೇರಿ 23 ವಿಭಾಗಗಳಿವೆ. ಡೇಟಾ ಸೈನ್ಸ್, ಕೃತಕ ಬುದ್ಧಿಮತ್ತೆಯ (ಎಐ) ಸ್ನಾತಕೋತ್ತರ ಕೋರ್ಸ್ಗಳು ಕಳೆದ ವರ್ಷ ಶುರುವಾಗಿದ್ದು, ಇದಕ್ಕೆ ಭಾರಿ ಬೇಡಿಕೆ ಇದೆ. ವಿವಿಧ ವಿಭಾಗಗಳಲ್ಲಿ ಸುಮಾರು ಐದು ಸಾವಿರ ವಿದ್ಯಾರ್ಥಿನಿಯರು ಕಲಿಯುತ್ತಿದ್ದಾರೆ.</p><p>ಇದಲ್ಲದೆ ಬಿಎಸ್ಸಿ, ಬಿಸಿಎನಲ್ಲಿ ಡೇಟಾ ಸೈನ್ಸ್, ಕೃತಕ ಬುದ್ದಿಮತ್ತೆ ಕೋರ್ಸ್ಗಳಿದ್ದು, ಈಚೆಗೆ ಈ ಕೋರ್ಸ್<br>ಗಳಿಗೆ ಪ್ರವೇಶ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ. ವಾರ್ಷಿಕ ₹35 ಸಾವಿರ ಶುಲ್ಕವನ್ನು ಈ ಕೋರ್ಸ್ಗಳಿಗೆ ನಿಗದಿಪಡಿಸಲಾಗಿದೆ.</p><p>ಮೆಗಾ ಹಾಸ್ಟೆಲ್: ₹15 ಕೋಟಿ ವೆಚ್ಚದಲ್ಲಿ ಮೆಗಾ ಹಾಸ್ಟೆಲ್ ನಿರ್ಮಾಣವಾಗಿದ್ದು,<br>1200 ವಿದ್ಯಾರ್ಥಿನಿಯರಿಗೆ ಪ್ರವೇಶ ಅವಕಾಶ ಕಲ್ಪಿಸಬಹುದು. ಸದ್ಯ 900 ವಿದ್ಯಾರ್ಥಿನಿಯರು ಇದ್ದಾರೆ.</p><p>ಹಿಂದೆ ಇದ್ದ ಎರಡು ಹಳೆಯ ಹಾಸ್ಟೆಲ್ ಕಟ್ಟಡಗಳನ್ನು ನವೀಕರಿಸಬೇಕಾಗಿದೆ. ಈ ಕೆಲಸ ಪೂರ್ಣವಾದರೆ ಇನ್ನೂ 800 ವಿದ್ಯಾರ್ಥಿನಿಯರಿಗೆ ಪ್ರವೇಶ ನೀಡಬಹುದು. ಪಿಎಂ ಉಷಾ ಯೋಜನೆಯಡಿ ಮಂಜೂರಾಗಿರುವ ಅನುದಾನವನ್ನು ನವೀಕರಣಕ್ಕೆ ಬಳಸಿಕೊಳ್ಳಲಾಗುತ್ತದೆ. ಸಂಶೋಧನಾ ವಿದ್ಯಾರ್ಥಿನಿಯರಿಗೆ, ಹೊಸ ಕೋರ್ಸ್ಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿನಿಯರಿಗೆ ಇಲ್ಲಿ ವಸತಿ ವ್ಯವಸ್ಥೆ ಮಾಡಿಕೊಡುವ ಉದ್ದೇಶವನ್ನು ವಿ.ವಿ ಹೊಂದಿದೆ.</p><p><strong>ಇನ್ನೂ ಬಾರದ ಅನುದಾನ</strong></p><p>ಹಳೆಯ ಕಟ್ಟಡಗಳಲ್ಲಿಎಲೆಕ್ಟ್ರಿಕಲ್ ಕೆಲಸಗಳಿಗಾಗಿ ₹3.4 ಕೋಟಿ, ಸಿವಿಲ್ ಕಾಮಗಾರಿಗಳಿಗೆ ₹2.5 ಕೋಟಿ, ಅಭಿವೃದ್ಧಿ ಕಾರ್ಯಗಳಿಗೆ ₹7 ಕೋಟಿ, ಎಸ್ಸಿಎಸ್ಟಿ–ಟಿಎಸ್ಪಿ ಯೋಜನೆಯಡಿ ₹3.7 ಕೋಟಿ ಸೇರಿದಂತೆ ಒಟ್ಟು 20.9 ಕೋಟಿ ಅನುದಾನ ನೀಡುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಆದರೆ, ಇನ್ನೂ ಅನುದಾನ ಮಂಜೂರಾಗಿಲ್ಲ. ಸರ್ಕಾರ ಆದಷ್ಟು ಬೇಗ ಅನುದಾನ ನೀಡಿದರೆ ವಿದ್ಯಾರ್ಥಿನಿಯರಿಗೆ ಇನ್ನಷ್ಟು ಸೌಲಭ್ಯಗಳನ್ನು ಕಲ್ಪಿಸಿಕೊಡಬಹುದು ಎಂದು ಮಂಜುನಾಥ ಅಭಿಪ್ರಾಯಪಟ್ಟರು.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>