ಪಾಲಿಕೆ ಸಿಬ್ಬಂದಿ ಬೆಳ್ಳಂದೂರು, ಕಸವನಹಳ್ಳಿ, ಸರ್ಜಾಪುರ, ಹರಳೂರು ರಸ್ತೆ ಬದಿಯ ಕಂಬಗಳಿಗೆ ಕಟ್ಟಿ, ಎಳೆದಿದ್ದ ಅನಧಿಕೃತ ಕೇಬಲ್ಗಳನ್ನು ತೆರವುಗೊಳಿಸಿದರು. ಸುಮಾರು 20 ಕಿ.ಮೀ. ಉದ್ದದ ರಸ್ತೆಯ ಇಕ್ಕೆಲಗಳಲ್ಲಿ ಜೋತುಬಿದ್ದು, ನಗರದ ಸೌಂದರ್ಯವನ್ನು ಹಾಳು ಮಾಡಿ, ಪಾದಚಾರಿಗಳಿಗೆ ಅಡಚಣೆ ಉಂಟುಮಾಡುತ್ತಿದ್ದ ಕೇಬಲ್ಗಳನ್ನು ಕಿತ್ತು ಹಾಕಿ, ಟ್ರ್ಯಾಕ್ಟರ್ ತುಂಬಾ ತುಂಬಿಕೊಂಡು ಹೋದರು.