<p><strong>ಬೆಂಗಳೂರು: </strong>ಕಾರಿನ ಗಾಜು ಒಡೆದು ಚಿನ್ನಾಭರಣವಿದ್ದ ಬ್ಯಾಗ್ ಕದ್ದಿದ್ದ ಆರೋಪದಡಿ ರತ್ನಕುಮಾರ್ ಅಲಿಯಾಸ್ ರೆಡ್ಡಿ (40) ಹಾಗೂ ಆತನ ಪತ್ನಿ ತಾಸಿನ್ ಫಾತಿಮಾ ಅಲಿಯಾಸ್ ತನು (36) ಅವರನ್ನು ತಲಘಟ್ಟಪುರ ಪೊಲೀಸರು ಬಂಧಿಸಿದ್ದಾರೆ.</p>.<p>‘ಆಂಧ್ರಪ್ರದೇಶದ ‘ಓಜಿಕುಪ್ಪಂ’ ನಿವಾಸಿಗಳಾದ ಆರೋಪಿಗಳು, ತಮ್ಮದೇ ತಂಡ ಕಟ್ಟಿಕೊಂಡು ಕೃತ್ಯ ಎಸಗುತ್ತಿದ್ದರು. ಇವರಿಬ್ಬರಿಂದ ₹ 1.22 ಕೋಟಿ ಮೌಲ್ಯದ ಚಿನ್ನ ಹಾಗೂ ವಜ್ರದ ಆಭರಣ ಜಪ್ತಿ ಮಾಡಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಹೇಳಿದರು.</p>.<p>‘ಉದ್ಯಮಿಯೊಬ್ಬರು ತಲಘಟ್ಟಪುರ ರಘುವನಹಳ್ಳಿಯ ಯೂನಿಯನ್ ಬ್ಯಾಂಕ್ ಇಂಡಿಯಾ ಶಾಖೆಯ ಲಾಕರ್ನಲ್ಲಿ ಚಿನ್ನ ಹಾಗೂ ವಜ್ರದ ಆಭರಣ ಇರಿಸಿದ್ದರು. ಕಾರ್ಯಕ್ರಮ ನಿಮಿತ್ತ ಏಪ್ರಿಲ್ 28ರಂದು ಲಾಕರ್ನಲ್ಲಿದ್ದ ಆಭರಣ ಬಿಡಿಸಿಕೊಂಡಿದ್ದರು. ಆಭರಣವಿದ್ದ ಬ್ಯಾಗ್ ಕಾರಿನಲ್ಲಿರಿಸಿದ್ದರು.’</p>.<p>‘ಬ್ಯಾಂಕ್ ಮುಂದೆಯೇ ಕಾರು ನಿಲ್ಲಿಸಿದ್ದ ಉದ್ಯಮಿ, ಕೆಲಸ ನಿಮಿತ್ತ ಸಮೀಪದಲ್ಲಿದ್ದ ನರ್ಸರಿಗೆ ಹೋಗಿದ್ದರು. ಅದೇ ಸಂದರ್ಭದಲ್ಲೇ ಆರೋಪಿಗಳು, ಕಾರಿನ ಗಾಜು ಒಡೆದು ಬ್ಯಾಗ್ ಕದ್ದೊಯ್ದಿದ್ದರು. ಉದ್ಯಮಿ ಸ್ಥಳಕ್ಕೆ ಬಂದಾಗ ವಿಷಯ ಗೊತ್ತಾಗಿತ್ತು’ ಎಂದೂ ತಿಳಿಸಿದರು.</p>.<p class="Subhead">ಆಭರಣ ಮಾರಾಟದ ಸುಳಿವು: ‘ಆಭರಣ ಸಮೇತ ಪರಾರಿಯಾಗಿದ್ದ ಆರೋಪಿಗಳು, ತಮಿಳುನಾಡಿನ ಚೆನ್ನೈನಲ್ಲಿ ನೆಲೆಸಿದ್ದರು. ಕದ್ದ ಆಭರಣಗಳನ್ನು ಮಾರಿ, ಫ್ಲ್ಯಾಟ್ನಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದರು’ ಎಂದೂ ಪೊಲೀಸರು ಹೇಳಿದರು.</p>.<p>‘ಚೆನ್ನೈನ ಮೊಹಮ್ಮದ್ ಹರ್ಷದ್ ನದೀಮ್ ಎಂಬಾತನ ಮೂಲಕ ಆಭರಣ ಮಾರಿಸಿದ್ದ ಬಗ್ಗೆ ಮಾಹಿತಿ ಸಿಕ್ಕಿತ್ತು. ನದೀಮ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ಆತ, ಆರೋಪಿ ತಾಸಿನ್ ತಮ್ಮನೆಂಬುದು ಗೊತ್ತಾಯಿತು. ಆತನೇ ಆರೋಪಿಗಳ ಸುಳಿವು ನೀಡಿದ್ದ’ ಎಂದೂ ತಿಳಿಸಿದರು.</p>.<p>‘ಫ್ಲ್ಯಾಟ್ ಮೇಲೆ ದಾಳಿ ಮಾಡಿ ದಂಪತಿಯನ್ನು ಬಂಧಿಸಿ, 978 ಗ್ರಾಂ ತೂಕದ ಚಿನ್ನಾಭರಣ, 176 ಗ್ರಾಂ ವಜ್ರದ ಆಭರಣ ಜಪ್ತಿ ಮಾಡಲಾಯಿತು’ ಎಂದೂ ಹೇಳಿದರು.</p>.<p class="Subhead"><strong>ಗಮನ ಬೇರೆಡೆ ಸೆಳೆದು ಕೃತ್ಯ: ‘</strong>ಓಜಿಕುಪ್ಪಂ ತಂಡದ ಸದಸ್ಯನಾಗಿದ್ದ ರತ್ನಕುಮಾರ್, ಆಗಾಗ ಬೆಂಗಳೂರಿಗೆ ಬರುತ್ತಿದ್ದ. ಬ್ಯಾಂಕ್ಗೆ ಬಂದು ಹೋಗುತ್ತಿದ್ದ ಸಾರ್ವಜನಿಕರ ಮೇಲೆ ಕಣ್ಣಿಟ್ಟು, ಅವರ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡುತ್ತಿದ್ದ. ಈತನ ವಿರುದ್ಧ ವಿವಿಧ ಠಾಣೆಗಳಲ್ಲಿ 26 ಪ್ರಕರಣಗಳು ದಾಖಲಾಗಿದ್ದವು’ ಎಂದೂ ತಿಳಿಸಿದರು.</p>.<p>‘ರತ್ನಕುಮಾರ್ ಕೃತ್ಯಕ್ಕೆ ಪತ್ನಿ ತಾಸಿನ್ ಸಹಕಾರ ನೀಡುತ್ತಿದ್ದಳು. ಇವರ ಜೊತೆ ಮತ್ತಷ್ಟು ಮಂದಿ ಕೃತ್ಯದಲ್ಲಿ ಭಾಗಿಯಾಗಿರುವ ಅನುಮಾನವಿದೆ’ ಎಂದೂ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಕಾರಿನ ಗಾಜು ಒಡೆದು ಚಿನ್ನಾಭರಣವಿದ್ದ ಬ್ಯಾಗ್ ಕದ್ದಿದ್ದ ಆರೋಪದಡಿ ರತ್ನಕುಮಾರ್ ಅಲಿಯಾಸ್ ರೆಡ್ಡಿ (40) ಹಾಗೂ ಆತನ ಪತ್ನಿ ತಾಸಿನ್ ಫಾತಿಮಾ ಅಲಿಯಾಸ್ ತನು (36) ಅವರನ್ನು ತಲಘಟ್ಟಪುರ ಪೊಲೀಸರು ಬಂಧಿಸಿದ್ದಾರೆ.</p>.<p>‘ಆಂಧ್ರಪ್ರದೇಶದ ‘ಓಜಿಕುಪ್ಪಂ’ ನಿವಾಸಿಗಳಾದ ಆರೋಪಿಗಳು, ತಮ್ಮದೇ ತಂಡ ಕಟ್ಟಿಕೊಂಡು ಕೃತ್ಯ ಎಸಗುತ್ತಿದ್ದರು. ಇವರಿಬ್ಬರಿಂದ ₹ 1.22 ಕೋಟಿ ಮೌಲ್ಯದ ಚಿನ್ನ ಹಾಗೂ ವಜ್ರದ ಆಭರಣ ಜಪ್ತಿ ಮಾಡಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಹೇಳಿದರು.</p>.<p>‘ಉದ್ಯಮಿಯೊಬ್ಬರು ತಲಘಟ್ಟಪುರ ರಘುವನಹಳ್ಳಿಯ ಯೂನಿಯನ್ ಬ್ಯಾಂಕ್ ಇಂಡಿಯಾ ಶಾಖೆಯ ಲಾಕರ್ನಲ್ಲಿ ಚಿನ್ನ ಹಾಗೂ ವಜ್ರದ ಆಭರಣ ಇರಿಸಿದ್ದರು. ಕಾರ್ಯಕ್ರಮ ನಿಮಿತ್ತ ಏಪ್ರಿಲ್ 28ರಂದು ಲಾಕರ್ನಲ್ಲಿದ್ದ ಆಭರಣ ಬಿಡಿಸಿಕೊಂಡಿದ್ದರು. ಆಭರಣವಿದ್ದ ಬ್ಯಾಗ್ ಕಾರಿನಲ್ಲಿರಿಸಿದ್ದರು.’</p>.<p>‘ಬ್ಯಾಂಕ್ ಮುಂದೆಯೇ ಕಾರು ನಿಲ್ಲಿಸಿದ್ದ ಉದ್ಯಮಿ, ಕೆಲಸ ನಿಮಿತ್ತ ಸಮೀಪದಲ್ಲಿದ್ದ ನರ್ಸರಿಗೆ ಹೋಗಿದ್ದರು. ಅದೇ ಸಂದರ್ಭದಲ್ಲೇ ಆರೋಪಿಗಳು, ಕಾರಿನ ಗಾಜು ಒಡೆದು ಬ್ಯಾಗ್ ಕದ್ದೊಯ್ದಿದ್ದರು. ಉದ್ಯಮಿ ಸ್ಥಳಕ್ಕೆ ಬಂದಾಗ ವಿಷಯ ಗೊತ್ತಾಗಿತ್ತು’ ಎಂದೂ ತಿಳಿಸಿದರು.</p>.<p class="Subhead">ಆಭರಣ ಮಾರಾಟದ ಸುಳಿವು: ‘ಆಭರಣ ಸಮೇತ ಪರಾರಿಯಾಗಿದ್ದ ಆರೋಪಿಗಳು, ತಮಿಳುನಾಡಿನ ಚೆನ್ನೈನಲ್ಲಿ ನೆಲೆಸಿದ್ದರು. ಕದ್ದ ಆಭರಣಗಳನ್ನು ಮಾರಿ, ಫ್ಲ್ಯಾಟ್ನಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದರು’ ಎಂದೂ ಪೊಲೀಸರು ಹೇಳಿದರು.</p>.<p>‘ಚೆನ್ನೈನ ಮೊಹಮ್ಮದ್ ಹರ್ಷದ್ ನದೀಮ್ ಎಂಬಾತನ ಮೂಲಕ ಆಭರಣ ಮಾರಿಸಿದ್ದ ಬಗ್ಗೆ ಮಾಹಿತಿ ಸಿಕ್ಕಿತ್ತು. ನದೀಮ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ಆತ, ಆರೋಪಿ ತಾಸಿನ್ ತಮ್ಮನೆಂಬುದು ಗೊತ್ತಾಯಿತು. ಆತನೇ ಆರೋಪಿಗಳ ಸುಳಿವು ನೀಡಿದ್ದ’ ಎಂದೂ ತಿಳಿಸಿದರು.</p>.<p>‘ಫ್ಲ್ಯಾಟ್ ಮೇಲೆ ದಾಳಿ ಮಾಡಿ ದಂಪತಿಯನ್ನು ಬಂಧಿಸಿ, 978 ಗ್ರಾಂ ತೂಕದ ಚಿನ್ನಾಭರಣ, 176 ಗ್ರಾಂ ವಜ್ರದ ಆಭರಣ ಜಪ್ತಿ ಮಾಡಲಾಯಿತು’ ಎಂದೂ ಹೇಳಿದರು.</p>.<p class="Subhead"><strong>ಗಮನ ಬೇರೆಡೆ ಸೆಳೆದು ಕೃತ್ಯ: ‘</strong>ಓಜಿಕುಪ್ಪಂ ತಂಡದ ಸದಸ್ಯನಾಗಿದ್ದ ರತ್ನಕುಮಾರ್, ಆಗಾಗ ಬೆಂಗಳೂರಿಗೆ ಬರುತ್ತಿದ್ದ. ಬ್ಯಾಂಕ್ಗೆ ಬಂದು ಹೋಗುತ್ತಿದ್ದ ಸಾರ್ವಜನಿಕರ ಮೇಲೆ ಕಣ್ಣಿಟ್ಟು, ಅವರ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡುತ್ತಿದ್ದ. ಈತನ ವಿರುದ್ಧ ವಿವಿಧ ಠಾಣೆಗಳಲ್ಲಿ 26 ಪ್ರಕರಣಗಳು ದಾಖಲಾಗಿದ್ದವು’ ಎಂದೂ ತಿಳಿಸಿದರು.</p>.<p>‘ರತ್ನಕುಮಾರ್ ಕೃತ್ಯಕ್ಕೆ ಪತ್ನಿ ತಾಸಿನ್ ಸಹಕಾರ ನೀಡುತ್ತಿದ್ದಳು. ಇವರ ಜೊತೆ ಮತ್ತಷ್ಟು ಮಂದಿ ಕೃತ್ಯದಲ್ಲಿ ಭಾಗಿಯಾಗಿರುವ ಅನುಮಾನವಿದೆ’ ಎಂದೂ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>