<p><strong>ಬೆಂಗಳೂರು</strong>: ಆನ್ಲೈನ್ ಮೂಲಕ ಈರುಳ್ಳಿ ಖರೀದಿಸಲು ಮುಂದಾಗಿದ್ದ ನಗರದ ನಿವಾಸಿಯೊಬ್ಬರು, ₹ 2.25 ಲಕ್ಷ ಕಳೆದುಕೊಂಡಿದ್ದಾರೆ. ಈ ಬಗ್ಗೆ ದಕ್ಷಿಣ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>‘ಜೆ.ಪಿ. ನಗರದ ಆರ್ಬಿಐ ಲೇಔಟ್ ನಿವಾಸಿ 43 ವರ್ಷದ ಚೇತನ್ ದೂರು ನೀಡಿದ್ದಾರೆ. ಅಪರಿಚಿತ ವ್ಯಕ್ತಿ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.</p>.<p>‘ವ್ಯಾಪಾರಿಯಾಗಿದ್ದ ದೂರುದಾರ, ಫೇಸ್ಬುಕ್ ಸಾಮಾಜಿಕ ಜಾಲತಾಣದಲ್ಲಿ ಖಾತೆ ಹೊಂದಿದ್ದಾರೆ. ಈರುಳ್ಳಿ ಮಾರಾಟಗಾರನೆಂದು ಹೇಳಿದ್ದ ವ್ಯಕ್ತಿಯೊಬ್ಬರು ದೂರುದಾರರನ್ನು ಪರಿಚಯಿಸಿಕೊಂಡಿದ್ದ. ಸಗಟು ಬೆಲೆಯಲ್ಲಿ ಈರುಳ್ಳಿ ಮಾರುವುದಾಗಿ ಹೇಳಿದ್ದ.’</p>.<p>‘ಈರುಳ್ಳಿ ಮಾದರಿ ಕಳುಹಿಸುವಂತೆ ದೂರುದಾರ ಕೇಳಿದ್ದರು. ಈರುಳ್ಳಿ ಫೋಟೊಗಳನ್ನು ಆರೋಪಿ ಕಳುಹಿಸಿದ್ದ. ಮುಂಗಡವಾಗಿ ಹಣ ಜಮೆ ಮಾಡುವಂತೆಯೂ ಹೇಳಿದ್ದ. ಅದನ್ನು ನಂಬಿದ್ದ ದೂರುದಾರ, ಆರೋಪಿ ಹೇಳಿದ್ದ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ ₹ 2.25 ಲಕ್ಷ ಜಮೆ ಮಾಡಿದ್ದರು. ಹಣ ಪಡೆದ ಆರೋಪಿ, ಈರುಳ್ಳಿ ಕಳುಹಿಸದೇ ವಂಚಿಸಿದ್ದಾನೆ’ ಎಂದೂ ಪೊಲೀಸರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಆನ್ಲೈನ್ ಮೂಲಕ ಈರುಳ್ಳಿ ಖರೀದಿಸಲು ಮುಂದಾಗಿದ್ದ ನಗರದ ನಿವಾಸಿಯೊಬ್ಬರು, ₹ 2.25 ಲಕ್ಷ ಕಳೆದುಕೊಂಡಿದ್ದಾರೆ. ಈ ಬಗ್ಗೆ ದಕ್ಷಿಣ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>‘ಜೆ.ಪಿ. ನಗರದ ಆರ್ಬಿಐ ಲೇಔಟ್ ನಿವಾಸಿ 43 ವರ್ಷದ ಚೇತನ್ ದೂರು ನೀಡಿದ್ದಾರೆ. ಅಪರಿಚಿತ ವ್ಯಕ್ತಿ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.</p>.<p>‘ವ್ಯಾಪಾರಿಯಾಗಿದ್ದ ದೂರುದಾರ, ಫೇಸ್ಬುಕ್ ಸಾಮಾಜಿಕ ಜಾಲತಾಣದಲ್ಲಿ ಖಾತೆ ಹೊಂದಿದ್ದಾರೆ. ಈರುಳ್ಳಿ ಮಾರಾಟಗಾರನೆಂದು ಹೇಳಿದ್ದ ವ್ಯಕ್ತಿಯೊಬ್ಬರು ದೂರುದಾರರನ್ನು ಪರಿಚಯಿಸಿಕೊಂಡಿದ್ದ. ಸಗಟು ಬೆಲೆಯಲ್ಲಿ ಈರುಳ್ಳಿ ಮಾರುವುದಾಗಿ ಹೇಳಿದ್ದ.’</p>.<p>‘ಈರುಳ್ಳಿ ಮಾದರಿ ಕಳುಹಿಸುವಂತೆ ದೂರುದಾರ ಕೇಳಿದ್ದರು. ಈರುಳ್ಳಿ ಫೋಟೊಗಳನ್ನು ಆರೋಪಿ ಕಳುಹಿಸಿದ್ದ. ಮುಂಗಡವಾಗಿ ಹಣ ಜಮೆ ಮಾಡುವಂತೆಯೂ ಹೇಳಿದ್ದ. ಅದನ್ನು ನಂಬಿದ್ದ ದೂರುದಾರ, ಆರೋಪಿ ಹೇಳಿದ್ದ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ ₹ 2.25 ಲಕ್ಷ ಜಮೆ ಮಾಡಿದ್ದರು. ಹಣ ಪಡೆದ ಆರೋಪಿ, ಈರುಳ್ಳಿ ಕಳುಹಿಸದೇ ವಂಚಿಸಿದ್ದಾನೆ’ ಎಂದೂ ಪೊಲೀಸರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>