<p><strong>ಬೆಂಗಳೂರು:</strong> ಜೀವಸಾರ್ಥಕತೆ ಪೋರ್ಟಲ್ನಲ್ಲಿ ನೇತ್ರದಾನಕ್ಕೂ ಅವಕಾಶ ಕಲ್ಪಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.</p>.<p>ಜೀವಸಾರ್ಥಕತೆಯು ಆರೋಗ್ಯ ಇಲಾಖೆಯ ಭಾಗವಾಗಿದ್ದು, ಮಾನವ ಅಂಗಾಂಗ ಕಸಿ ಕಾಯ್ದೆಯ ಅನುಷ್ಠಾನದ ಮೇಲ್ವಿಚಾರಣೆ ಮಾಡುತ್ತಿದೆ. ಇಷ್ಟು ದಿನ ಪಿತ್ತಜನಕಾಂಗ, ಹೃದಯ, ಮೂತ್ರಕೋಶ, ಶ್ವಾಸಕೋಶದಂತಹ ಅಂಗಾಂಗಗಳ ನೋಂದಣಿಗೆ ಅವಕಾಶ ನೀಡಲಾಗಿತ್ತು. ಈಗ ನೇತ್ರಗಳ ದಾನಕ್ಕೂ ಅವಕಾಶ ನೀಡಲಾಗಿದೆ.</p>.<p>‘ಮರಣದ ನಂತರ ನೇತ್ರವನ್ನು ಸುಡುವುದು, ಮಣ್ಣು ಮಾಡುವುದು ಮಾಡಬಾರದು. ಬದಲಾಗಿ ದಾನ ಮಾಡುವ ಮೂಲಕ ಅಂಧರ ಬಾಳಿಗೆ ಬೆಳಕಾಗಬೇಕು. ಪ್ರತಿ ವರ್ಷ 20 ಸಾವಿರ ಮಂದಿ ಈ ತೊಂದರೆಗೆ ಒಳಗಾಗುತ್ತಿದ್ದಾರೆ. ಇವರಿಗೆ ದಾನಿಗಳು ನೀಡಿದ ನೇತ್ರಗಳಿಂದ ಮರಳಿ ದೃಷ್ಟಿ ಬರುವಂತೆ ಮಾಡಬಹುದಾಗಿದೆ’ ಎಂದು ಆರೋಗ್ಯ ಇಲಾಖೆ ಹೇಳಿದೆ.</p>.<p>‘ದೇಶದಲ್ಲಿ ಪ್ರತಿ ವರ್ಷ ಸುಮಾರು 45 ಸಾವಿರದಿಂದ 50 ಸಾವಿರದಷ್ಟು ನೇತ್ರಗಳು ಸಂಗ್ರಹವಾಗುತ್ತಿವೆ. ವ್ಯಕ್ತಿಯು ಮರಣ ಹೊಂದಿದ 6 ಗಂಟೆಯೊಳಗೆ ನೇತ್ರಗಳ ಸಂಗ್ರಹಣೆಯಾಗಬೇಕು. ನೇತ್ರದಾನ ಮಾಡುವವರು www.jeevasarthakathe.karna<br />taka.gov.in ಮೂಲಕ ಹೆಸರು ನೋಂದಾಯಿಸಿಕೊಂಡು, ದಾನಿಯ ಕಾರ್ಡನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ’ ಎಂದು ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಜೀವಸಾರ್ಥಕತೆ ಪೋರ್ಟಲ್ನಲ್ಲಿ ನೇತ್ರದಾನಕ್ಕೂ ಅವಕಾಶ ಕಲ್ಪಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.</p>.<p>ಜೀವಸಾರ್ಥಕತೆಯು ಆರೋಗ್ಯ ಇಲಾಖೆಯ ಭಾಗವಾಗಿದ್ದು, ಮಾನವ ಅಂಗಾಂಗ ಕಸಿ ಕಾಯ್ದೆಯ ಅನುಷ್ಠಾನದ ಮೇಲ್ವಿಚಾರಣೆ ಮಾಡುತ್ತಿದೆ. ಇಷ್ಟು ದಿನ ಪಿತ್ತಜನಕಾಂಗ, ಹೃದಯ, ಮೂತ್ರಕೋಶ, ಶ್ವಾಸಕೋಶದಂತಹ ಅಂಗಾಂಗಗಳ ನೋಂದಣಿಗೆ ಅವಕಾಶ ನೀಡಲಾಗಿತ್ತು. ಈಗ ನೇತ್ರಗಳ ದಾನಕ್ಕೂ ಅವಕಾಶ ನೀಡಲಾಗಿದೆ.</p>.<p>‘ಮರಣದ ನಂತರ ನೇತ್ರವನ್ನು ಸುಡುವುದು, ಮಣ್ಣು ಮಾಡುವುದು ಮಾಡಬಾರದು. ಬದಲಾಗಿ ದಾನ ಮಾಡುವ ಮೂಲಕ ಅಂಧರ ಬಾಳಿಗೆ ಬೆಳಕಾಗಬೇಕು. ಪ್ರತಿ ವರ್ಷ 20 ಸಾವಿರ ಮಂದಿ ಈ ತೊಂದರೆಗೆ ಒಳಗಾಗುತ್ತಿದ್ದಾರೆ. ಇವರಿಗೆ ದಾನಿಗಳು ನೀಡಿದ ನೇತ್ರಗಳಿಂದ ಮರಳಿ ದೃಷ್ಟಿ ಬರುವಂತೆ ಮಾಡಬಹುದಾಗಿದೆ’ ಎಂದು ಆರೋಗ್ಯ ಇಲಾಖೆ ಹೇಳಿದೆ.</p>.<p>‘ದೇಶದಲ್ಲಿ ಪ್ರತಿ ವರ್ಷ ಸುಮಾರು 45 ಸಾವಿರದಿಂದ 50 ಸಾವಿರದಷ್ಟು ನೇತ್ರಗಳು ಸಂಗ್ರಹವಾಗುತ್ತಿವೆ. ವ್ಯಕ್ತಿಯು ಮರಣ ಹೊಂದಿದ 6 ಗಂಟೆಯೊಳಗೆ ನೇತ್ರಗಳ ಸಂಗ್ರಹಣೆಯಾಗಬೇಕು. ನೇತ್ರದಾನ ಮಾಡುವವರು www.jeevasarthakathe.karna<br />taka.gov.in ಮೂಲಕ ಹೆಸರು ನೋಂದಾಯಿಸಿಕೊಂಡು, ದಾನಿಯ ಕಾರ್ಡನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ’ ಎಂದು ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>