‘ಸೋಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುನಿನಗರ, ಮುಕ್ಕೋಡ್ಲು, ಗಿರಿಗೌಡನ ದೊಡ್ಡಿ, ತೋಪೂರು, ಗಾಡಿ ಪಾಳ್ಯ, ನೆಲಗುಳಿ ಪಂಚಾಯಿತಿ ವ್ಯಾಪ್ತಿಯ ನಾಗನಾಯಕನಹಳ್ಳಿ, ಬೋಳಾರೆ, ಜಟ್ಟಿಪಾಳ್ಯ, ಕೆರೆ ಚೂಡಹಳ್ಳಿ ಮತ್ತು ತರಳು ಗ್ರಾಮ ಪಂಚಾಯಿತಿಯ ತಟಗುಪ್ಪೆ ಗ್ರಾಮಗಳಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಟೋಲ್ ನಿರ್ಮಾಣವಾದರೆ ಕಗ್ಗಲಿಪುರ ಮತ್ತು ಬೆಂಗಳೂರು ನಗರಕ್ಕೆ ತೆರಳ ಬೇಕಾದರೆ ಟೋಲ್ ಶುಲ್ಕ ಪಾವತಿಸಿ ಹೋಗಬೇಕಾದ ಅನಿವಾರ್ಯತೆ ಎದುರಾಗಲಿದೆ’ ಎಂದು ಪ್ರತಿಭಟನಕಾರರು ದೂರಿದರು.