ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ಎಂ.ಜಯಶಂಕರ್ ಮಾತನಾಡಿ, ‘ಹೊಸ ಶಿಕ್ಷಣ ನೀತಿಯಂತೆ ವಿಜ್ಞಾನದ ವಿದ್ಯಾರ್ಥಿಗಳೂ ಸಂಗೀತ ಹಾಗೂ ಚಿತ್ರಕಲೆ ಕಲಿಯಲು ಅವಕಾಶವಿದೆ. ಉತ್ತಮ ಚಿತ್ರಕಲೆ ಬಿಡಿಸುವವರು ಹೆಚ್ಚಿನ ವರ್ಷ ಜೀವಿಸುತ್ತಾರೆ. ಚಿತ್ರಕಲೆ, ಶಿಲ್ಪಕಲೆ ಮಾನವೀಯತೆ ಬೆಳೆಸುತ್ತದೆ. ಕಲೆಯಿಂದ ಸೃಜನಶೀಲತೆ ಬೆಳೆದು ಸ್ಫೂರ್ತಿ ತುಂಬಲಿದೆ. ಕಲಾ ಶಿಕ್ಷಣಕ್ಕೆ ಪರಿಷತ್ ಕೊಡುಗೆ ಅಪಾರ’ ಎಂದರು.