<p><strong>ಬೆಂಗಳೂರು</strong>: ಹಲವರ ನಾಲಿಗೆಗೆ ರುಚಿಯಾಗಿದ್ದ ಪಾನಿಪುರಿ, ಇತ್ತೀಚಿನ ದಿನಗಳಲ್ಲಿ ತನ್ನ ರುಚಿಯನ್ನೇ ಕಳೆದುಕೊಂಡಿದೆ. ಕೊರೊನಾ ಸೋಂಕು ಹರಡುವ ಭೀತಿಯಿಂದಾಗಿ ಪಾನಿಪುರಿ ತಿನ್ನುವವರ ಸಂಖ್ಯೆ ಕಡಿಮೆಯಾಗಿದ್ದು, ಅದೇ ವ್ಯಾಪಾರ ನಂಬಿಕೊಂಡಿರುವ ಜನ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.</p>.<p>ಶಾಲಾ–ಕಾಲೇಜು, ಉದ್ಯಾನ, ಮಾರುಕಟ್ಟೆ, ಚಿತ್ರಮಂದಿರ, ಮಾಲ್, ನಿಲ್ದಾಣ, ತಂಗುದಾಣ, ಪ್ರಮುಖ ರಸ್ತೆ... ಹೀಗೆ ಜನಸಂದಣಿ ಇರುವ ಜಾಗದಲ್ಲಿ ಪುಟ್ಟದೊಂದು ಪಾನಿಪುರಿ ಅಂಗಡಿ ಇಟ್ಟುಕೊಂಡು ಜೀವನ ಕಟ್ಟಿಕೊಂಡಿದ್ದ ಜನ ಇಂದು ಊರು ಬಿಡುತ್ತಿದ್ದಾರೆ.</p>.<p>ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಳಿತ ಉಂಟಾಗುತ್ತಿದ್ದಂತೆ, ಪಾನಿಪುರಿ ಅಂಗಡಿಗಳತ್ತ ಜನ ಮುಖ ಹಾಕುತ್ತಿಲ್ಲ. ‘ಪೂರಿ’ ಪೊಟ್ಟಣ ಹಾಗೂ ಪಾತ್ರೆಗಳಲ್ಲಿ ಪಾನೀಯ ಸಿದ್ಧಪಡಿಸಿಟ್ಟುಕೊಂಡ ವ್ಯಾಪಾರಿ, ಗ್ರಾಹಕರಿಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.</p>.<p>ಸ್ಥಳೀಯರ ಜೊತೆಯಲ್ಲಿ ರಾಜಸ್ಥಾನ, ಮಧ್ಯಪ್ರದೇಶ, ಬಿಹಾರ, ಗುಜರಾತ್ ಹಾಗೂ ಇತರೆ ರಾಜ್ಯಗಳ ಯುವಕರೂ ಪಾನಿಪುರಿ ಅಂಗಡಿ ನಡೆಸುತ್ತಿದ್ದಾರೆ. ಬಹುತೇಕರು, ಹೂಡಿದ್ದ ಬಂಡವಾಳ ವಾಪಸು ತೆಗೆಯಲು ಪರದಾಡುತ್ತಿದ್ದಾರೆ.</p>.<p>ವಿಜಯನಗರ, ರಾಜಾಜಿನಗರ, ಮಾಗಡಿ ರಸ್ತೆ, ಜಯನಗರ, ಹನುಮಂತನಗರ, ಬಸವನಗುಡಿ, ಕುಮಾರಸ್ವಾಮಿ ಲೇಔಟ್, ಕೆಂಗೇರಿ, ರಾಜರಾಜೇಶ್ವರಿನಗರ, ಅಶೋಕನಗರ, ಇಂದಿರಾನಗರ, ಚರ್ಚ್ಸ್ಟ್ರೀಟ್, ಕೋರಮಂಗಲ ಹಾಗೂ ಸುತ್ತಮುತ್ತ ಸ್ಥಳಗಳಲ್ಲಿ ಪಾನಿಪುರಿ ವ್ಯಾಪಾರಿಗಳ ಸಂಖ್ಯೆಯೂ ಕಡಿಮೆ ಆಗಿದೆ. ಅಲ್ಲಲ್ಲಿ ಒಂದೊಂದು ಅಂಗಡಿಗಳಿದ್ದರೂ ಅಲ್ಲಿ ಗ್ರಾಹಕರ ಸುಳಿವಿಲ್ಲ.</p>.<p>‘ಬೆಂಗಳೂರಿಗೆ ಬಂದು 10 ವರ್ಷವಾಗಿದ್ದು, ಪಾನಿಪುರಿ ವ್ಯಾಪಾರದಿಂದ ಬದುಕು ಕಟ್ಟಿಕೊಂಡಿದ್ದೇನೆ. ಕೋವಿಡ್ಗೂ ಮುನ್ನ ದಿನಕ್ಕೆ 2 ಸಾವಿರದಿಂದ 5 ಸಾವಿರ ವ್ಯಾಪಾರ ಆಗುತ್ತಿತ್ತು. ಕೋವಿಡ್ ಅಲೆಗಳು ಶುರುವಾದಾಗಿನಿಂದ ₹ 500 ವ್ಯಾಪಾರವೂ ಕಷ್ಟವಾಗಿದೆ’ ಎಂದು ವಿಜಯನಗರದ ಪಾನಿಪುರಿ ವ್ಯಾಪಾರಿ ಅಕ್ಷಯ್ಕುಮಾರ್ ಹೇಳಿದರು.</p>.<p>ರಾಜಾಜಿನಗರದ ರಾಜಕುಮಾರ್ ರಸ್ತೆಯಲ್ಲಿ ಪಾನಿಪುರಿ ಮಾರುವ ಚರಣ್ಸಿಂಗ್, ‘ಪಾನಿಪುರಿ ತಿನ್ನಲು ಜನರ ದಂಡೇ ಬರುತ್ತಿತ್ತು. ಅದರಲ್ಲೂ ಮಹಿಳೆಯರೇ ಹೆಚ್ಚು ಪಾನಿಪುರಿ ತಿನ್ನುತ್ತಿದ್ದರು. ಇದೀಗ ಶೇ 90ರಷ್ಟು ಗ್ರಾಹಕರು ಅಂಗಡಿಗೆ ಬರುತ್ತಿಲ್ಲ’ ಎಂದರು.</p>.<p>’ಶಾಲೆ, ಕಾಲೇಜು, ಟ್ಯೂಶನ್, ಶಿಕ್ಷಣ ಸಂಸ್ಥೆಗಳು, ಪರೀಕ್ಷಾ ತರಬೇತಿ ಕೇಂದ್ರಗಳು ಎಲ್ಲವೂ ಆಗಾಗ ಬಂದ್ ಆಗುತ್ತವೆ. ರಸ್ತೆಯಲ್ಲೂ ಜನರಿಲ್ಲ. ಪೂರಿ ತಂದರೂ ವ್ಯಾಪಾರವಿಲ್ಲ‘ ಎಂದು ತಿಳಿಸಿದರು.</p>.<p>ಸುಬ್ರಹ್ಮಣ್ಯನಗರದ ಪಾನಿಪುರಿ ವ್ಯಾಪಾರಿ ಬಲರಾಮ್, ‘ನಾನು ರಾಜಸ್ಥಾನದವನು. ಈ ವ್ಯಾಪಾರ, ಕುಟುಂಬದ 7 ಮಂದಿಯನ್ನು ಸಾಕುವ ಶಕ್ತಿ ನೀಡಿತ್ತು. ಈಗ ಒಬ್ಬನ ಹೊಟ್ಟೆ ತುಂಬಿಸಿಕೊಳ್ಳುವುದೇ ಕಷ್ಟವಾಗಿದೆ’ ಎಂದು ಬೇಸರಗೊಂಡರು.</p>.<p>‘ಪಾನಿಪುರಿ ತಿನ್ನುವುದರಿಂದ ಸೋಂಕು ಹರಡುವುದಾಗಿ ಕೆಲವರು ಸುದ್ದಿ ಹಬ್ಬಿಸಿದರು. ಅಂದಿನಿಂದ ವ್ಯಾಪಾರವಿಲ್ಲ. ಹಲವು ವ್ಯಾಪಾರಿಗಳು, ಅಂಗಡಿ ಮುಚ್ಚಿ ಊರಿಗೆ ಹೋಗಿದ್ದಾರೆ. ಕೆಲವೇ ದಿನಗಳಲ್ಲಿ ನಾನೂ ಹೋಗಲಿದ್ದೇನೆ’ ಎಂದೂ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಹಲವರ ನಾಲಿಗೆಗೆ ರುಚಿಯಾಗಿದ್ದ ಪಾನಿಪುರಿ, ಇತ್ತೀಚಿನ ದಿನಗಳಲ್ಲಿ ತನ್ನ ರುಚಿಯನ್ನೇ ಕಳೆದುಕೊಂಡಿದೆ. ಕೊರೊನಾ ಸೋಂಕು ಹರಡುವ ಭೀತಿಯಿಂದಾಗಿ ಪಾನಿಪುರಿ ತಿನ್ನುವವರ ಸಂಖ್ಯೆ ಕಡಿಮೆಯಾಗಿದ್ದು, ಅದೇ ವ್ಯಾಪಾರ ನಂಬಿಕೊಂಡಿರುವ ಜನ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.</p>.<p>ಶಾಲಾ–ಕಾಲೇಜು, ಉದ್ಯಾನ, ಮಾರುಕಟ್ಟೆ, ಚಿತ್ರಮಂದಿರ, ಮಾಲ್, ನಿಲ್ದಾಣ, ತಂಗುದಾಣ, ಪ್ರಮುಖ ರಸ್ತೆ... ಹೀಗೆ ಜನಸಂದಣಿ ಇರುವ ಜಾಗದಲ್ಲಿ ಪುಟ್ಟದೊಂದು ಪಾನಿಪುರಿ ಅಂಗಡಿ ಇಟ್ಟುಕೊಂಡು ಜೀವನ ಕಟ್ಟಿಕೊಂಡಿದ್ದ ಜನ ಇಂದು ಊರು ಬಿಡುತ್ತಿದ್ದಾರೆ.</p>.<p>ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಳಿತ ಉಂಟಾಗುತ್ತಿದ್ದಂತೆ, ಪಾನಿಪುರಿ ಅಂಗಡಿಗಳತ್ತ ಜನ ಮುಖ ಹಾಕುತ್ತಿಲ್ಲ. ‘ಪೂರಿ’ ಪೊಟ್ಟಣ ಹಾಗೂ ಪಾತ್ರೆಗಳಲ್ಲಿ ಪಾನೀಯ ಸಿದ್ಧಪಡಿಸಿಟ್ಟುಕೊಂಡ ವ್ಯಾಪಾರಿ, ಗ್ರಾಹಕರಿಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.</p>.<p>ಸ್ಥಳೀಯರ ಜೊತೆಯಲ್ಲಿ ರಾಜಸ್ಥಾನ, ಮಧ್ಯಪ್ರದೇಶ, ಬಿಹಾರ, ಗುಜರಾತ್ ಹಾಗೂ ಇತರೆ ರಾಜ್ಯಗಳ ಯುವಕರೂ ಪಾನಿಪುರಿ ಅಂಗಡಿ ನಡೆಸುತ್ತಿದ್ದಾರೆ. ಬಹುತೇಕರು, ಹೂಡಿದ್ದ ಬಂಡವಾಳ ವಾಪಸು ತೆಗೆಯಲು ಪರದಾಡುತ್ತಿದ್ದಾರೆ.</p>.<p>ವಿಜಯನಗರ, ರಾಜಾಜಿನಗರ, ಮಾಗಡಿ ರಸ್ತೆ, ಜಯನಗರ, ಹನುಮಂತನಗರ, ಬಸವನಗುಡಿ, ಕುಮಾರಸ್ವಾಮಿ ಲೇಔಟ್, ಕೆಂಗೇರಿ, ರಾಜರಾಜೇಶ್ವರಿನಗರ, ಅಶೋಕನಗರ, ಇಂದಿರಾನಗರ, ಚರ್ಚ್ಸ್ಟ್ರೀಟ್, ಕೋರಮಂಗಲ ಹಾಗೂ ಸುತ್ತಮುತ್ತ ಸ್ಥಳಗಳಲ್ಲಿ ಪಾನಿಪುರಿ ವ್ಯಾಪಾರಿಗಳ ಸಂಖ್ಯೆಯೂ ಕಡಿಮೆ ಆಗಿದೆ. ಅಲ್ಲಲ್ಲಿ ಒಂದೊಂದು ಅಂಗಡಿಗಳಿದ್ದರೂ ಅಲ್ಲಿ ಗ್ರಾಹಕರ ಸುಳಿವಿಲ್ಲ.</p>.<p>‘ಬೆಂಗಳೂರಿಗೆ ಬಂದು 10 ವರ್ಷವಾಗಿದ್ದು, ಪಾನಿಪುರಿ ವ್ಯಾಪಾರದಿಂದ ಬದುಕು ಕಟ್ಟಿಕೊಂಡಿದ್ದೇನೆ. ಕೋವಿಡ್ಗೂ ಮುನ್ನ ದಿನಕ್ಕೆ 2 ಸಾವಿರದಿಂದ 5 ಸಾವಿರ ವ್ಯಾಪಾರ ಆಗುತ್ತಿತ್ತು. ಕೋವಿಡ್ ಅಲೆಗಳು ಶುರುವಾದಾಗಿನಿಂದ ₹ 500 ವ್ಯಾಪಾರವೂ ಕಷ್ಟವಾಗಿದೆ’ ಎಂದು ವಿಜಯನಗರದ ಪಾನಿಪುರಿ ವ್ಯಾಪಾರಿ ಅಕ್ಷಯ್ಕುಮಾರ್ ಹೇಳಿದರು.</p>.<p>ರಾಜಾಜಿನಗರದ ರಾಜಕುಮಾರ್ ರಸ್ತೆಯಲ್ಲಿ ಪಾನಿಪುರಿ ಮಾರುವ ಚರಣ್ಸಿಂಗ್, ‘ಪಾನಿಪುರಿ ತಿನ್ನಲು ಜನರ ದಂಡೇ ಬರುತ್ತಿತ್ತು. ಅದರಲ್ಲೂ ಮಹಿಳೆಯರೇ ಹೆಚ್ಚು ಪಾನಿಪುರಿ ತಿನ್ನುತ್ತಿದ್ದರು. ಇದೀಗ ಶೇ 90ರಷ್ಟು ಗ್ರಾಹಕರು ಅಂಗಡಿಗೆ ಬರುತ್ತಿಲ್ಲ’ ಎಂದರು.</p>.<p>’ಶಾಲೆ, ಕಾಲೇಜು, ಟ್ಯೂಶನ್, ಶಿಕ್ಷಣ ಸಂಸ್ಥೆಗಳು, ಪರೀಕ್ಷಾ ತರಬೇತಿ ಕೇಂದ್ರಗಳು ಎಲ್ಲವೂ ಆಗಾಗ ಬಂದ್ ಆಗುತ್ತವೆ. ರಸ್ತೆಯಲ್ಲೂ ಜನರಿಲ್ಲ. ಪೂರಿ ತಂದರೂ ವ್ಯಾಪಾರವಿಲ್ಲ‘ ಎಂದು ತಿಳಿಸಿದರು.</p>.<p>ಸುಬ್ರಹ್ಮಣ್ಯನಗರದ ಪಾನಿಪುರಿ ವ್ಯಾಪಾರಿ ಬಲರಾಮ್, ‘ನಾನು ರಾಜಸ್ಥಾನದವನು. ಈ ವ್ಯಾಪಾರ, ಕುಟುಂಬದ 7 ಮಂದಿಯನ್ನು ಸಾಕುವ ಶಕ್ತಿ ನೀಡಿತ್ತು. ಈಗ ಒಬ್ಬನ ಹೊಟ್ಟೆ ತುಂಬಿಸಿಕೊಳ್ಳುವುದೇ ಕಷ್ಟವಾಗಿದೆ’ ಎಂದು ಬೇಸರಗೊಂಡರು.</p>.<p>‘ಪಾನಿಪುರಿ ತಿನ್ನುವುದರಿಂದ ಸೋಂಕು ಹರಡುವುದಾಗಿ ಕೆಲವರು ಸುದ್ದಿ ಹಬ್ಬಿಸಿದರು. ಅಂದಿನಿಂದ ವ್ಯಾಪಾರವಿಲ್ಲ. ಹಲವು ವ್ಯಾಪಾರಿಗಳು, ಅಂಗಡಿ ಮುಚ್ಚಿ ಊರಿಗೆ ಹೋಗಿದ್ದಾರೆ. ಕೆಲವೇ ದಿನಗಳಲ್ಲಿ ನಾನೂ ಹೋಗಲಿದ್ದೇನೆ’ ಎಂದೂ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>