ತುಮಕೂರಿನ ಸಿದ್ಧಗಂಗಾ ಮಹಿಳಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಿ.ಎನ್. ಯೋಗೀಶ್ವರಪ್ಪ ಮಾತನಾಡಿ, ‘ದೇಶ ವಿಭಜನೆಯ ಬಿಸಿ ದಕ್ಷಿಣ ಭಾರತದ ಜನತೆಗೆ ಅಷ್ಟಾಗಿ ತಟ್ಟಲಿಲ್ಲ. 20ನೇ ಶತಮಾನದಲ್ಲಿ ಬ್ರಿಟಿಷರು ನಾಲ್ಕು ದೇಶಗಳನ್ನು ವಿಭಜನೆ ಮಾಡಿದರು. ಇದರಲ್ಲಿ ಭಾರತದ ವಿಭಜನೆ ಭಿನ್ನವಾದದ್ದಾಗಿದೆ. ವಿಭಜನೆಯ ಬಳಿಕ ಪಂಜಾಬ್, ರಾಜಸ್ಥಾನ ಸೇರಿದಂತೆ ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ಹಿಂಸೆಗಳು ನಡೆದವು’ ಎಂದರು.