‘ಶನಿವಾರ ರಾತ್ರಿ ಹೋಟೆಲ್ ಕೆಲಸ ಮುಗಿಸಿ ದೇವೇಂದ್ರ ಅವರು ಮನೆಗೆ ಹೊರಟಿದ್ದರು. ಟಿ.ಸಿ.ಪಾಳ್ಯದಲ್ಲಿ ರಸ್ತೆ ಮಧ್ಯೆಯೇ ಕಾರು ನಿಲ್ಲಿಸಿಕೊಂಡಿದ್ದ ಯುವಕರು, ಮದ್ಯದ ಪಾರ್ಟಿ ಮಾಡುತ್ತಿದ್ದರು. ಜೋರಾಗಿ ಕೂಗಾಡುತ್ತಿದ್ದರು. ಅದನ್ನು ಪ್ರಶ್ನಿಸಿದ್ದ ದೇವೇಂದ್ರ, ಯುವಕರ ಬಳಿ ಹೋಗಿ ಬುದ್ದಿವಾದ ಹೇಳಿದ್ದರು. ಅಷ್ಟಕ್ಕೆ ಕೋಪಗೊಂಡ ಯುವಕರು, ದೇವೇಂದ್ರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದರು.’