‘ಇದೇ 11ರಂದು ರಾತ್ರಿ 7ರ ಸುಮಾರಿಗೆ ತರಕಾರಿ ತರಲು ಹೊರಗೆ ಹೋಗಲೆಂದು ಆಶಾ ರಾಜ್ ಅವರು ಮನೆಯ ಮುಖ್ಯಬಾಗಿಲು ತೆರದಿದ್ದರು. ಅದೇ ವೇಳೆಯೇ ಒಳಗೆ ನುಗ್ಗಿದ್ದ ದುಷ್ಕರ್ಮಿ, ಮೈ ಮೇಲೆ ಪೆಟ್ರೋಲ್ ಎರಚಿದ್ದ. ಬೆಂಕಿ ಪೊಟ್ಟಣವನ್ನು ಕೈಯಲ್ಲಿ ಹಿಡಿದು, ಬೆಂಕಿ ಕಡ್ಡಿ ಗೀರುವುದಾಗಿ ಬೆದರಿಸಲಾರಂಭಿಸಿದ್ದ. ಈ ಸಂಗತಿಯನ್ನು ಆಶಾ ರಾಜ್ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ಹೇಳಿದರು.