<p><strong>ಬೆಂಗಳೂರು:</strong> ಪ್ರಧಾನಿ ನರೇಂದ್ರ ಮೋದಿ ಅವರು ನಗರದಲ್ಲಿ ಹಾದುಹೋದ 14 ಕಿಲೋ ಮೀಟರ್ ರಸ್ತೆ ಅಭಿವೃದ್ಧಿಗೆ ಬಿಬಿಎಂಪಿ ₹23.50 ಕೋಟಿ ಖರ್ಚು ಮಾಡಿದೆ. ಆರು ಹೆಲಿಪ್ಯಾಡ್ ನಿರ್ಮಿಸಲು ತಲಾ ಒಂದಕ್ಕೆ ₹8 ಲಕ್ಷದಂತೆ ಒಟ್ಟು ₹48 ಲಕ್ಷ ವೆಚ್ಚವಾಗಿದೆ.</p>.<p>‘ಪ್ರಧಾನಿ ಅವರು ಬರುವ ಕಾರ್ಯಕ್ರಮ 15 ದಿನಗಳ ಮುಂಚೆಯೇ ನಿಗದಿಯಾಗಿತ್ತು. ಅವರು ಬಂದು ಹೋಗುವ ದಾರಿಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವುದು ಶಿಷ್ಟಾಚಾರ. ಮುಖ್ಯ ಆಯುಕ್ತರ ವಿವೇಚನೆಗೆ ಮೀಸಲಿಟ್ಟಿದ್ದ ಅನುದಾನ ಬಳಸಿ ಈ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಬಿಬಿಎಂಪಿ ಆಡಳಿತಾಧಿಕಾರಿ ಮತ್ತು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಂದ ಅನುಮೋದನೆ ಪಡೆಯಲಾಗಿದೆ’ ಎಂದು ಬಿಬಿಎಂಪಿ ವಿಶೇಷ ಆಯುಕ್ತ(ಯೋಜನೆ) ಎನ್.ಬಿ. ರವೀಂದ್ರ ತಿಳಿಸಿದರು.</p>.<p>‘ಬಳ್ಳಾರಿ ರಸ್ತೆಯಲ್ಲಿ 2.4 ಕಿಲೋ ಮೀಟರ್ ಅಭಿವೃದ್ಧಿಗೆ ₹4.06 ಕೋಟಿ, ತುಮಕೂರು ರಸ್ತೆಯಲ್ಲಿ 900 ಮೀಟರ್ಗೆ ₹1.55 ಕೋಟಿ, ಜ್ಞಾನಭಾರತಿ ಆವರಣದಲ್ಲಿ 3.60 ಕಿ.ಮೀಗೆ ₹6.05 ಕೋಟಿ, ಮೈಸೂರು ರಸ್ತೆಯಲ್ಲಿ 150 ಮೀಟರ್ಗೆ ₹35 ಲಕ್ಷ ಮತ್ತು ಕೊಮ್ಮಘಟ್ಟ ರಸ್ತೆಯಲ್ಲಿ 7 ಕಿ.ಮೀಗೆ ₹11.50 ಕೋಟಿ ವೆಚ್ಚ ಮಾಡಲಾಗಿದೆ’ ಎಂದು ವಿವರಿಸಿದರು.</p>.<p>‘ಸರ್ವೀಸ್ ರಸ್ತೆಗಳು, ಪಾದಚಾರಿ ಮಾರ್ಗಗಳು, ಬೀದಿ ದೀಪಗಳ ಅಳವಡಿಕೆ, ರಸ್ತೆ ವಿಭಜಕ, ಅಕ್ಕ–ಪಕ್ಕದ ತಿರುವುಗಳೂ ಅಭಿವೃದ್ಧಿಗೊಂಡಿವೆ. ವಾರದಿಂದ ಹಗಲು–ರಾತ್ರಿ ಕಾಮಗಾರಿ ನಿರ್ವಹಿಸಲಾಯಿತು’ ಎಂದರು.</p>.<p>‘ಈಗ ಅಭಿವೃದ್ಧಿಪಡಿಸಿರುವ ರಸ್ತೆಗಳಲ್ಲೇ ವೈಟ್ ಟಾಪಿಂಗ್ ರಸ್ತೆ ನಿರ್ಮಿಸುವ ಉದ್ದೇಶವಿದ್ದರೆ ಪರಿಶೀಲಿಸುತ್ತೇವೆ. ಯಾವುದೇ ಕಾರಣಕ್ಕೂ ಕಾಮಗಾರಿ ಪುನರಾವರ್ತನೆಗೆ ಅವಕಾಶ ನೀಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.</p>.<p>‘ರಸ್ತೆ ಗುಂಡಿಗಳನ್ನು ಮುಚ್ಚಲು ಮಳೆಯ ಕಾರಣ ನೀಡಲಾಗುತ್ತದೆ. ಈ ರಸ್ತೆಗಳ ಅಭಿವೃದ್ಧಿಗೆ ಮಳೆ ಅಡ್ಡಿಯಾಗಲಿಲ್ಲವೇ’ ಎಂಬ ಪ್ರಶ್ನೆಗೆ, ‘ಸಾಮಾನ್ಯ ಜನ ಓಡಾಡುವ ರಸ್ತೆಗಳನ್ನು ನಿರಂತರವಾಗಿ ಅಭಿವೃದ್ಧಿಪಡಿಸಲಾಗಿದೆ. ಪ್ರಧಾನಿ ಬಂದು ಹೋದ ರಸ್ತೆಗಳನ್ನು ಆದ್ಯತೆ ಮೇರೆಗೆ ಅಭಿವೃದ್ಧಿಪಡಿಸಲಾಗಿದೆ’ ಎಂದು ಉತ್ತರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಪ್ರಧಾನಿ ನರೇಂದ್ರ ಮೋದಿ ಅವರು ನಗರದಲ್ಲಿ ಹಾದುಹೋದ 14 ಕಿಲೋ ಮೀಟರ್ ರಸ್ತೆ ಅಭಿವೃದ್ಧಿಗೆ ಬಿಬಿಎಂಪಿ ₹23.50 ಕೋಟಿ ಖರ್ಚು ಮಾಡಿದೆ. ಆರು ಹೆಲಿಪ್ಯಾಡ್ ನಿರ್ಮಿಸಲು ತಲಾ ಒಂದಕ್ಕೆ ₹8 ಲಕ್ಷದಂತೆ ಒಟ್ಟು ₹48 ಲಕ್ಷ ವೆಚ್ಚವಾಗಿದೆ.</p>.<p>‘ಪ್ರಧಾನಿ ಅವರು ಬರುವ ಕಾರ್ಯಕ್ರಮ 15 ದಿನಗಳ ಮುಂಚೆಯೇ ನಿಗದಿಯಾಗಿತ್ತು. ಅವರು ಬಂದು ಹೋಗುವ ದಾರಿಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವುದು ಶಿಷ್ಟಾಚಾರ. ಮುಖ್ಯ ಆಯುಕ್ತರ ವಿವೇಚನೆಗೆ ಮೀಸಲಿಟ್ಟಿದ್ದ ಅನುದಾನ ಬಳಸಿ ಈ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಬಿಬಿಎಂಪಿ ಆಡಳಿತಾಧಿಕಾರಿ ಮತ್ತು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಂದ ಅನುಮೋದನೆ ಪಡೆಯಲಾಗಿದೆ’ ಎಂದು ಬಿಬಿಎಂಪಿ ವಿಶೇಷ ಆಯುಕ್ತ(ಯೋಜನೆ) ಎನ್.ಬಿ. ರವೀಂದ್ರ ತಿಳಿಸಿದರು.</p>.<p>‘ಬಳ್ಳಾರಿ ರಸ್ತೆಯಲ್ಲಿ 2.4 ಕಿಲೋ ಮೀಟರ್ ಅಭಿವೃದ್ಧಿಗೆ ₹4.06 ಕೋಟಿ, ತುಮಕೂರು ರಸ್ತೆಯಲ್ಲಿ 900 ಮೀಟರ್ಗೆ ₹1.55 ಕೋಟಿ, ಜ್ಞಾನಭಾರತಿ ಆವರಣದಲ್ಲಿ 3.60 ಕಿ.ಮೀಗೆ ₹6.05 ಕೋಟಿ, ಮೈಸೂರು ರಸ್ತೆಯಲ್ಲಿ 150 ಮೀಟರ್ಗೆ ₹35 ಲಕ್ಷ ಮತ್ತು ಕೊಮ್ಮಘಟ್ಟ ರಸ್ತೆಯಲ್ಲಿ 7 ಕಿ.ಮೀಗೆ ₹11.50 ಕೋಟಿ ವೆಚ್ಚ ಮಾಡಲಾಗಿದೆ’ ಎಂದು ವಿವರಿಸಿದರು.</p>.<p>‘ಸರ್ವೀಸ್ ರಸ್ತೆಗಳು, ಪಾದಚಾರಿ ಮಾರ್ಗಗಳು, ಬೀದಿ ದೀಪಗಳ ಅಳವಡಿಕೆ, ರಸ್ತೆ ವಿಭಜಕ, ಅಕ್ಕ–ಪಕ್ಕದ ತಿರುವುಗಳೂ ಅಭಿವೃದ್ಧಿಗೊಂಡಿವೆ. ವಾರದಿಂದ ಹಗಲು–ರಾತ್ರಿ ಕಾಮಗಾರಿ ನಿರ್ವಹಿಸಲಾಯಿತು’ ಎಂದರು.</p>.<p>‘ಈಗ ಅಭಿವೃದ್ಧಿಪಡಿಸಿರುವ ರಸ್ತೆಗಳಲ್ಲೇ ವೈಟ್ ಟಾಪಿಂಗ್ ರಸ್ತೆ ನಿರ್ಮಿಸುವ ಉದ್ದೇಶವಿದ್ದರೆ ಪರಿಶೀಲಿಸುತ್ತೇವೆ. ಯಾವುದೇ ಕಾರಣಕ್ಕೂ ಕಾಮಗಾರಿ ಪುನರಾವರ್ತನೆಗೆ ಅವಕಾಶ ನೀಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.</p>.<p>‘ರಸ್ತೆ ಗುಂಡಿಗಳನ್ನು ಮುಚ್ಚಲು ಮಳೆಯ ಕಾರಣ ನೀಡಲಾಗುತ್ತದೆ. ಈ ರಸ್ತೆಗಳ ಅಭಿವೃದ್ಧಿಗೆ ಮಳೆ ಅಡ್ಡಿಯಾಗಲಿಲ್ಲವೇ’ ಎಂಬ ಪ್ರಶ್ನೆಗೆ, ‘ಸಾಮಾನ್ಯ ಜನ ಓಡಾಡುವ ರಸ್ತೆಗಳನ್ನು ನಿರಂತರವಾಗಿ ಅಭಿವೃದ್ಧಿಪಡಿಸಲಾಗಿದೆ. ಪ್ರಧಾನಿ ಬಂದು ಹೋದ ರಸ್ತೆಗಳನ್ನು ಆದ್ಯತೆ ಮೇರೆಗೆ ಅಭಿವೃದ್ಧಿಪಡಿಸಲಾಗಿದೆ’ ಎಂದು ಉತ್ತರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>