‘ನಾನು ಮನೆ ಬಳಿ ಕುಳಿತಿದ್ದೆ. ಸ್ಥಳಕ್ಕೆ ಬಂದಿದ್ದ ಆರ್.ಎಂ.ಸಿ ಯಾರ್ಡ್ ಪೊಲೀಸರು, ನನ್ನನ್ನು ಠಾಣೆಗೆ ಕರೆದೊಯ್ದರು. ಗಾಂಜಾ ಬೆರೆಸಿದ್ದ ಸಿಗರೇಟ್ ಸೇದುವಂತೆ ಒತ್ತಾಯಿಸಿದ್ದರು. ನಿರಾಕರಿಸಿದ್ದಕ್ಕೆ ಬೈಯ್ದು ಕಿರುಕುಳ ನೀಡಿದರು. ನಂತರ, ಬಲವಂತವಾಗಿ ಸಿಗರೇಟ್ ಸೇದುವಂತೆ ಮಾಡಿದರು. ಅಸ್ವಸ್ಥಗೊಂಡಿದ್ದ ನನ್ನನ್ನು ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆ ಮಾಡಿಸಿದರು. ತಾವು ಕರೆದಾಗ ಠಾಣೆಗೆ ಬರುವಂತೆ ಹೇಳಿ ಮನೆಗೆ ಕಳುಹಿಸಿದರು’ ಎಂದೂ ಶಿವರಾಜ್ ವಿಡಿಯೊದಲ್ಲಿ ಆರೋಪಿಸಿದ್ದಾರೆ.