ಬೆದರಿಕೆ ಪತ್ರ ಬರೆದ ವ್ಯಕ್ತಿ ಉತ್ತರಪ್ರದೇಶದ ರಾಜೇಂದ್ರ ಎಂಬುದು ಗೊತ್ತಾಗಿದೆ. ಆತ ತನ್ನ ಮಾವ, ಪಶ್ಚಿಮ ದೆಹಲಿಯ ನಿವಾಸಿ ಹದರ್ಶನ್ ಸಿಂಗ್ ನಾಗಪಾಲ್ ವಿರುದ್ಧ ಸೇಡು ತೀರಿಸಿಕೊಳ್ಳಲು ಬೆದರಿಕೆ ಪತ್ರ ಬರೆದಿದ್ದಾನೆ. ಕರ್ನಾಟಕ ಮಾತ್ರವಲ್ಲ, ದೆಹಲಿ, ಉತ್ತರ ಪ್ರದೇಶದ ಕೆಲವು ಸರ್ಕಾರಿ ಕಚೇರಿಗಳಿಗೂ ಇದೇ ರೀತಿಯ ಪತ್ರಗಳನ್ನು ಆರೋಪಿ ಬರೆದಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.