ಮಾದಕ ವ್ಯಸನಕ್ಕೆ ಒಳಗಾಗಿ ಮಾನಸಿಕ ಕಾಯಿಲೆಗೆ ತುತ್ತಾಗುತ್ತಿರುವ ಯುವಕರನ್ನು ಗುರುತಿಸಿರುವ ಪೊಲೀಸರು, ಅವರೆಲ್ಲರಿಗೆ ಮನೋವೈದ್ಯರಿಂದ ಪಾಠ ಮಾಡಿಸುತ್ತಿದ್ದಾರೆ. ವಾರಕ್ಕೊಮ್ಮೆ ವೈದ್ಯಕೀಯ ತಪಾಸಣೆ ನಡೆಸಿ, ಯುವಕರ ವರ್ತನೆಗಳ ಮೇಲೆ ಕಣ್ಣಿಡುತ್ತಿದ್ದಾರೆ. ಬ್ಯಾಡರಹಳ್ಳಿ ಠಾಣೆಯಲ್ಲಿ ಸೋಮವಾರ ಮೊದಲ ಬಾರಿಗೆ ಆಯೋಜಿಸಿದ್ದ ‘ನವಚೇತನ’ ಕಾರ್ಯಕ್ರಮದಲ್ಲಿ 83 ಯುವಕರು ಪಾಲ್ಗೊಂಡಿದ್ದರು.