‘ಪ್ರಜಾವಾಣಿ’ಗೆ ಸ್ವಾಮೀಜಿ ಶಿಫಾರಸು ಪತ್ರ!
‘ಆರಂಭದ ದಿನಗಳಲ್ಲಿ ನಾನು ಕವಿತೆಗಳನ್ನು ಬರೆಯುತ್ತಿದ್ದೆ. ನನ್ನ ಕವಿತೆ ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಪ್ರಕಟವಾಗಬೇಕೆಂಬ ಆಸೆ ಇತ್ತು. ಇದಕ್ಕಾಗಿ ಶಿವಕುಮಾರ ಸ್ವಾಮೀಜಿ ಅವರನ್ನು ಕೇಳಿ ಕೊಂಡೆ. ನನ್ನ ಆಶಯದಂತೆ ಅವರು ‘ಪ್ರಜಾವಾಣಿ’ ಪತ್ರಿಕೆಗೆ ಕವಿತೆ ಪ್ರಕಟಿಸಲು ಸಂಪಾದಕರಿಗೆ ಶಿಫಾರಸು ಪತ್ರ ಬರೆದರು. ಆ ಕವಿತೆ ಪ್ರಕಟವಾಗಿದೆಯೇ ಎಂಬುದನ್ನು ಕ್ಯಾತಸಂದ್ರದ ಲ್ಲಿದ್ದ ವೆಂಕಟೇಶ್ವರ ಸಲೂನ್ಗೆ ಬರುತ್ತಿದ್ದ ಪತ್ರಿಕೆ ನೋಡುತ್ತಿದ್ದೆ. ಆ ಸಂದರ್ಭದಲ್ಲಿ ಯು.ಆರ್. ಅನಂತಮೂರ್ತಿ ಅವರು ‘ನವಿಲು’ ಕಥೆ ಪ್ರಕಟವಾಗಿತ್ತು. ಅದನ್ನು ಹತ್ತಾರು ಬಾರಿ ಓದಿದ್ದೆ. ಅದರಿಂದಲೇ ನಾನು ಕಥೆಗಾರನಾದೆ’ ಎಂದು ಕುಂ. ವೀರಭದ್ರಪ್ಪ ಅವರು ಸ್ಮರಿಸಿಕೊಂಡರು.