‘ಈ ಹಿಂದೆ ಇದೇ ವಿಚಾರವನ್ನು ‘ಗಾಳಿ ಸುದ್ದಿ’ ಎಂದು ಸಚಿವ ಅಶ್ವತ್ಥನಾರಾಯಣ ಹಾಗೂ ಗೋವಿಂದ ಕಾರಜೋಳ ಹೇಳುವ ಮೂಲಕದಲಿತ ವಿದ್ಯಾರ್ಥಿ ಪರಿಷತ್ ಮೇಲೆ ಆಪಾದನೆ ಮಾಡಿದ್ದರು. ಈಗ ಸದನದಲ್ಲಿ ಅದು ಸತ್ಯವೆಂದು ಒಪ್ಪಿಕೊಂಡಿದ್ದಾರೆ. ಸರ್ಕಾರದ ಈ ಧೋರಣೆ ಮಹಿಳಾ ವಿರೋಧಿ ನಡೆಯಾಗಿದ್ದು, ಮಹಿಳೆಯರಿಗೆ ಶಿಕ್ಷಣ ಹೊರೆ ಎಂದು ಸರ್ಕಾರ ಭಾವಿಸಿದೆ. ಹೆಣ್ಣುಮಕ್ಕಳ ಶಿಕ್ಷಣ ಕಸಿಯುತ್ತಿರುವ ಸರ್ಕಾರಕ್ಕೆ ನಾಚಿಕೆ ಆಗಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದರು.