<p><strong>ಬೆಂಗಳೂರು:</strong> ಅರಣ್ಯ ಸಚಿವ ಆನಂದ ಸಿಂಗ್ ಖಾತೆಯನ್ನು ಬದಲಿಸಬೇಕು ಎಂಬ ಒತ್ತಡ ಹೆಚ್ಚಾಗಿದ್ದರೂ, ಅವರ ಖಾತೆಯನ್ನು ಮತ್ತೆ ಬದಲಾವಣೆ ಮಾಡುವ ಸಾಧ್ಯತೆ ಇಲ್ಲ ಎನ್ನಲಾಗಿದೆ.</p>.<p>ಅರಣ್ಯ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ 15 ಪ್ರಕರಣಗಳು ಇರುವುದನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ಉಲ್ಲೇಖಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ಖಾತೆಯನ್ನು ಬದಲಿಸುವಂತೆ ಒತ್ತಡ ಹೆಚ್ಚಾಗಿದೆ.</p>.<p>ರಾಷ್ಟ್ರ ಮಟ್ಟದಲ್ಲೂ ಈ ವಿಷಯ ಚರ್ಚೆಗೆ ಗ್ರಾಸವಾದ ಹಿನ್ನೆಲೆಯಲ್ಲಿ ಬಿಜೆಪಿ ವರಿಷ್ಠರು ಈ ಬಗ್ಗೆ ಮಾಹಿತಿ ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.</p>.<p>ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಶುಕ್ರವಾರ ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಆನಂದಸಿಂಗ್, ‘ಮುಖ್ಯಮಂತ್ರಿಯವರು ನನ್ನ ಖಾತೆ ಬದಲಿಸುವುದಿದ್ದರೆ ಅದಕ್ಕೆ ನನ್ನ ತಕರಾರು ಇಲ್ಲ’ ಎಂದು ಹೇಳಿದ್ದಾರೆ.</p>.<p>ಭೇಟಿ ಸಂದರ್ಭದಲ್ಲಿ ಅವರು ಬಳ್ಳಾರಿ ಜಿಲ್ಲೆಯ ಉಸ್ತುವಾರಿಗೆ ಬೇಡಿಕೆ ಇಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.</p>.<p>‘ನಾನು ಅರಣ್ಯ ಖಾತೆ ಕೇಳಿರಲಿಲ್ಲ. ನೀವಾಗಿಯೇ ಅದನ್ನು ಕೊಟ್ಟಿದ್ದೀರಿ. ಯಾವ ಖಾತೆ ಕೊಟ್ಟರೂ ಮಾಡುತ್ತಿದ್ದೆ. ಈಗ ಮತ್ತೆ ಖಾತೆ ಬದಲಿಸಿದರೆ ತಪ್ಪು ಸಂದೇಶ ರವಾನೆಯಾಗುತ್ತದೆ’ ಎಂದು ಮುಖ್ಯಮಂತ್ರಿಗೆ ಹೇಳಿದರೆನ್ನಲಾಗಿದೆ.</p>.<p>‘ಅರಣ್ಯ ನಾಶದ ಬಗ್ಗೆ ನನ್ನ ಮೇಲೆ ನೇರ ಆರೋಪಗಳಿಲ್ಲ. ಬೇರೆ ಯಾರದ್ದೋ ಪ್ರಕರಣಗಳಲ್ಲಿ ನನ್ನ ಹೆಸರನ್ನು ಸೇರಿಸಲಾಗಿದೆ. ಒಂದು ವೇಳೆ ಖಾತೆ ಬದಲಿಸುವುದಿದ್ದರೆ ಅದಕ್ಕೆ ನನ್ನ ತಕರಾರು ಇಲ್ಲ’ ಎಂದು ಅವರು ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಹೇಳಿದರು.</p>.<p><strong>‘ರಾಜಕೀಯ ಪಿತೂರಿಯೇ ಕಾರಣ’</strong></p>.<p>‘ಪ್ರಕರಣದಲ್ಲಿ ನನ್ನ ಹೆಸರು ಸೇರಿಸಲು ರಾಜಕೀಯ ಪಿತೂರಿಯೇ ಕಾರಣ. ನಾನು ಯಾವುದೇ ಗಣಿ ಕಂಪನಿಯ ಮಾಲೀಕನಲ್ಲ. ಗಣಿ ಕಂಪನಿಯ ಎಂಟು ಜನ ಮಾಲೀಕರಲ್ಲಿ ನನ್ನ ತಂದೆಯೂ ಒಬ್ಬರಿದ್ದರು. ತಂದೆಯವರು ಕಂಪನಿಯಿಂದ ನಿವೃತ್ತಿ ಹೊಂದಿದ ಬಳಿಕ, ನಾನು ಕಂಪನಿ ಸೇರಿದೆ. ಈ ಎಲ್ಲ ಮಾಹಿತಿಗಳೂ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ವಿವರಿಸಿದ್ದೇನೆ’ ಎಂದರು.</p>.<p>‘ನನ್ನ ಮೇಲೆ 15 ಪ್ರಕರಣಗಳಿರುವುದು ನಿಜ. ಈ ವಿಷಯದಲ್ಲಿ ರಾಜ್ಯದ ಜನರನ್ನು ಕತ್ತಲಿನಲ್ಲಿ ಇಡುವ ಪ್ರಶ್ನೆಯೇ ಇಲ್ಲ. ದಾಖಲಾಗಿರುವ ದೂರುಗಳನ್ನು ಪರಿಶೀಲಿಸಲಿ. ಒಂದು ವೇಳೆ ನನ್ನಿಂದ ಅರಣ್ಯ ಲೂಟಿ ಆಗುತ್ತದೆ ಎಂಬ ಸಂದೇಹ ಇದ್ದರೆ, ಖಾತೆ ಬದಲಾವಣೆ ಮಾಡಲಿ. ಅದಕ್ಕೂ ತಯಾರಿದ್ದೇನೆ’ ಎಂದೂ ಆನಂದ ಸಿಂಗ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಅರಣ್ಯ ಸಚಿವ ಆನಂದ ಸಿಂಗ್ ಖಾತೆಯನ್ನು ಬದಲಿಸಬೇಕು ಎಂಬ ಒತ್ತಡ ಹೆಚ್ಚಾಗಿದ್ದರೂ, ಅವರ ಖಾತೆಯನ್ನು ಮತ್ತೆ ಬದಲಾವಣೆ ಮಾಡುವ ಸಾಧ್ಯತೆ ಇಲ್ಲ ಎನ್ನಲಾಗಿದೆ.</p>.<p>ಅರಣ್ಯ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ 15 ಪ್ರಕರಣಗಳು ಇರುವುದನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ಉಲ್ಲೇಖಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ಖಾತೆಯನ್ನು ಬದಲಿಸುವಂತೆ ಒತ್ತಡ ಹೆಚ್ಚಾಗಿದೆ.</p>.<p>ರಾಷ್ಟ್ರ ಮಟ್ಟದಲ್ಲೂ ಈ ವಿಷಯ ಚರ್ಚೆಗೆ ಗ್ರಾಸವಾದ ಹಿನ್ನೆಲೆಯಲ್ಲಿ ಬಿಜೆಪಿ ವರಿಷ್ಠರು ಈ ಬಗ್ಗೆ ಮಾಹಿತಿ ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.</p>.<p>ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಶುಕ್ರವಾರ ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಆನಂದಸಿಂಗ್, ‘ಮುಖ್ಯಮಂತ್ರಿಯವರು ನನ್ನ ಖಾತೆ ಬದಲಿಸುವುದಿದ್ದರೆ ಅದಕ್ಕೆ ನನ್ನ ತಕರಾರು ಇಲ್ಲ’ ಎಂದು ಹೇಳಿದ್ದಾರೆ.</p>.<p>ಭೇಟಿ ಸಂದರ್ಭದಲ್ಲಿ ಅವರು ಬಳ್ಳಾರಿ ಜಿಲ್ಲೆಯ ಉಸ್ತುವಾರಿಗೆ ಬೇಡಿಕೆ ಇಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.</p>.<p>‘ನಾನು ಅರಣ್ಯ ಖಾತೆ ಕೇಳಿರಲಿಲ್ಲ. ನೀವಾಗಿಯೇ ಅದನ್ನು ಕೊಟ್ಟಿದ್ದೀರಿ. ಯಾವ ಖಾತೆ ಕೊಟ್ಟರೂ ಮಾಡುತ್ತಿದ್ದೆ. ಈಗ ಮತ್ತೆ ಖಾತೆ ಬದಲಿಸಿದರೆ ತಪ್ಪು ಸಂದೇಶ ರವಾನೆಯಾಗುತ್ತದೆ’ ಎಂದು ಮುಖ್ಯಮಂತ್ರಿಗೆ ಹೇಳಿದರೆನ್ನಲಾಗಿದೆ.</p>.<p>‘ಅರಣ್ಯ ನಾಶದ ಬಗ್ಗೆ ನನ್ನ ಮೇಲೆ ನೇರ ಆರೋಪಗಳಿಲ್ಲ. ಬೇರೆ ಯಾರದ್ದೋ ಪ್ರಕರಣಗಳಲ್ಲಿ ನನ್ನ ಹೆಸರನ್ನು ಸೇರಿಸಲಾಗಿದೆ. ಒಂದು ವೇಳೆ ಖಾತೆ ಬದಲಿಸುವುದಿದ್ದರೆ ಅದಕ್ಕೆ ನನ್ನ ತಕರಾರು ಇಲ್ಲ’ ಎಂದು ಅವರು ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಹೇಳಿದರು.</p>.<p><strong>‘ರಾಜಕೀಯ ಪಿತೂರಿಯೇ ಕಾರಣ’</strong></p>.<p>‘ಪ್ರಕರಣದಲ್ಲಿ ನನ್ನ ಹೆಸರು ಸೇರಿಸಲು ರಾಜಕೀಯ ಪಿತೂರಿಯೇ ಕಾರಣ. ನಾನು ಯಾವುದೇ ಗಣಿ ಕಂಪನಿಯ ಮಾಲೀಕನಲ್ಲ. ಗಣಿ ಕಂಪನಿಯ ಎಂಟು ಜನ ಮಾಲೀಕರಲ್ಲಿ ನನ್ನ ತಂದೆಯೂ ಒಬ್ಬರಿದ್ದರು. ತಂದೆಯವರು ಕಂಪನಿಯಿಂದ ನಿವೃತ್ತಿ ಹೊಂದಿದ ಬಳಿಕ, ನಾನು ಕಂಪನಿ ಸೇರಿದೆ. ಈ ಎಲ್ಲ ಮಾಹಿತಿಗಳೂ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ವಿವರಿಸಿದ್ದೇನೆ’ ಎಂದರು.</p>.<p>‘ನನ್ನ ಮೇಲೆ 15 ಪ್ರಕರಣಗಳಿರುವುದು ನಿಜ. ಈ ವಿಷಯದಲ್ಲಿ ರಾಜ್ಯದ ಜನರನ್ನು ಕತ್ತಲಿನಲ್ಲಿ ಇಡುವ ಪ್ರಶ್ನೆಯೇ ಇಲ್ಲ. ದಾಖಲಾಗಿರುವ ದೂರುಗಳನ್ನು ಪರಿಶೀಲಿಸಲಿ. ಒಂದು ವೇಳೆ ನನ್ನಿಂದ ಅರಣ್ಯ ಲೂಟಿ ಆಗುತ್ತದೆ ಎಂಬ ಸಂದೇಹ ಇದ್ದರೆ, ಖಾತೆ ಬದಲಾವಣೆ ಮಾಡಲಿ. ಅದಕ್ಕೂ ತಯಾರಿದ್ದೇನೆ’ ಎಂದೂ ಆನಂದ ಸಿಂಗ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>