‘ಇಟಲಿಗೆ ಹೋಗಲು ಮುಂದಾಗಿದ್ದ ಯುವತಿ, ವೀಸಾ ಪಡೆಯಲು ಅರ್ಜಿ ಸಲ್ಲಿಸಿದ್ದರು. ಆದರೆ, ಅರ್ಜಿ ತಿರಸ್ಕೃತಗೊಂಡಿತ್ತು. ಈ ಬಗ್ಗೆ ಯುವತಿ, ಆರೋಪಿಗೆ ವಿಷಯ ತಿಳಿಸಿದ್ದರು. ಪ್ರಧಾನ ಮಂತ್ರಿ ಕಚೇರಿಯಿಂದಲೇ ವೀಸಾ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದ ಆರೋಪಿ, ‘ಹಲವು ದೇಶಗಳಲ್ಲಿ ನಿಮ್ಮ ಮೇಲೆ ಭಯೋತ್ಪದನಾ ಕೃತ್ಯ ಎಸಗಿದ್ದ ಪ್ರಕರಣ ದಾಖಲಾಗಿದೆ. ನಿಮ್ಮ ವೀಸಾ ನಿಷ್ಕ್ರಿಯ ಮಾಡಿದ್ದಾರೆ’ ಎಂದು ಯುವತಿಯನ್ನು ಹೆದರಿಸಿದ್ದ. ಪ್ರಕರಣ ರದ್ದುಪಡಿಸುವುದಾಗಿ ಹೇಳಿ ಯುವತಿಯಿಂದ ಹಂತ ಹಂತವಾಗಿ ₹ 89 ಲಕ್ಷ ಪಡೆದುಕೊಂಡಿದ್ದ’ ಎಂದು ಪೊಲೀಸರು ತಿಳಿಸಿದರು.