‘ಮೆಣಸಿಕಾಯಿ ವ್ಯಾಪಾರಿ ಆಗಿರುವ ಮಹಮ್ಮದ್ ಶಫಿ ನಾಶಿಪುಡಿ, ರಾಜ್ಯಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು. ನಂತರ, ತಮ್ಮೂರಾದ ಬ್ಯಾಡಗಿಗೆ ಹೋಗಿದ್ದರು. ಮೋಟೆಬೆನ್ನೂರ ಬಳಿಯ ಗೋದಾಮಿನಲ್ಲಿ ಬುಧವಾರ ರಾತ್ರಿ ವಶಕ್ಕೆ ಪಡೆದು ನಗರಕ್ಕೆ ಕರೆತರಲಾಯಿತು’ ಎಂದು ಪೊಲೀಸ್ ಮೂಲಗಳು ಹೇಳಿವೆ.