<p><strong>ಬೆಂಗಳೂರು:</strong> ಪೆರಿಫೆರಲ್ ವರ್ತುಲ ರಸ್ತೆಗೆ (ಪಿಆರ್ಆರ್) ರೈತರಿಂದ ಸ್ವಾಧೀನಪಡಿಸಿಕೊಳ್ಳುವ ಜಾಗಕ್ಕೆ ಪರಿಹಾರ ನಿಗದಿಪಡಿಸುವ ವಿಚಾರ ಸದ್ಯಕ್ಕೆ ಬಗೆಹರಿಯುವ ಲಕ್ಷಣ ಕಾಣಿಸುತ್ತಿಲ್ಲ. ಈಗಿನ ಮಾರ್ಗಸೂಚಿ ದರಕ್ಕಿಂತಲೂ ಹೆಚ್ಚು ಪರಿಹಾರ ನೀಡುವಂತೆ ರೈತರು ಪಟ್ಟು ಹಿಡಿದಿದ್ದರೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಇದಕ್ಕೆ ಒಪ್ಪುತ್ತಿಲ್ಲ.</p>.<p>ಈ ಬಿಕ್ಕಟ್ಟು ಬಗೆಹರಿಸುವ ಬಗ್ಗೆ ಬಿಡಿಎ ಅಧಿಕಾರಿಗಳು ನಗರಾಭಿವೃದ್ಧಿ ಇಲಾಖೆ ಉನ್ನತ ಅಧಿಕಾರಿಗಳ ಜೊತೆ ಮಂಗಳವಾರ ಮತ್ತೆ ಸಭೆ ನಡೆಸಿದರು.</p>.<p>ಈ ಯೋಜನೆಗೆ ಸ್ವಾಧೀನಪಡಿಸಿಕೊಳ್ಳುವ ಜಮೀನಿಗೆ 2017ರ–18ನೇ ಸಾಲಿನ ಮಾರ್ಗಸೂಚಿ ದರ ಹಾಗೂ ಅದಕ್ಕೆ ಶೇ 100ರಷ್ಟು ಸೊಲೇಷಿಯಂ ಸೇರಿಸಿ ಪರಿಹಾರ ನಿಗದಿಪಡಿಸಲು 2018ರ ಡಿ. 15ರಂದು ನಡೆದಿದ್ದ ಬಿಡಿಎ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಈ ಮೊತ್ತಕ್ಕೆ ನಂತರದ ಪ್ರತಿ ವರ್ಷವೂ ಶೇ 12ರಷ್ಟು ಹೆಚ್ಚುವರಿ ಮಾರುಕಟ್ಟೆ ದರದಂತೆ ಲೆಕ್ಕ ಹಾಕಿ ಪರಿಹಾರ ನೀಡಲು ತೀರ್ಮಾನಿಸಲಾಗಿತ್ತು. ‘ಭೂಸ್ವಾಧೀನಕ್ಕೆ ಹೊರಡಿಸಿರುವ ಪ್ರಾಥಮಿಕ ಅಧಿಸೂಚನೆ ಪ್ರಕಾರ ಒಟ್ಟು ₹ 2,110 ಕೋಟಿ ಪರಿಹಾರವನ್ನು ಮಾತ್ರ ನೀಡಬೇಕಾಗುತ್ತದೆ. ಈಗಿನ ಮಾರುಕಟ್ಟೆ ದರದ ಪ್ರಕಾರ ಪರಿಹಾರ ನೀಡಿದರೆ ಗರಿಷ್ಠ ₹ 8,842 ಕೋಟಿ ಬೇಕಾಗಬಹುದು ಎಂದು ಅಂದಾಜು ಮಾಡಿದ್ದೇವೆ. ಈ ಪ್ರಸ್ತಾಪಕ್ಕೆ ಸರ್ಕಾರ ಒಪ್ಪಿದರೆ ಮಾತ್ರ ಇಷ್ಟು ಪರಿಹಾರ ನೀಡಬಹುದು’ ಎಂದು ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದರು.</p>.<p class="Subhead">ಪರಿಹಾರ ಸೂತ್ರಕ್ಕೆ ಒಪ್ಪದ ರೈತರು: ಬಿಡಿಎ ನಿಗದಿಪಡಿಸಿರುವಷ್ಟು ಪರಿಹಾರ ಪಡೆಯುವುದಕ್ಕೆ ರೈತರು ಸುತಾರಾಂ ಒಪ್ಪುತ್ತಿಲ್ಲ.</p>.<p>‘ಪಿಆರ್ಆರ್ ಯೋಜನೆ ಜಾರಿಯಾಗುವ ಪ್ರದೇಶಗಳಲ್ಲಿ ಜಮೀನುಗಳ ಮಾರ್ಗಸೂಚಿ ದರವನ್ನು ಹೆಚ್ಚಿಸಬಾರದು ಎಂದು 2014ರಲ್ಲಿ ಸರ್ಕಾರ ಆದೇಶ ಮಾಡಿತು. ಆ ಬಳಿಕ ನಗರದ ಬೇರೆ ಪ್ರದೇಶಗಳ ಜಮೀನಿನ ದರ ಅನೇಕ ಪಟ್ಟು ಹೆಚ್ಚಳವಾಗಿದ್ದರೂ, ಪಿಆರ್ಆರ್ ವ್ಯಾಪ್ತಿಯ ಜಮೀನುಗಳ ದರ 6 ವರ್ಷಗಳ ಹಿಂದೆ ಇದ್ದಷ್ಟೇ ಇದೆ. ಈಗ ಸರ್ಕಾರ ಮಾರ್ಗಸೂಚಿ ದರದ ಪ್ರಕಾರ ಪರಿಹಾರ ನೀಡಿದರೂ ರೈತರಿಗೆ ಅನ್ಯಾಯವಾಗುತ್ತದೆ’ ಎಂದು ಕರ್ನಾಟಕ ರಾಜ್ಯ ರೈತರ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ವಿವರಿಸಿದರು.</p>.<p>‘2014ರ ಬಳಿಕ ಆಗಿರುವ ಜಮೀನಿನ ಮಾರ್ಗಸೂಚಿ ದರ ಹೆಚ್ಚಳದ ಪ್ರಮಾಣವನ್ನು ಪರಿಗಣಿಸಿದರೆ, ಸರ್ಕಾರ ರೈತರಿಂದ ಸ್ವಾಧೀನಪಡಿಸಿಕೊಳ್ಳುವ ಜಮೀನಿಗೆ ಪರಿಹಾರ ನೀಡಲು ಒಟ್ಟು ₹ 15,436 ಕೋಟಿ ವ್ಯಯಿಸಬೇಕಾಗುತ್ತದೆ. ಇಷ್ಟು ಮೊತ್ತ ಭರಿಸಲು ಸಾಧ್ಯವಿಲ್ಲದಿದ್ದರೆ ಸರ್ಕಾರ ಪ್ರಾಥಮಿಕ ಅಧಿಸೂಚನೆಯನ್ನು ಹಿಂದಕ್ಕೆ ಪಡೆಯಲಿ’ ಎಂದು ಅವರು ಒತ್ತಾಯಿಸಿದರು.</p>.<p>‘2007ರಲ್ಲಿ ಈ ಯೋಜನೆಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ಬಳಿಕ ತಮ್ಮ ಜಮೀನನ್ನು ಅಭಿವೃದ್ಧಿಪಡಿಸಲಾಗದೆ ರೈತರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಇದನ್ನು ಭರಿಸುವವರು ಯಾರು’ ಎಂದು ಪ್ರಶ್ನಿಸಿದರು.</p>.<p class="Briefhead"><strong>ಪರಿಹಾರದ ವಿವರ</strong></p>.<p>ಪಿಆರ್ಆರ್ಗೆ ಸ್ವಾಧೀನ ಪಡಿಸಿಕೊಳ್ಳುವ ಜಮೀನಿಗೆ 2013ರ ಭೂಸ್ವಾಧೀನ ಕಾಯ್ದೆಯ ಪ್ರಕಾರ ನಗದು ಅಥವಾ ಟಿಡಿಆರ್ ರೂಪದಲ್ಲಿ ಪರಿಹಾರ ನೀಡುವಂತೆ ಸರ್ಕಾರ 2019ರ ಅ. 3ರಂದು ಆದೇಶ ಮಾಡಿತ್ತು. ಅದರ ಪ್ರಮುಖ ಅಂಶಗಳು ಇಂತಿವೆ</p>.<p>-2 ಎಕರೆವರೆಗಿನ ಜಮೀನಿಗೆ ನಗದು ಪರಿಹಾರ</p>.<p>-2 ಎಕರೆಗಿಂತ ಹೆಚ್ಚಿನ ಜಮೀನಿಗೆ ಶೇ 50ರಷ್ಟು ನಗದು ಮತ್ತು ಶೇ 50ರಷ್ಟು ಟಿಡಿಆರ್ ಅಥವಾ ಪೂರ್ಣ ಪ್ರಮಾಣದಲ್ಲಿ ಟಿಡಿಆರ್</p>.<p>-ಪಿಆರ್ಆರ್ಗೆ ಅಗತ್ಯವಿರುವ ಸರ್ಕಾರಿ ಜಮೀನುಗಳನ್ನು ಉಚಿತವಾಗಿ ನೀಡುವುದು</p>.<p>-ನಿಗಮ ಮಂಡಳಿಗಳ ಜಮೀನುಗಳಿಗೆ ಸರ್ಕಾರಿ ಮಾರ್ಗಸೂಚಿ ದರಕ್ಕೆ ಅನುಗುಣವಾಗಿ ಪರಿಹಾರ ನೀಡುವುದು</p>.<p class="Briefhead"><strong>₹ 11 ಸಾವಿರ ಕೋಟಿಗೆ ಅನುಮೋದನೆ</strong></p>.<p>ಪಿಆರ್ಆರ್ ಯೋಜನೆಗೆ ಒಟ್ಟು 11 ಸಾವಿರ ಕೋಟಿ ಅನುದಾನ ನೀಡಲು ಆರ್ಥಿಕ ಇಲಾಖೆಯು 2018–19ನೇ ಸಾಲಿನಲ್ಲಿ ಒಪ್ಪಿಗೆ ನೀಡಿತ್ತು. ಈ ಅನುದಾನವನ್ನು 2021–22ನೇ ಸಾಲಿನವರೆಗೆ ಹಂತ ಹಂತವಾಗಿ ಬಿಡುಗಡೆ ಮಾಡಲು ಹಾಗೂ ಬಾಕಿ ಮೊತ್ತಕ್ಕೆ 2022– 23ರಿಂದ 2032–33ರ ನಡುವೆ ಮೂಲಸೌಲಭ್ಯ ನಿಧಿಯಿಂದ ಸಾಲ ಒದಗಿಸಲು ಆರ್ಥಿಕ ಇಲಾಖೆ ಸಲಹೆ ನೀಡಿತ್ತು.</p>.<p><strong>ಯಾವ ವರ್ಷ ಎಷ್ಟು ಕೋಟಿ?</strong></p>.<p>ವರ್ಷ; ಅನುದಾನ (₹ ಕೋಟಿಗಳಲ್ಲಿ)</p>.<p>2019–20; ₹ 2 ಸಾವಿರ</p>.<p>2020–21; ₹ 3,500</p>.<p>2021–22; ₹ 3,500</p>.<p>–0–</p>.<p><strong>ಅಂಕಿ ಅಂಶ</strong><br />66 ಕಿ.ಮೀ, ಪಿಆರ್ಆರ್ ಉದ್ದ</p>.<p>1810 ಎಕರೆ 18.5 ಗುಂಟೆ, ಪಿಆರ್ಆರ್ ಯೋಜನೆಗೆ ಅಗತ್ಯವಿರುವ ಜಮೀನು</p>.<p>₹ 3500 ಕೋಟಿ, ಪಿಆರ್ಆರ್ ಕಾಮಗಾರಿಗೆ ತಗಲುವ ವೆಚ್ಚ</p>.<p>ಪ್ರತಿಭಟನೆ ಹಿಂಪಡೆದ ಬಳಿಕ ಸರ್ಕಾರ ತನ್ನ ಮಾತನ್ನು ಮರೆತುಬಿಟ್ಟಿದೆ. ಹಾಗಾಗಿ ಇದೇ 28ರಿಂದ ಮತ್ತೆ ಪ್ರತಿಭಟನೆ ಮುಂದುವರಿಸುತ್ತೇವೆ.<br /><strong>ಕೋಡಿಹಳ್ಳಿ ಚಂದ್ರಶೇಖರ್, ರಾಜ್ಯ ರೈತ ಸಂಘದ ಅಧ್ಯಕ್ಷ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಪೆರಿಫೆರಲ್ ವರ್ತುಲ ರಸ್ತೆಗೆ (ಪಿಆರ್ಆರ್) ರೈತರಿಂದ ಸ್ವಾಧೀನಪಡಿಸಿಕೊಳ್ಳುವ ಜಾಗಕ್ಕೆ ಪರಿಹಾರ ನಿಗದಿಪಡಿಸುವ ವಿಚಾರ ಸದ್ಯಕ್ಕೆ ಬಗೆಹರಿಯುವ ಲಕ್ಷಣ ಕಾಣಿಸುತ್ತಿಲ್ಲ. ಈಗಿನ ಮಾರ್ಗಸೂಚಿ ದರಕ್ಕಿಂತಲೂ ಹೆಚ್ಚು ಪರಿಹಾರ ನೀಡುವಂತೆ ರೈತರು ಪಟ್ಟು ಹಿಡಿದಿದ್ದರೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಇದಕ್ಕೆ ಒಪ್ಪುತ್ತಿಲ್ಲ.</p>.<p>ಈ ಬಿಕ್ಕಟ್ಟು ಬಗೆಹರಿಸುವ ಬಗ್ಗೆ ಬಿಡಿಎ ಅಧಿಕಾರಿಗಳು ನಗರಾಭಿವೃದ್ಧಿ ಇಲಾಖೆ ಉನ್ನತ ಅಧಿಕಾರಿಗಳ ಜೊತೆ ಮಂಗಳವಾರ ಮತ್ತೆ ಸಭೆ ನಡೆಸಿದರು.</p>.<p>ಈ ಯೋಜನೆಗೆ ಸ್ವಾಧೀನಪಡಿಸಿಕೊಳ್ಳುವ ಜಮೀನಿಗೆ 2017ರ–18ನೇ ಸಾಲಿನ ಮಾರ್ಗಸೂಚಿ ದರ ಹಾಗೂ ಅದಕ್ಕೆ ಶೇ 100ರಷ್ಟು ಸೊಲೇಷಿಯಂ ಸೇರಿಸಿ ಪರಿಹಾರ ನಿಗದಿಪಡಿಸಲು 2018ರ ಡಿ. 15ರಂದು ನಡೆದಿದ್ದ ಬಿಡಿಎ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಈ ಮೊತ್ತಕ್ಕೆ ನಂತರದ ಪ್ರತಿ ವರ್ಷವೂ ಶೇ 12ರಷ್ಟು ಹೆಚ್ಚುವರಿ ಮಾರುಕಟ್ಟೆ ದರದಂತೆ ಲೆಕ್ಕ ಹಾಕಿ ಪರಿಹಾರ ನೀಡಲು ತೀರ್ಮಾನಿಸಲಾಗಿತ್ತು. ‘ಭೂಸ್ವಾಧೀನಕ್ಕೆ ಹೊರಡಿಸಿರುವ ಪ್ರಾಥಮಿಕ ಅಧಿಸೂಚನೆ ಪ್ರಕಾರ ಒಟ್ಟು ₹ 2,110 ಕೋಟಿ ಪರಿಹಾರವನ್ನು ಮಾತ್ರ ನೀಡಬೇಕಾಗುತ್ತದೆ. ಈಗಿನ ಮಾರುಕಟ್ಟೆ ದರದ ಪ್ರಕಾರ ಪರಿಹಾರ ನೀಡಿದರೆ ಗರಿಷ್ಠ ₹ 8,842 ಕೋಟಿ ಬೇಕಾಗಬಹುದು ಎಂದು ಅಂದಾಜು ಮಾಡಿದ್ದೇವೆ. ಈ ಪ್ರಸ್ತಾಪಕ್ಕೆ ಸರ್ಕಾರ ಒಪ್ಪಿದರೆ ಮಾತ್ರ ಇಷ್ಟು ಪರಿಹಾರ ನೀಡಬಹುದು’ ಎಂದು ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದರು.</p>.<p class="Subhead">ಪರಿಹಾರ ಸೂತ್ರಕ್ಕೆ ಒಪ್ಪದ ರೈತರು: ಬಿಡಿಎ ನಿಗದಿಪಡಿಸಿರುವಷ್ಟು ಪರಿಹಾರ ಪಡೆಯುವುದಕ್ಕೆ ರೈತರು ಸುತಾರಾಂ ಒಪ್ಪುತ್ತಿಲ್ಲ.</p>.<p>‘ಪಿಆರ್ಆರ್ ಯೋಜನೆ ಜಾರಿಯಾಗುವ ಪ್ರದೇಶಗಳಲ್ಲಿ ಜಮೀನುಗಳ ಮಾರ್ಗಸೂಚಿ ದರವನ್ನು ಹೆಚ್ಚಿಸಬಾರದು ಎಂದು 2014ರಲ್ಲಿ ಸರ್ಕಾರ ಆದೇಶ ಮಾಡಿತು. ಆ ಬಳಿಕ ನಗರದ ಬೇರೆ ಪ್ರದೇಶಗಳ ಜಮೀನಿನ ದರ ಅನೇಕ ಪಟ್ಟು ಹೆಚ್ಚಳವಾಗಿದ್ದರೂ, ಪಿಆರ್ಆರ್ ವ್ಯಾಪ್ತಿಯ ಜಮೀನುಗಳ ದರ 6 ವರ್ಷಗಳ ಹಿಂದೆ ಇದ್ದಷ್ಟೇ ಇದೆ. ಈಗ ಸರ್ಕಾರ ಮಾರ್ಗಸೂಚಿ ದರದ ಪ್ರಕಾರ ಪರಿಹಾರ ನೀಡಿದರೂ ರೈತರಿಗೆ ಅನ್ಯಾಯವಾಗುತ್ತದೆ’ ಎಂದು ಕರ್ನಾಟಕ ರಾಜ್ಯ ರೈತರ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ವಿವರಿಸಿದರು.</p>.<p>‘2014ರ ಬಳಿಕ ಆಗಿರುವ ಜಮೀನಿನ ಮಾರ್ಗಸೂಚಿ ದರ ಹೆಚ್ಚಳದ ಪ್ರಮಾಣವನ್ನು ಪರಿಗಣಿಸಿದರೆ, ಸರ್ಕಾರ ರೈತರಿಂದ ಸ್ವಾಧೀನಪಡಿಸಿಕೊಳ್ಳುವ ಜಮೀನಿಗೆ ಪರಿಹಾರ ನೀಡಲು ಒಟ್ಟು ₹ 15,436 ಕೋಟಿ ವ್ಯಯಿಸಬೇಕಾಗುತ್ತದೆ. ಇಷ್ಟು ಮೊತ್ತ ಭರಿಸಲು ಸಾಧ್ಯವಿಲ್ಲದಿದ್ದರೆ ಸರ್ಕಾರ ಪ್ರಾಥಮಿಕ ಅಧಿಸೂಚನೆಯನ್ನು ಹಿಂದಕ್ಕೆ ಪಡೆಯಲಿ’ ಎಂದು ಅವರು ಒತ್ತಾಯಿಸಿದರು.</p>.<p>‘2007ರಲ್ಲಿ ಈ ಯೋಜನೆಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ಬಳಿಕ ತಮ್ಮ ಜಮೀನನ್ನು ಅಭಿವೃದ್ಧಿಪಡಿಸಲಾಗದೆ ರೈತರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಇದನ್ನು ಭರಿಸುವವರು ಯಾರು’ ಎಂದು ಪ್ರಶ್ನಿಸಿದರು.</p>.<p class="Briefhead"><strong>ಪರಿಹಾರದ ವಿವರ</strong></p>.<p>ಪಿಆರ್ಆರ್ಗೆ ಸ್ವಾಧೀನ ಪಡಿಸಿಕೊಳ್ಳುವ ಜಮೀನಿಗೆ 2013ರ ಭೂಸ್ವಾಧೀನ ಕಾಯ್ದೆಯ ಪ್ರಕಾರ ನಗದು ಅಥವಾ ಟಿಡಿಆರ್ ರೂಪದಲ್ಲಿ ಪರಿಹಾರ ನೀಡುವಂತೆ ಸರ್ಕಾರ 2019ರ ಅ. 3ರಂದು ಆದೇಶ ಮಾಡಿತ್ತು. ಅದರ ಪ್ರಮುಖ ಅಂಶಗಳು ಇಂತಿವೆ</p>.<p>-2 ಎಕರೆವರೆಗಿನ ಜಮೀನಿಗೆ ನಗದು ಪರಿಹಾರ</p>.<p>-2 ಎಕರೆಗಿಂತ ಹೆಚ್ಚಿನ ಜಮೀನಿಗೆ ಶೇ 50ರಷ್ಟು ನಗದು ಮತ್ತು ಶೇ 50ರಷ್ಟು ಟಿಡಿಆರ್ ಅಥವಾ ಪೂರ್ಣ ಪ್ರಮಾಣದಲ್ಲಿ ಟಿಡಿಆರ್</p>.<p>-ಪಿಆರ್ಆರ್ಗೆ ಅಗತ್ಯವಿರುವ ಸರ್ಕಾರಿ ಜಮೀನುಗಳನ್ನು ಉಚಿತವಾಗಿ ನೀಡುವುದು</p>.<p>-ನಿಗಮ ಮಂಡಳಿಗಳ ಜಮೀನುಗಳಿಗೆ ಸರ್ಕಾರಿ ಮಾರ್ಗಸೂಚಿ ದರಕ್ಕೆ ಅನುಗುಣವಾಗಿ ಪರಿಹಾರ ನೀಡುವುದು</p>.<p class="Briefhead"><strong>₹ 11 ಸಾವಿರ ಕೋಟಿಗೆ ಅನುಮೋದನೆ</strong></p>.<p>ಪಿಆರ್ಆರ್ ಯೋಜನೆಗೆ ಒಟ್ಟು 11 ಸಾವಿರ ಕೋಟಿ ಅನುದಾನ ನೀಡಲು ಆರ್ಥಿಕ ಇಲಾಖೆಯು 2018–19ನೇ ಸಾಲಿನಲ್ಲಿ ಒಪ್ಪಿಗೆ ನೀಡಿತ್ತು. ಈ ಅನುದಾನವನ್ನು 2021–22ನೇ ಸಾಲಿನವರೆಗೆ ಹಂತ ಹಂತವಾಗಿ ಬಿಡುಗಡೆ ಮಾಡಲು ಹಾಗೂ ಬಾಕಿ ಮೊತ್ತಕ್ಕೆ 2022– 23ರಿಂದ 2032–33ರ ನಡುವೆ ಮೂಲಸೌಲಭ್ಯ ನಿಧಿಯಿಂದ ಸಾಲ ಒದಗಿಸಲು ಆರ್ಥಿಕ ಇಲಾಖೆ ಸಲಹೆ ನೀಡಿತ್ತು.</p>.<p><strong>ಯಾವ ವರ್ಷ ಎಷ್ಟು ಕೋಟಿ?</strong></p>.<p>ವರ್ಷ; ಅನುದಾನ (₹ ಕೋಟಿಗಳಲ್ಲಿ)</p>.<p>2019–20; ₹ 2 ಸಾವಿರ</p>.<p>2020–21; ₹ 3,500</p>.<p>2021–22; ₹ 3,500</p>.<p>–0–</p>.<p><strong>ಅಂಕಿ ಅಂಶ</strong><br />66 ಕಿ.ಮೀ, ಪಿಆರ್ಆರ್ ಉದ್ದ</p>.<p>1810 ಎಕರೆ 18.5 ಗುಂಟೆ, ಪಿಆರ್ಆರ್ ಯೋಜನೆಗೆ ಅಗತ್ಯವಿರುವ ಜಮೀನು</p>.<p>₹ 3500 ಕೋಟಿ, ಪಿಆರ್ಆರ್ ಕಾಮಗಾರಿಗೆ ತಗಲುವ ವೆಚ್ಚ</p>.<p>ಪ್ರತಿಭಟನೆ ಹಿಂಪಡೆದ ಬಳಿಕ ಸರ್ಕಾರ ತನ್ನ ಮಾತನ್ನು ಮರೆತುಬಿಟ್ಟಿದೆ. ಹಾಗಾಗಿ ಇದೇ 28ರಿಂದ ಮತ್ತೆ ಪ್ರತಿಭಟನೆ ಮುಂದುವರಿಸುತ್ತೇವೆ.<br /><strong>ಕೋಡಿಹಳ್ಳಿ ಚಂದ್ರಶೇಖರ್, ರಾಜ್ಯ ರೈತ ಸಂಘದ ಅಧ್ಯಕ್ಷ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>