ಸುಮಾರು ನಾಲ್ಕು ತಿಂಗಳಿನಿಂದ ಕಾಮಗಾರಿ ನಡೆಯುತ್ತಿದೆ. ಫೆಬ್ರುವರಿ–ಮಾರ್ಚ್ ಒಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ ಇಲ್ಲಿ ಕಾಮಗಾರಿ ನಡೆಯುತ್ತಿರುವ ವೇಗ ನೋಡಿದರೆ ಮಾರ್ಚ್ ಅಲ್ಲ ಆನಂತರ ಆರು ತಿಂಗಳು ಬೇಕಾಗಬಹುದು. ನಾವು ಅಭಿವೃದ್ಧಿ ಬೇಡ ಎಂದು ಹೇಳುವುದಿಲ್ಲ. ಕಾಮಗಾರಿಯನ್ನು ವೇಗವಾಗಿ ಮಾಡುವ ಮೂಲಕ ಜನರಿಗೆ ಸಮಸ್ಯೆ ಕಡಿಮೆ ಮಾಡಬೇಕು.-ನಾರಾಯಣ ಸ್ವಾಮಿ, ಬಾಲಾಜಿ ಎಂಟರ್ಪ್ರೈಸಸ್
ನಮ್ಮ ಸ್ಟುಡಿಯೊದ ಗಾಜು ಒರೆಸಿ ಒರೆಸಿ ಸಾಕಾಗಿ ಹೋಗಿದೆ. ಒಮ್ಮೆ ಒರೆಸಿದರೆ ಕೆಲವೇ ಹೊತ್ತಿನಲ್ಲಿ ಮತ್ತೆ ದೂಳು ಕುಳಿತಿರುತ್ತದೆ. ಈ ರಸ್ತೆ ಅಗೆದು ಹಾಕಿದ ಮೇಲೆ ಹೊಸ ಗ್ರಾಹಕರಲ್ಲ ಕಾಯಂ ಗ್ರಾಹಕರೂ ಬರುತ್ತಿಲ್ಲ. ವ್ಯಾಪಾರ ಸಂಪೂರ್ಣ ಬಿದ್ದು ಹೋಗಿದೆ. ಅದಕ್ಕೆ ಸುಮ್ಮನೆ ಗಾಜು ಒರೆಸಿಕೊಂಡು ಕೂರುವುದೇ ಕೆಲಸವಾಗಿದೆ. ದೂಳು ತಿಂದು ನಮ್ಮ ಆರೋಗ್ಯವೂ ಕೆಟ್ಟು ಹೋಗಿದೆ.--ಪಳನಿ ಎಸ್.ಎ. ಫೋಟೊ ಪಾಯಿಂಟ್
ಯಾವಾಗ ಕಾಮಗಾರಿ ಮುಗಿಯುತ್ತದೋ ಎಂದು ಕಾದು ಕುಳಿತಿದ್ದೇವೆ. ಗ್ರಾಹಕರೇ ಬರುತ್ತಿಲ್ಲ. ದೂಳು ಏಳದಂತೆ ದಿನಕ್ಕೆ ಎರಡು ಬಾರಿ ನೀರು ಚಿಮುಕಿಸಬೇಕು. ಆದರೆ ಬಿಬಿಎಂಪಿಯಾಗಲಿ ಒಳಚರಂಡಿ ಮಂಡಳಿಯಾಗಲಿ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಅಂಗಡಿಯವರೇ ತಮ್ಮ ತಮ್ಮ ಅಂಗಡಿಗಳ ಮುಂದೆ ನೀರು ಹಾಕುತ್ತಿದ್ದಾರೆ. ಬೇಗ ಕಾಮಗಾರಿ ಪೂರ್ಣಗೊಳಿಸಬೇಕು.-ಸ್ವಾಮಿ, ಟೇಲರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.