ಪರಿಸರ ಕುರಿತು ಕುತೂಹಲ ಹೊಂದಿದ್ದ ತೇಜಸ್ವಿ, ತಮ್ಮ ಜೀವಿತದುದ್ದಕ್ಕೂ ತಾವು ಕಂಡ ಜೀವ ವೈವಿಧ್ಯವನ್ನು ಕ್ಯಾಮೆರಾ ಕಣ್ಣಿನ ಮೂಲಕ ಸೆರೆ ಹಿಡಿದಿದ್ದರು. ಅಂಥ ಚಿತ್ರಗಳ ಸರಣಿಯಲ್ಲಿ ಕಪ್ಪೆಗಳೂ ಪ್ರಾಶಸ್ತ್ಯ ಪಡೆದಿವೆ.ಅವರ ಆಶಯದಂತೆ ಜನರಲ್ಲಿ ಪರಿಸರ ಸಂವರ್ಧನೆಯ ಜವಾಬ್ದಾರಿಯನ್ನು ಜಾಗೃತವಾಗಿಸಲು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ, ಪರಿಸರ, ನಿಸರ್ಗ ಸಂರಕ್ಷಣಾ ಸಂಸ್ಥೆ ಪ್ರತಿ ವರ್ಷ ‘ತೇಜಸ್ವಿ ಜೀವಲೋಕ’ ಆಯೋಜಿಸುತ್ತಿದೆ.