<p><strong>ಬೆಂಗಳೂರು:</strong> ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಸಹಯೋಗದೊಂದಿಗೆ ‘ಕ್ವಾಂಟಮ್ ಸಂಶೋಧನಾ ಪಾರ್ಕ್’ ಸ್ಥಾಪನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.</p>.<p>ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು ಈ ವಿಷಯ ತಿಳಿಸಿದರು.</p>.<p>‘ಕ್ವಾಂಟಮ್ ತಂತ್ರಜ್ಞಾನದ ಕ್ರಾಂತಿಯನ್ನು ಮುನ್ನಡೆಸುವ ನಿಟ್ಟಿನಲ್ಲಿ ಕರ್ನಾಟಕದ ಈ ಪ್ರಯತ್ನ ಪ್ರಮುಖ ಹೆಜ್ಜೆಯಾಗಿದೆ. ₹48 ಕೋಟಿ ಅನುದಾನದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ ಈ ಪಾರ್ಕ್ ಸ್ಥಾಪನೆ ಆಗಲಿದೆ. ಜಾಗತಿಕ ಮಟ್ಟದ ಪ್ರಯೋಗಾಲಯಗಳು ಮತ್ತು ಸಂಶೋಧನಾ ಉಪಕರಣಗಳನ್ನು ಹೊಂದಿರಲಿವೆ’ ಎಂದು ಅವರು ಹೇಳಿದರು.</p>.<p>‘ಕ್ವಾಂಟಮ್ ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯ ಸಾಮರ್ಥ್ಯ ಹಾಗೂ ಅವಕಾಶಗಳನ್ನು ವೃದ್ಧಿಸಲು ಈ ಪಾರ್ಕ್ ನೆರವಾಗಲಿದೆ. ವಿದ್ಯಾರ್ಥಿಗಳು, ಸಂಶೋಧಕರು, ನವೋದ್ಯಮಗಳು ಈ ಪಾರ್ಕ್ನ ಸವಲತ್ತುಗಳನ್ನು ಬಳಸಿಕೊಳ್ಳಲು ಅವಕಾಶ ಒದಗಿಸಲಾಗುತ್ತದೆ’ ಎಂದರು.</p>.<p><strong>ಬೂಟ್ ಆಧಾರದಲ್ಲಿ ಸುರಂಗ ರಸ್ತೆ:</strong> ಹೆಬ್ಬಾಳ ಜಂಕ್ಷನ್ನಿಂದ ಎಚ್ಎಸ್ಆರ್ ಲೇಔಟ್ನ ಸಿಲ್ಕ್ಬೋರ್ಡ್ವರೆಗೆ ಉತ್ತರ–ದಕ್ಷಿಣ ಕಾರಿಡಾರ್ (ಸುರಂಗ ರಸ್ತೆ) ಅನ್ನು ಬೂಟ್ (ಬಿಲ್ಡ್ ಓನ್ ಆಪರೇಟ್–ಬಿಒಟಿ) ಆಧಾರದಲ್ಲಿ ನಿರ್ಮಿಸಲಾಗುವುದು. ಇದಕ್ಕಾಗಿ ಸದ್ಯವೇ ಜಾಗತಿಕ ಟೆಂಡರ್ ಕರೆಯಲಾಗುವುದು ಎಂದು ಎಚ್.ಕೆ.ಪಾಟೀಲ ತಿಳಿಸಿದರು.</p>.<p>ಅವಳಿ ಭೂಗತ ಸುರಂಗ ರಸ್ತೆಯ ಉದ್ದ 33.49 ಕಿ.ಮೀ. ಅನ್ನು 26 ತಿಂಗಳಲ್ಲಿ ಕೊರೆಯಲಾಗುತ್ತದೆ ಹಾಗೂ ನಂತರದ 12 ತಿಂಗಳಲ್ಲಿ ನಿರ್ಮಾಣ ಕಾಮಗಾರಿ ನಡೆಯಲಿದೆ. ಇದು ಟೋಲ್ ರಸ್ತೆ ಆಗಿರುತ್ತದೆ ಎಂದರು.</p>.<p><strong>ಮರು ಟೆಂಡರ್:</strong> ಬಿಬಿಎಂಪಿಯ ವ್ಯಾಪ್ತಿಯ ಸಮಗ್ರ ಘನತ್ಯಾಜ್ಯ ನಿರ್ವಹಣೆಯ ಟೆಂಡರ್ ಕರೆದ ಸಂದರ್ಭದಲ್ಲಿ ಯಾವುದೇ ಬಿಡ್ಡುದಾರರು ಭಾಗವಹಿಸದ ಕಾರಣ, ನಾಲ್ಕರ ಬದಲಿಗೆ ಎರಡು ಪ್ಯಾಕೇಜ್ಗಳಲ್ಲಿ ಮರು ಟೆಂಡರ್ ಕರೆಯಲು ಸಚಿವ ಸಂಪುಟ ನಿರ್ಣಯಿಸಿದೆ ಎಂದರು.</p>.<p>ಶೇ 5 ಬಡ್ಡಿ ಸಹಾಯ ಧನ: ನಗರದ ಒಂದು ಲಕ್ಷ ಬಹುಮಹಡಿ ವಸತಿ ಯೋಜನೆಯಡಿ ಸಾಲ ಪಡೆದು ಮನೆ ಖರೀದಿಸುವ ಫಲಾನುಭವಿಗಳಿಗೆ ಶೇ 5 ರಷ್ಟು ಬಡ್ಡಿ ಸಹಾಯಧನ ನೀಡಲಾಗುವುದು ಎಂದರು.</p>.<p>‘ಬಡ್ಡಿ ಸಹಾಯಧನ ಯೋಜನೆ’ಯಡಿ ಫಲಾನುಭವಿಗಳ ಸಾಲದ ಮಾಸಿಕ ಕಂತಿನ ಬಡ್ಡಿ ಭಾಗದಲ್ಲಿ ₹3000 ಮಿತಿಗೆ ಒಳಪಟ್ಟು ಸರ್ಕಾರದಿಂದ ಶೇ 3 ರಿಂದ ಶೇ 5 ರ ಸಹಾಯಧನ ನೀಡಲಾಗುವುದು. ಸಹಾಯಧನವನ್ನು ಸರ್ಕಾರವೇ ಭರಿಸಲಿದೆ. ಈ ಸೌಲಭ್ಯವನ್ನು ಫಲಾನುಭವಿಯ ಸಾಲದ ಅವಧಿಯ 10 ವರ್ಷಗಳ ಅವಧಿಗೆ ಮಾತ್ರ ನೀಡಲಾಗುವುದು’ ಎಂದು ಅವರು ಹೇಳಿದರು.</p>.<p><strong>ಚರ್ಚೆಗೆ ಬಾರದ ಸಮೀಕ್ಷೆ ದತ್ತಾಂಶ:</strong> ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಲ್ಲಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ದತ್ತಾಂಶಗಳ ಅಧ್ಯಯನ ವರದಿಯ ವಿಷಯ ಚರ್ಚೆಗೆ ಬರಲಿಲ್ಲ ಎಂದು ಪಾಟೀಲ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಸಹಯೋಗದೊಂದಿಗೆ ‘ಕ್ವಾಂಟಮ್ ಸಂಶೋಧನಾ ಪಾರ್ಕ್’ ಸ್ಥಾಪನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.</p>.<p>ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು ಈ ವಿಷಯ ತಿಳಿಸಿದರು.</p>.<p>‘ಕ್ವಾಂಟಮ್ ತಂತ್ರಜ್ಞಾನದ ಕ್ರಾಂತಿಯನ್ನು ಮುನ್ನಡೆಸುವ ನಿಟ್ಟಿನಲ್ಲಿ ಕರ್ನಾಟಕದ ಈ ಪ್ರಯತ್ನ ಪ್ರಮುಖ ಹೆಜ್ಜೆಯಾಗಿದೆ. ₹48 ಕೋಟಿ ಅನುದಾನದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ ಈ ಪಾರ್ಕ್ ಸ್ಥಾಪನೆ ಆಗಲಿದೆ. ಜಾಗತಿಕ ಮಟ್ಟದ ಪ್ರಯೋಗಾಲಯಗಳು ಮತ್ತು ಸಂಶೋಧನಾ ಉಪಕರಣಗಳನ್ನು ಹೊಂದಿರಲಿವೆ’ ಎಂದು ಅವರು ಹೇಳಿದರು.</p>.<p>‘ಕ್ವಾಂಟಮ್ ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯ ಸಾಮರ್ಥ್ಯ ಹಾಗೂ ಅವಕಾಶಗಳನ್ನು ವೃದ್ಧಿಸಲು ಈ ಪಾರ್ಕ್ ನೆರವಾಗಲಿದೆ. ವಿದ್ಯಾರ್ಥಿಗಳು, ಸಂಶೋಧಕರು, ನವೋದ್ಯಮಗಳು ಈ ಪಾರ್ಕ್ನ ಸವಲತ್ತುಗಳನ್ನು ಬಳಸಿಕೊಳ್ಳಲು ಅವಕಾಶ ಒದಗಿಸಲಾಗುತ್ತದೆ’ ಎಂದರು.</p>.<p><strong>ಬೂಟ್ ಆಧಾರದಲ್ಲಿ ಸುರಂಗ ರಸ್ತೆ:</strong> ಹೆಬ್ಬಾಳ ಜಂಕ್ಷನ್ನಿಂದ ಎಚ್ಎಸ್ಆರ್ ಲೇಔಟ್ನ ಸಿಲ್ಕ್ಬೋರ್ಡ್ವರೆಗೆ ಉತ್ತರ–ದಕ್ಷಿಣ ಕಾರಿಡಾರ್ (ಸುರಂಗ ರಸ್ತೆ) ಅನ್ನು ಬೂಟ್ (ಬಿಲ್ಡ್ ಓನ್ ಆಪರೇಟ್–ಬಿಒಟಿ) ಆಧಾರದಲ್ಲಿ ನಿರ್ಮಿಸಲಾಗುವುದು. ಇದಕ್ಕಾಗಿ ಸದ್ಯವೇ ಜಾಗತಿಕ ಟೆಂಡರ್ ಕರೆಯಲಾಗುವುದು ಎಂದು ಎಚ್.ಕೆ.ಪಾಟೀಲ ತಿಳಿಸಿದರು.</p>.<p>ಅವಳಿ ಭೂಗತ ಸುರಂಗ ರಸ್ತೆಯ ಉದ್ದ 33.49 ಕಿ.ಮೀ. ಅನ್ನು 26 ತಿಂಗಳಲ್ಲಿ ಕೊರೆಯಲಾಗುತ್ತದೆ ಹಾಗೂ ನಂತರದ 12 ತಿಂಗಳಲ್ಲಿ ನಿರ್ಮಾಣ ಕಾಮಗಾರಿ ನಡೆಯಲಿದೆ. ಇದು ಟೋಲ್ ರಸ್ತೆ ಆಗಿರುತ್ತದೆ ಎಂದರು.</p>.<p><strong>ಮರು ಟೆಂಡರ್:</strong> ಬಿಬಿಎಂಪಿಯ ವ್ಯಾಪ್ತಿಯ ಸಮಗ್ರ ಘನತ್ಯಾಜ್ಯ ನಿರ್ವಹಣೆಯ ಟೆಂಡರ್ ಕರೆದ ಸಂದರ್ಭದಲ್ಲಿ ಯಾವುದೇ ಬಿಡ್ಡುದಾರರು ಭಾಗವಹಿಸದ ಕಾರಣ, ನಾಲ್ಕರ ಬದಲಿಗೆ ಎರಡು ಪ್ಯಾಕೇಜ್ಗಳಲ್ಲಿ ಮರು ಟೆಂಡರ್ ಕರೆಯಲು ಸಚಿವ ಸಂಪುಟ ನಿರ್ಣಯಿಸಿದೆ ಎಂದರು.</p>.<p>ಶೇ 5 ಬಡ್ಡಿ ಸಹಾಯ ಧನ: ನಗರದ ಒಂದು ಲಕ್ಷ ಬಹುಮಹಡಿ ವಸತಿ ಯೋಜನೆಯಡಿ ಸಾಲ ಪಡೆದು ಮನೆ ಖರೀದಿಸುವ ಫಲಾನುಭವಿಗಳಿಗೆ ಶೇ 5 ರಷ್ಟು ಬಡ್ಡಿ ಸಹಾಯಧನ ನೀಡಲಾಗುವುದು ಎಂದರು.</p>.<p>‘ಬಡ್ಡಿ ಸಹಾಯಧನ ಯೋಜನೆ’ಯಡಿ ಫಲಾನುಭವಿಗಳ ಸಾಲದ ಮಾಸಿಕ ಕಂತಿನ ಬಡ್ಡಿ ಭಾಗದಲ್ಲಿ ₹3000 ಮಿತಿಗೆ ಒಳಪಟ್ಟು ಸರ್ಕಾರದಿಂದ ಶೇ 3 ರಿಂದ ಶೇ 5 ರ ಸಹಾಯಧನ ನೀಡಲಾಗುವುದು. ಸಹಾಯಧನವನ್ನು ಸರ್ಕಾರವೇ ಭರಿಸಲಿದೆ. ಈ ಸೌಲಭ್ಯವನ್ನು ಫಲಾನುಭವಿಯ ಸಾಲದ ಅವಧಿಯ 10 ವರ್ಷಗಳ ಅವಧಿಗೆ ಮಾತ್ರ ನೀಡಲಾಗುವುದು’ ಎಂದು ಅವರು ಹೇಳಿದರು.</p>.<p><strong>ಚರ್ಚೆಗೆ ಬಾರದ ಸಮೀಕ್ಷೆ ದತ್ತಾಂಶ:</strong> ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಲ್ಲಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ದತ್ತಾಂಶಗಳ ಅಧ್ಯಯನ ವರದಿಯ ವಿಷಯ ಚರ್ಚೆಗೆ ಬರಲಿಲ್ಲ ಎಂದು ಪಾಟೀಲ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>