‘ಯಾವುದೇ ಕಾಯಿಲೆ ಬಂದ ತಕ್ಷಣ ವಾಸಿಯಾಗಬೇಕೆಂಬ ಮನೋಭಾವ ಬಂದಿದೆ. ವೈದ್ಯರು ಮಾತ್ರೆಯನ್ನು ಬರೆದುಕೊಡದಿದ್ದಲ್ಲಿ ಚಿಕಿತ್ಸೆ ಬಗ್ಗೆಯೇ ರೋಗಿಗಳು ಅನುಮಾನ ವ್ಯಕ್ತಪಡಿಸುತ್ತಾರೆ. ಅತಿಯಾಗಿ ಮಾತ್ರೆಗಳ ಸೇವನೆ ಮಾಡುವುದು ಸಹ ದೀರ್ಘಾವಧಿ ಕಾಯಿಲೆಗೆ ದಾರಿ ಮಾಡಿಕೊಡುತ್ತದೆ ಎನ್ನುವುದನ್ನು ಅರಿತುಕೊಳ್ಳಬೇಕು. ಆದ್ದರಿಂದ ಅನಾರೋಗ್ಯಕ್ಕೆ ಒಳಗಾದಾಗ ಔಷಧ ಬಳಕೆಯನ್ನು ಕಡಿಮೆ ಮಾಡಿ, ಮಾನಸಿಕ ಶಕ್ತಿಯನ್ನು ಬಲಪಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.