<p><strong>ಬೆಂಗಳೂರು:</strong> ಬೆಂಗಳೂರು ನಗರದಲ್ಲಿ ಕೋವಿಡ್–19 ಪ್ರಕರಣಗಳನ್ನು ತ್ವರಿಗತಿಯಲ್ಲಿ ಪತ್ತೆ ಮಾಡಲು ‘ರ್ಯಾಪಿಡ್ ಆಂಟಿಜನ್ ಪರೀಕ್ಷೆ’ ನಡೆಸಲು ಸಚಿವರ ಕಾರ್ಯಪಡೆ ತೀರ್ಮಾನಿಸಿದೆ.</p>.<p>ಬಳ್ಳಾರಿಯಲ್ಲಿ ರ್ಯಾಪಿಡ್ ಪರೀಕ್ಷೆ ನಡೆಸಲಾಗಿದೆ. ಈ ರೀತಿಯ ಪರೀಕ್ಷೆಯಿಂದ ಗಂಟಲ ದ್ರವದಲ್ಲಿ ವೈರಸ್ ಇದೆಯೇ ಎಂಬುದನ್ನು ಬೇಗನೆ ಪತ್ತೆ ಮಾಡಬಹುದು. ಇದರಿಂದ ಕೋವಿಡ್ ಪರೀಕ್ಷೆಯ ಪ್ರಕ್ರಿಯೆಗೆ ವೇಗ ನೀಡಬಹುದು ಎಂದು ಕಾರ್ಯಪಡೆಯ ಸದಸ್ಯರೂ ಆಗಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.</p>.<p>ನಗರದಲ್ಲಿರುವ ಫೀವರ್ ಕ್ಲಿನಿಕ್ಗಳಲ್ಲಿ ರ್ಯಾಪಿಡ್ ಪರೀಕ್ಷೆ ನಡೆಸಲಾಗುವುದು. ಅಲ್ಲದೆ, ರ್ಯಾಂಡಮ್ ಪರೀಕ್ಷೆಯ ಸಂಖ್ಯೆಗಳನ್ನು ಹೆಚ್ಚಿಸಲಾಗುವುದು ಎಂದರು.</p>.<p>ಆಂಟಿಜನ್ ಕಿಟ್ನಿಂದ ಕೊರೊನಾ ವೈರಸ್ ಅನ್ನು ಕೇವಲ 30 ನಿಮಿಷಗಳಲ್ಲಿ ಪತ್ತೆ ಮಾಡಬಹುದು. ಈ ಹಿಂದೆ ಶಂಕಿತ ವ್ಯಕ್ತಿಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿದರೆ 24 ರಿಂದ 48 ಗಂಟೆಗಳು ಕಾಯಬೇಕಾಗಿತ್ತು. ಇದರಿಂದ ವ್ಯಕ್ತಿಯ ಆರೋಗ್ಯದಲ್ಲಿ ಏರುಪೇರಾಗುತ್ತಿತ್ತು. ಈಗ ಅತಿ ಬೇಗನೆ ಪರೀಕ್ಷಾ ವರದಿ ಸಿಗುವುದರಿಂದ ತಕ್ಷಣವೇ ಚಿಕಿತ್ಸೆ ಆರಂಭಿಸಬಹುದು. ಮರಣ ಪ್ರಮಾಣವನ್ನೂ ತಗ್ಗಿಸಬಹುದು ಎಂದು ಬಸವರಾಜ್ ಹೇಳಿದರು.</p>.<p>ಖಾಸಗಿ ಆಸ್ಪತ್ರೆ ವೈದ್ಯರು, ನರ್ಸ್ ಸಿಬ್ಬಂದಿಯನ್ನು ಕೊರೊನಾ ವಾರಿಯರ್ಸ್ ಪಟ್ಟಿಗೆ ಸೇರ್ಪಡೆಗೊಳಿಸಲಾಗುವುದು. ಇದರಿಂದ ಕೊರೊನಾ ವಾರಿಯರ್ಸ್ಗೆ ಇರುವ ವಿಮಾ ಸೌಲಭ್ಯ ಖಾಸಗಿಯವರಿಗೂ ಸಿಗುತ್ತದೆ.</p>.<p>ಕೋವಿಡ್–19 ರೋಗಿಗಳಿಗೆ ಚಿಕಿತ್ಸೆ ನೀಡಲು ನಿರಾಕರಿಸಿದರೆ, ಅಂತಹ ವೈದ್ಯರ ಪರವಾನಗಿಯನ್ನು ನವೀಕರಣಗೊಳಿಸುವುದಿಲ್ಲ. ಪ್ಯಾರಾ ಮೆಡಿಕಲ್ ಸಿಬ್ಬಂದಿಯನ್ನೂ ಬಳಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.</p>.<p>ಲಾಕ್ಡೌನ್ ವಿಚಾರ ಸಭೆಯಲ್ಲಿ ಚರ್ಚೆಗೆ ಬರಲಿಲ್ಲ. ಈ ಬಗ್ಗೆ ತಜ್ಞರೇ ಮುಖ್ಯಮಂತ್ರಿಯರಿಗೆ ವರದಿ ನೀಡಿದ್ದಾರೆ ಎಂದು ಅವರು ಹೇಳಿದರು.</p>.<p><strong>ಕೋವಿಡ್ ಕರ್ತವ್ಯಕ್ಕೆ 64 ತಹಶೀಲ್ದಾರ್ಗಳು</strong><br />ಕೋವಿಡ್ ಸೋಂಕು ನಿಯಂತ್ರಣ ಕರ್ತವ್ಯ ನಿರ್ವಹಿಸುವ ಸಲುವಾಗಿ 64 ಪ್ರೊಬೇಷನರಿ ತಹಸೀಲ್ದಾರ್ಗಳನ್ನು ಬಿಬಿಎಂಪಿ ಸೇವೆಗೆ ಕಂದಾಯ ಇಲಾಖೆ ನಿಯೋಜಿಸಿದೆ.</p>.<p>ಈ ತಹಸೀಲ್ದಾರ್ಗಳು 2015ನೇ ಸಾಲಿನಲ್ಲಿ ನೇಮಕಾತಿಯಲ್ಲಿ ಆಯ್ಕೆಯಾಗಿದ್ದರು. ಇವರನ್ನು ಕೋವಿಡ್ 19 ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ತಕ್ಷಣವೇ ಬಿಬಿಎಂಪಿ ಆಯುಕ್ತರನ್ನು ಭೇಟಿಯಾಗಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಬೇಕು. ಮುಂದಿನ ಆದೇಶದವರೆಗೂ ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಕಂದಾಯ ಇಲಾಖೆ ಸೋಮವಾರ ಆದೇಶ ಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಬೆಂಗಳೂರು ನಗರದಲ್ಲಿ ಕೋವಿಡ್–19 ಪ್ರಕರಣಗಳನ್ನು ತ್ವರಿಗತಿಯಲ್ಲಿ ಪತ್ತೆ ಮಾಡಲು ‘ರ್ಯಾಪಿಡ್ ಆಂಟಿಜನ್ ಪರೀಕ್ಷೆ’ ನಡೆಸಲು ಸಚಿವರ ಕಾರ್ಯಪಡೆ ತೀರ್ಮಾನಿಸಿದೆ.</p>.<p>ಬಳ್ಳಾರಿಯಲ್ಲಿ ರ್ಯಾಪಿಡ್ ಪರೀಕ್ಷೆ ನಡೆಸಲಾಗಿದೆ. ಈ ರೀತಿಯ ಪರೀಕ್ಷೆಯಿಂದ ಗಂಟಲ ದ್ರವದಲ್ಲಿ ವೈರಸ್ ಇದೆಯೇ ಎಂಬುದನ್ನು ಬೇಗನೆ ಪತ್ತೆ ಮಾಡಬಹುದು. ಇದರಿಂದ ಕೋವಿಡ್ ಪರೀಕ್ಷೆಯ ಪ್ರಕ್ರಿಯೆಗೆ ವೇಗ ನೀಡಬಹುದು ಎಂದು ಕಾರ್ಯಪಡೆಯ ಸದಸ್ಯರೂ ಆಗಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.</p>.<p>ನಗರದಲ್ಲಿರುವ ಫೀವರ್ ಕ್ಲಿನಿಕ್ಗಳಲ್ಲಿ ರ್ಯಾಪಿಡ್ ಪರೀಕ್ಷೆ ನಡೆಸಲಾಗುವುದು. ಅಲ್ಲದೆ, ರ್ಯಾಂಡಮ್ ಪರೀಕ್ಷೆಯ ಸಂಖ್ಯೆಗಳನ್ನು ಹೆಚ್ಚಿಸಲಾಗುವುದು ಎಂದರು.</p>.<p>ಆಂಟಿಜನ್ ಕಿಟ್ನಿಂದ ಕೊರೊನಾ ವೈರಸ್ ಅನ್ನು ಕೇವಲ 30 ನಿಮಿಷಗಳಲ್ಲಿ ಪತ್ತೆ ಮಾಡಬಹುದು. ಈ ಹಿಂದೆ ಶಂಕಿತ ವ್ಯಕ್ತಿಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿದರೆ 24 ರಿಂದ 48 ಗಂಟೆಗಳು ಕಾಯಬೇಕಾಗಿತ್ತು. ಇದರಿಂದ ವ್ಯಕ್ತಿಯ ಆರೋಗ್ಯದಲ್ಲಿ ಏರುಪೇರಾಗುತ್ತಿತ್ತು. ಈಗ ಅತಿ ಬೇಗನೆ ಪರೀಕ್ಷಾ ವರದಿ ಸಿಗುವುದರಿಂದ ತಕ್ಷಣವೇ ಚಿಕಿತ್ಸೆ ಆರಂಭಿಸಬಹುದು. ಮರಣ ಪ್ರಮಾಣವನ್ನೂ ತಗ್ಗಿಸಬಹುದು ಎಂದು ಬಸವರಾಜ್ ಹೇಳಿದರು.</p>.<p>ಖಾಸಗಿ ಆಸ್ಪತ್ರೆ ವೈದ್ಯರು, ನರ್ಸ್ ಸಿಬ್ಬಂದಿಯನ್ನು ಕೊರೊನಾ ವಾರಿಯರ್ಸ್ ಪಟ್ಟಿಗೆ ಸೇರ್ಪಡೆಗೊಳಿಸಲಾಗುವುದು. ಇದರಿಂದ ಕೊರೊನಾ ವಾರಿಯರ್ಸ್ಗೆ ಇರುವ ವಿಮಾ ಸೌಲಭ್ಯ ಖಾಸಗಿಯವರಿಗೂ ಸಿಗುತ್ತದೆ.</p>.<p>ಕೋವಿಡ್–19 ರೋಗಿಗಳಿಗೆ ಚಿಕಿತ್ಸೆ ನೀಡಲು ನಿರಾಕರಿಸಿದರೆ, ಅಂತಹ ವೈದ್ಯರ ಪರವಾನಗಿಯನ್ನು ನವೀಕರಣಗೊಳಿಸುವುದಿಲ್ಲ. ಪ್ಯಾರಾ ಮೆಡಿಕಲ್ ಸಿಬ್ಬಂದಿಯನ್ನೂ ಬಳಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.</p>.<p>ಲಾಕ್ಡೌನ್ ವಿಚಾರ ಸಭೆಯಲ್ಲಿ ಚರ್ಚೆಗೆ ಬರಲಿಲ್ಲ. ಈ ಬಗ್ಗೆ ತಜ್ಞರೇ ಮುಖ್ಯಮಂತ್ರಿಯರಿಗೆ ವರದಿ ನೀಡಿದ್ದಾರೆ ಎಂದು ಅವರು ಹೇಳಿದರು.</p>.<p><strong>ಕೋವಿಡ್ ಕರ್ತವ್ಯಕ್ಕೆ 64 ತಹಶೀಲ್ದಾರ್ಗಳು</strong><br />ಕೋವಿಡ್ ಸೋಂಕು ನಿಯಂತ್ರಣ ಕರ್ತವ್ಯ ನಿರ್ವಹಿಸುವ ಸಲುವಾಗಿ 64 ಪ್ರೊಬೇಷನರಿ ತಹಸೀಲ್ದಾರ್ಗಳನ್ನು ಬಿಬಿಎಂಪಿ ಸೇವೆಗೆ ಕಂದಾಯ ಇಲಾಖೆ ನಿಯೋಜಿಸಿದೆ.</p>.<p>ಈ ತಹಸೀಲ್ದಾರ್ಗಳು 2015ನೇ ಸಾಲಿನಲ್ಲಿ ನೇಮಕಾತಿಯಲ್ಲಿ ಆಯ್ಕೆಯಾಗಿದ್ದರು. ಇವರನ್ನು ಕೋವಿಡ್ 19 ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ತಕ್ಷಣವೇ ಬಿಬಿಎಂಪಿ ಆಯುಕ್ತರನ್ನು ಭೇಟಿಯಾಗಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಬೇಕು. ಮುಂದಿನ ಆದೇಶದವರೆಗೂ ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಕಂದಾಯ ಇಲಾಖೆ ಸೋಮವಾರ ಆದೇಶ ಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>