<p><strong>ಬೆಂಗಳೂರು</strong>: ಕೊರೊನಾ ಕಾರಣದಿಂದ ಪಠ್ಯ ಪರಿಷ್ಕರಣೆ ವೇಳೆ ಯಾವ ಕಾರಣಕ್ಕೂ ಸಂವಿಧಾನದ ವಿಚಾರಗಳನ್ನು ಕೈಬಿಡಬಾರದು ಎಂದು ‘ಸಂವಿಧಾನ ಓದು ಅಭಿಯಾನ ಸಮಿತಿ’ ಆಗ್ರಹಿಸಿದೆ.</p>.<p>ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರಿಗೆ ಪತ್ರ ಬರೆದಿರುವ ಸಮಿತಿ, 'ವಿಷಯ ತಜ್ಞರ ಅಭಿಪ್ರಾಯ ಪಡೆದೇ ಪಠ್ಯ ಕಡಿತ ಮಾಡಬೇಕು. ಅಲ್ಲಿ ಪಾರದರ್ಶಕತೆ ಉಳಿಸಿಕೊಳ್ಳಬೇಕು' ಎಂದು<br />ಒತ್ತಾಯಿಸಿದೆ.</p>.<p>'ಸ್ವಾತಂತ್ರ ಹೋರಾಟಗಾರರಾದ ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಹೈದರಾಲಿ, ಟಿಪ್ಪು ಸುಲ್ತಾನ್, ರಾಣಿ ಅಬ್ಬಕ್ಕ ಅವರಂತಹ ವೀರರ ಚರಿತ್ರೆ ಮಕ್ಕಳಿಗೆ ಸಿಗಬೇಕು. ಇಲ್ಲದಿದ್ದರೆ ದೇಶದ ನಿಜವಾದ ಚರಿತ್ರೆಯ ಅರಿವಿಲ್ಲದ ಸ್ಥಿತಿಯಲ್ಲಿ ನಮ್ಮ ಮುಂದಿನ ಜನಾಂಗ ರೂಪುಗೊಳ್ಳಲಿದೆ. ಹಾಗಾಗಿ, ಆ ಅಂಶಗಳನ್ನು ಮೊದಲಿ ನಂತೆಯೇ ಪಠ್ಯಗಳಲ್ಲಿ ಇರುವಂತೆ ನೋಡಿಕೊಳ್ಳಬೇಕು' ಎಂದು ವಿನಂತಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಕೊರೊನಾ ಕಾರಣದಿಂದ ಪಠ್ಯ ಪರಿಷ್ಕರಣೆ ವೇಳೆ ಯಾವ ಕಾರಣಕ್ಕೂ ಸಂವಿಧಾನದ ವಿಚಾರಗಳನ್ನು ಕೈಬಿಡಬಾರದು ಎಂದು ‘ಸಂವಿಧಾನ ಓದು ಅಭಿಯಾನ ಸಮಿತಿ’ ಆಗ್ರಹಿಸಿದೆ.</p>.<p>ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರಿಗೆ ಪತ್ರ ಬರೆದಿರುವ ಸಮಿತಿ, 'ವಿಷಯ ತಜ್ಞರ ಅಭಿಪ್ರಾಯ ಪಡೆದೇ ಪಠ್ಯ ಕಡಿತ ಮಾಡಬೇಕು. ಅಲ್ಲಿ ಪಾರದರ್ಶಕತೆ ಉಳಿಸಿಕೊಳ್ಳಬೇಕು' ಎಂದು<br />ಒತ್ತಾಯಿಸಿದೆ.</p>.<p>'ಸ್ವಾತಂತ್ರ ಹೋರಾಟಗಾರರಾದ ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಹೈದರಾಲಿ, ಟಿಪ್ಪು ಸುಲ್ತಾನ್, ರಾಣಿ ಅಬ್ಬಕ್ಕ ಅವರಂತಹ ವೀರರ ಚರಿತ್ರೆ ಮಕ್ಕಳಿಗೆ ಸಿಗಬೇಕು. ಇಲ್ಲದಿದ್ದರೆ ದೇಶದ ನಿಜವಾದ ಚರಿತ್ರೆಯ ಅರಿವಿಲ್ಲದ ಸ್ಥಿತಿಯಲ್ಲಿ ನಮ್ಮ ಮುಂದಿನ ಜನಾಂಗ ರೂಪುಗೊಳ್ಳಲಿದೆ. ಹಾಗಾಗಿ, ಆ ಅಂಶಗಳನ್ನು ಮೊದಲಿ ನಂತೆಯೇ ಪಠ್ಯಗಳಲ್ಲಿ ಇರುವಂತೆ ನೋಡಿಕೊಳ್ಳಬೇಕು' ಎಂದು ವಿನಂತಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>