ಕಲಾಸಿಪಾಳ್ಯ, ಜಗಜೀವನರಾಂ ನಗರ, ಹಳೇ ಗುಡ್ಡದಹಳ್ಳಿ, ಅಂಚೆಪಾಳ್ಯ, ದೊಡ್ಡಬಸ್ತಿ, ಶಿವಾಜಿನಗರ, ಯಲಹಂಕ ಸೇರಿದಂತೆ ಮೈಸೂರು ರಸ್ತೆ ಅಂಚಿನ ಬಹುತೇಕ ಬಡಾವಣೆಗಳಿಂದ ಸಮಾವೇಶಕ್ಕೆ ಆಗಮಿಸಿದ್ದರು. ಹಾಜಿ ಫಾರೂಕ್ ಸಾಬ್, ನಿಸಾರ್ ಅಹಮದ್ ಸಾಬ್, ಖಾಜಾ ಸಾಬ್ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಮೌಲ್ವಿಗಳು ಧಾರ್ಮಿಕ ಸಂದೇಶ ಬೋಧಿಸಿದರು. ಜೀವನ ಮೌಲ್ಯಗಳ ಮಹತ್ವವನ್ನು ಸಾರಿದರು.