ಆಕ್ಷೇಪ ಏನು?: ‘ಬೆಂಗಳೂರು ದಕ್ಷಿಣ ಉತ್ತರಹಳ್ಳಿ ಹೋಬಳಿಯ ಕೊತ್ತನೂರು ಗ್ರಾಮದಲ್ಲಿ 11 ಎಕರೆ 13 ಗುಂಟೆ ಪ್ರದೇಶದಲ್ಲಿ ದೀಪಕ್ ಲೇ ಔಟ್ ನಿರ್ಮಿಸಿ ನಿವೇಶನ ಹಂಚಿಕೆ ಮಾಡಲಾಗಿತ್ತು. 20017ರಲ್ಲಿ ಬಡಾವಣೆಯನ್ನು ಬಿಡಿಎಗೆ ಹಸ್ತಾಂತರ ಮಾಡಲಾಗಿತ್ತು. ಏತನ್ಮಧ್ಯೆ 2011ರಲ್ಲಿ ಬಿಡಿಎ 8ನೇ ಹಂತದ ಬಡಾವಣೆ ಅಭಿವೃದ್ಧಿಗೆ ಅಧಿಸೂಚನೆ ಹೊರಡಿಸಿತು. ಇದರಲ್ಲಿ ದೀಪಕ್ ಬಡಾವಣೆಯನ್ನೂ ಸೇರ್ಪಡೆ ಮಾಡಲಾಗಿದೆ. ಇದರಿಂದ ಹಾಲಿ ಇರುವ ದೀಪಕ್ ಲೇ ಔಟ್ ನಿವೇಶನದಾರರಿಗೆ ತೊಂದರೆ ಉಂಟಾಗಿದೆ’ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.