‘ಪ್ರಜಾವಾಣಿ’ಯ ಸೆ. 6ರ ಸಂಚಿಕೆಯಲ್ಲಿ ‘39 ಹೊಸ ಹುದ್ದೆ ಸೃಷ್ಟಿಗೆ ವಿರೋಧ’ ಎಂಬ ಶೀರ್ಷಿಕೆಯಲ್ಲಿ ಪ್ರಕಟವಾದ ಸುದ್ದಿಯನ್ನು ಉಲ್ಲೇಖಿಸಿ ಎಸಿಎಸ್ ಅವರಿಗೆ ಪತ್ರ ಬರೆದಿರುವ ಸಂಘವು, ‘ಬಿಬಿಎಂಪಿಯ ನಗರ ಯೋಜನಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ನಗರ ಯೋಜನೆಗೆ ಸಂಬಂಧವೇ ಇಲ್ಲದ ಕೆಳ ಹಂತದಅನ್ಯ ಹುದ್ದೆಗಳಿಗೆ ನೇಮಕಗೊಂಡು ಬಡ್ತಿ ಪಡೆದವರಾಗಿದ್ದಾರೆ. ಬಿಬಿಎಂಪಿ ಮರುರಚನೆ ಸಂದರ್ಭದಲ್ಲಿ ಹೊಸ ಹುದ್ದೆ ಸೃಷ್ಟಿಸುವ ಪ್ರಸ್ತಾವನೆಯನ್ನು ಅವರು ವಿರೋಧಿಸುವುದಕ್ಕೆ ವೈಯಕ್ತಿಕ ಹಿತಾಸಕ್ತಿಯೇ ಕಾರಣ. ಈ ಹುದ್ದೆಗಳ ಸೃಷ್ಟಿಗೆ ಬಿಬಿಎಂಪಿ ಅಧಿಕಾರಿಗಳ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘವು ವಿರೋಧ ವ್ಯಕ್ತಪಡಿಸಿರುವುದಕ್ಕೆ ಮಹತ್ವ ನೀಡಬಾರದು’ ಎಂದು ಒತ್ತಾಯಿಸಿದೆ.