‘ಡಿಪ್ಲೊಮಾ ಪೂರ್ಣಗೊಳಿಸಿದ್ದ ಜಯಕುಮಾರ್, 2012ರಲ್ಲಿ ನಗರದ ಕಂಪನಿಯೊಂದರಲ್ಲಿ ವ್ಯವಸ್ಥಾಪಕನಾಗಿ ಕೆಲಸಕ್ಕೆ ಸೇರಿದ್ದ. ಕೈ ತುಂಬ ಹಣ ಬರುತ್ತಿದ್ದಂತೆ ಪಬ್ ಹಾಗೂ ಬಾರ್ಗಳಿಗೆ ಹೋಗಿ ಪಾರ್ಟಿ ಮಾಡಲಾರಂಭಿಸಿದ್ದ. ಖರ್ಚಿಗೆ ಹಣದ ಸಮಸ್ಯೆಯಾಗುತ್ತಿದ್ದಂತೆ ವ್ಯವಸ್ಥಾಪಕ ಹುದ್ದೆಗೆ ರಾಜೀನಾಮೆ ಕೊಟ್ಟು, ಸಹಚರರಾದ ಕಾರ್ತಿಕ್ ಮತ್ತು ಅರುಣ್ ಜೊತೆ ಸೇರಿ ಸರಗಳವು ಮಾಡಲಾರಂಭಿಸಿದ್ದ. ಕದ್ದ ಆಭರಣ ಮಾರಿ ಹಣ ಸಂಪಾದಿಸುತ್ತಿದ್ದ’ ಎಂದೂ ತಿಳಿಸಿದರು.