ಅಭಿಯಾನದಲ್ಲಿ ಪಾಲ್ಗೊಂಡಿದ್ದ ಸಿಬ್ಬಂದಿ ಹಾಗೂ ಪೊಲೀಸರು, ಜಾಗೃತಿ ಫಲಕಗಳನ್ನು ಪ್ರದರ್ಶಿಸಿದರು. ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಇಂದಿರಾನಗರ, ಮುರುಗೇಶಪಾಳ್ಯ, ಕುಂದಲಹಳ್ಳಿ ಸಿಗ್ನಲ್, ಕಾರ್ಪೊರೇಷನ್ ವೃತ್ತ, ಚಾಲುಕ್ಯ ವೃತ್ತ, ಸೌತ್ ಎಂಡ್ ವೃತ್ತ, ಬಾಣಸವಾಡಿ ಹಾಗೂ ಕೋರಮಂಗಲ ಸೋನಿ ಸಿಗ್ನಲ್ ಹಾಗೂ ಸುತ್ತಮುತ್ತ ಅಭಿಯಾನ ನಡೆಯಿತು. ಸೆ. 14ರಿಂದ ಅಭಿಯಾನ ಆರಂಭವಾಗಿದ್ದು, ಸೆ. 23ರಂದು ಸಮಾಪ್ತಗೊಳ್ಳಲಿದೆ.