ನಗರದ ಹುರಿಯೋಪೇಟೆಯ ಲಕ್ಷ್ಮಣರಾವ್ ರಸ್ತೆಯ ಬದಿಯಲ್ಲಿ ಇರಿಸಿರುವ ಕೊಳವೆಗಳ ರಾಶಿ -ಪ್ರಜಾವಾಣಿ ಚಿತ್ರ/ ರಂಜು ಪಿ
ಭರತ್
ಗೋಪಾಲಕೃಷ್ಣ
ವಿಶಾಲ್ ಜೈನ್
ಶಿವಾನಂದ್
ಲಕ್ಷ್ಮಣರಾವ್ ರಸ್ತೆಯ ಬದಿಯಲ್ಲಿ ಹಾಕಿರುವ ಕಸ -ಪ್ರಜಾವಾಣಿ ಚಿತ್ರ/ ರಂಜು ಪಿ
ಮಳೆ ಬಂದರೆ ರಸ್ತೆಯಲ್ಲ ಕೆಸರು ಗದ್ದೆಯಾಗುತ್ತದೆ. ರಸ್ತೆಯಲ್ಲಿಯೇ ಕಸ ಹಾಕುವುದರಿಂದ ಇಡೀ ಪ್ರದೇಶ ಗಬ್ಬೆದ್ದು ನಾರುತ್ತಿದೆ. ಸೊಳ್ಳೆಗಳ ಕಾಟ ಹೆಚ್ಚಾಗಿದ್ದು ಡೆಂಗಿ ಮಲೇರಿಯಾ ಹರಡುವ ಭೀತಿ ಎದುರಾಗಿದೆ.
-ಭರತ್ ಸ್ಥಳೀಯ ನಿವಾಸಿ
ಸ್ಥಳೀಯ ಶಾಸಕರು ಆಗಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಪ್ರತಿನಿಧಿಸುವ ಕ್ಷೇತ್ರದಲ್ಲಿ ಸ್ವಚ್ಛತೆ ಮರೀಚಿಕೆ ಆಗಿದೆ. ಗಣಪತಿ ಹಬ್ಬಕ್ಕಿಂತ ಮೊದಲು ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು.
-ಗೋಪಾಲಕೃಷ್ಣ ಸ್ಥಳೀಯರು
ಬಿಬಿಎಂಪಿಗೆ ಚಿಕ್ಕಪೇಟೆ ಭಾಗದಿಂದ ತೆರಿಗೆ ಸಂಗ್ರವಾಗುತ್ತಿದೆ. ಆದರೆ ಇಲ್ಲಿ ಅದಕ್ಕೆ ತಕ್ಕಂತೆ ಮೂಲಸೌಕರ್ಯ ನೀಡುತ್ತಿಲ್ಲ.
ವಿಶಾಲ್ ಜೈನ್ ವ್ಯಾಪಾರಿ
ಹುರಿಯೋಪೇಟೆ ರಸ್ತೆ ಮತ್ತು ಕಸದ ಸಮಸ್ಯೆ ನಿವಾರಿಸುವಂತೆ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಸಲ್ಲಿಸಿದರೆ ‘ನಿಮ್ಮ ವಾರ್ಡ್ನಲ್ಲಿ ನನಗೆ ಮತ ಬಂದಿಲ್ಲ. ನಿಮ್ಮ ಸಮಸ್ಯೆಗೆ ನಾನೇಕೆ ಸ್ಪಂದಿಸಬೇಕು’ ಎಂದು ಸಚಿವರು ಪ್ರಶ್ನಿಸುತಿದ್ದಾರೆ.