ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ (ಕೆಶಿಪ್) -2ರಡಿ ಈ ರಸ್ತೆಯನ್ನು ಮಾಗಡಿ-ದಾಬಸ್ ಪೇಟೆ-ಕೊರಟಗೆರೆವರೆಗೆ ಸುಮಾರು 68 ಕಿ.ಮೀ. ಅಭಿವೃದ್ಧಿಪಡಿಸಲಾಗಿತ್ತು. ಈ ರಸ್ತೆ ಮಾರ್ಗದ ಮೂಲಕ ತುಮಕೂರು, ಕೊರಟಗೆರೆ, ಮಧುಗಿರಿ, ಪಾವಗಡ, ಆಂಧ್ರಪ್ರದೇಶದ ಮಿಡಗೇಶಿ, ಕಲ್ಯಾಣದುರ್ಗಕ್ಕೆ ಸಂಪರ್ಕಿಸಲಿದೆ. ದೇವರಾಯನದುರ್ಗ, ಗೊರವನಹಳ್ಳಿ ಲಕ್ಷ್ಮಿ ದೇವಾಲಯ, ಮಧುಗಿರಿ ಏಕಶಿಲಾ ಬೆಟ್ಟ, ಪಾವಗಡದ ಶನಿಮಹಾತ್ಮ ದೇವಾಲಯಗಳಿಗೆ ಇದೇ ಮಾರ್ಗದಲ್ಲಿ ಸಾಗಬೇಕಿದೆ. ಒಂದು ವರ್ಷದಿಂದ ಈ ರಸ್ತೆಯಲ್ಲಿ ಗುಂಡಿಗಳು ಹೆಚ್ಚಾಗಿವೆ.