<p><strong>ಬೆಂಗಳೂರು:</strong> ಗುಟ್ಕಾ ಮಾರಾಟಗಾರರು ತೆರಳುತ್ತಿದ್ದ ಕಾರು ಅಡ್ಡಗಟ್ಟಿ ಹಲ್ಲೆ ನಡೆಸಿ, ಹಣ ಸುಲಿಗೆ ಮಾಡಿದ್ದ ಆರೋಪಿಗಳ ಪೈಕಿ ಮಾಗಡಿ ಮಂಜ ಎಂಬಾತನನ್ನು ಬ್ಯಾಡರಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.</p>.<p>ಮುಖೇಶ್ ಭಾಯ್ ಬಿ ರಬಾರಿ ಅವರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.</p>.<p>‘ಮುಖೇಶ್ ಭಾಯ್ ಬಿ. ರಬಾರಿ ಹಾಗೂ ಜಮಾಭಾಯ್ ಅವರು ₹3.65 ಲಕ್ಷ ಮೌಲ್ಯದ ವಿವಿಧ ಮಾದರಿಯ ಗುಟ್ಕಾ ಪದಾರ್ಥಗಳನ್ನು ಕಾರಿನಲ್ಲಿ ತುಂಬಿಕೊಂಡು ಬಿಇಎಲ್ ಲೇಔಟ್ನಲ್ಲಿ ತೆರಳುತ್ತಿದ್ದರು. ಪಾವನಿ ಚಾಟ್ಸ್ ಬಳಿ ಕಾರು ಅಡ್ಟಗಟ್ಟಿದ ಮಾಗಡಿ ಮಂಜ ಮತ್ತು ಸಹಚರರು, ಕಾರಿನ ಗಾಜು ಒಡೆದು ಹಾಕಿದ್ದರು. ನಂತರ ಮೊಬೈಲ್ ಕಸಿದುಕೊಂಡು ₹ 10 ಲಕ್ಷ ನೀಡುವಂತೆ ಬೆದರಿಕೆ ಹಾಕಿದ್ದರು. ಬಳಿಕ ಮುಖೇಶ್ ಭಾಯ್ ಬಿ ರಬಾರಿ ಹಾಗೂ ಜಮಾಭಾಯ್ ಅವರ ಬಳಿಯಿದ್ದ ₹2 ಲಕ್ಷ ಕಸಿದುಕೊಂಡು ಪರಾರಿ ಆಗಿದ್ದರು’ ಎಂದು ಪೊಲೀಸರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಗುಟ್ಕಾ ಮಾರಾಟಗಾರರು ತೆರಳುತ್ತಿದ್ದ ಕಾರು ಅಡ್ಡಗಟ್ಟಿ ಹಲ್ಲೆ ನಡೆಸಿ, ಹಣ ಸುಲಿಗೆ ಮಾಡಿದ್ದ ಆರೋಪಿಗಳ ಪೈಕಿ ಮಾಗಡಿ ಮಂಜ ಎಂಬಾತನನ್ನು ಬ್ಯಾಡರಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.</p>.<p>ಮುಖೇಶ್ ಭಾಯ್ ಬಿ ರಬಾರಿ ಅವರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.</p>.<p>‘ಮುಖೇಶ್ ಭಾಯ್ ಬಿ. ರಬಾರಿ ಹಾಗೂ ಜಮಾಭಾಯ್ ಅವರು ₹3.65 ಲಕ್ಷ ಮೌಲ್ಯದ ವಿವಿಧ ಮಾದರಿಯ ಗುಟ್ಕಾ ಪದಾರ್ಥಗಳನ್ನು ಕಾರಿನಲ್ಲಿ ತುಂಬಿಕೊಂಡು ಬಿಇಎಲ್ ಲೇಔಟ್ನಲ್ಲಿ ತೆರಳುತ್ತಿದ್ದರು. ಪಾವನಿ ಚಾಟ್ಸ್ ಬಳಿ ಕಾರು ಅಡ್ಟಗಟ್ಟಿದ ಮಾಗಡಿ ಮಂಜ ಮತ್ತು ಸಹಚರರು, ಕಾರಿನ ಗಾಜು ಒಡೆದು ಹಾಕಿದ್ದರು. ನಂತರ ಮೊಬೈಲ್ ಕಸಿದುಕೊಂಡು ₹ 10 ಲಕ್ಷ ನೀಡುವಂತೆ ಬೆದರಿಕೆ ಹಾಕಿದ್ದರು. ಬಳಿಕ ಮುಖೇಶ್ ಭಾಯ್ ಬಿ ರಬಾರಿ ಹಾಗೂ ಜಮಾಭಾಯ್ ಅವರ ಬಳಿಯಿದ್ದ ₹2 ಲಕ್ಷ ಕಸಿದುಕೊಂಡು ಪರಾರಿ ಆಗಿದ್ದರು’ ಎಂದು ಪೊಲೀಸರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>