‘ಭಾನುವಾರ ಎಂದಿನಂತೆ ರಾಹುಲ್ ಕೆಲಸಕ್ಕೆ ಬಂದಿದ್ದರು. ಬೆಳಿಗ್ಗೆ 10ರ ಸುಮಾರಿಗೆ ಗ್ರಾಹಕರ ಸೋಗಿನಲ್ಲಿ ಮಳಿಗೆಗೆ ಬಂದಿದ್ದ ದುಷ್ಕರ್ಮಿಗಳು, ಚಿನ್ನದ ಸರ ಬೇಕೆಂದು ಕೇಳಿದ್ದರು. ರಾಹುಲ್ ಚಿನ್ನದ ಸರ ತಂದು ತೋರಿಸಿದ್ದರು. ನಂತರ, ಉಂಗುರ ಬೇಕೆಂದು ಆರೋಪಿಗಳು ಕೇಳಿದ್ದರು. ಉಂಗುರ ತರಲು ರಾಹುಲ್ ಲಾಕರ್ ಬಳಿ ಹೊರಟಿದ್ದಾಗ ಹಿಂಬಾಲಿಸಿದ್ದ ಆರೋಪಿಗಳು, ದಾಳಿ ಮಾಡಿದ್ದರು. ರಾಹುಲ್ ಕುತ್ತಿಗೆಗೆ ಚಾಕು ಹಿಡಿದಿದ್ದ ದುಷ್ಕರ್ಮಿಗಳು, ಪಿಸ್ತೂಲ್ ತೋರಿಸಿ ಬೆದರಿಸಿದ್ದರು. ರಾಹುಲ್ನ ಕೈ-ಕಾಲು ಕಟ್ಟಿ ಬಾಯಿಗೆ ಟೇಪ್ ಸುತ್ತಿದ್ದರು’ ಎಂದೂ ಅಧಿಕಾರಿ ತಿಳಿಸಿದರು.