<p><strong>ಬೆಂಗಳೂರು:</strong> ಗ್ರಾಹಕರಿಗೆ ಆರೋಗ್ಯಪೂರ್ಣ ದೇಸಿ ಹಾಲು ಪೂರೈಸಲು ಕರ್ನಾಟಕ ಹಾಲು ಮಹಾಮಂಡಳಿ ಹರಿಯಾಣದ ನಾಟಿ ತಳಿಯ ಹಸುಗಳನ್ನು ತರಿಸಿ ರೈತರಿಗೆ ವಿತರಿಸುತ್ತಿದೆ. ಇದಕ್ಕೆ ಸರ್ಕಾರ ಶೇ 50ರಷ್ಟು ಸಹಾಯಧನವನ್ನೂ ನೀಡುತ್ತಿದೆ.</p>.<p>ಗಿರ್ ಮತ್ತು ಸಾಹಿವಾಲ್ ತಳಿಯ 500 ಹಸುಗಳನ್ನು ಬೆಂಗಳೂರು ಹಾಲು ಒಕ್ಕೂಟದಿಂದ ತರಿಸಲಾಗಿದ್ದು, ಕನಕಪುರ ಮತ್ತು ಮಾಗಡಿ ಭಾಗದ ಆಸಕ್ತ ರೈತರಿಗೆ ವಿತರಣೆ ಮಾಡಲಾಗಿದೆ. ಸರಾಸರಿ ₹80 ಸಾವಿರ ಮೌಲ್ಯದ ಈ ಹಸುಗಳನ್ನು ಖರೀದಿಸುವ ರೈತರಿಗೆ ₹40 ಸಾವಿರ ಸಹಾಯಧನ ಸಿಗಲಿದೆ.</p>.<p>‘ರಾಜ್ಯದ ನಾಟಿ ಹಸುಗಳು ಒಂದೂವರೆಯಿಂದ 2ಲೀಟರ್ ಹಾಲು ಕೊಡುತ್ತವೆ. ಸಾಹಿವಾಲ್ ಹಸುಗಳು 10ರಿಂದ 12 ಲೀಟರ್ ಹಾಲು ಕೊಡುತ್ತವೆ. ಎ–2 ಮಾದರಿಯ ಬಿಟಾ–ಕೇಸಿನ್ ಮತ್ತು ಇತರೆ ಪೋಷಕಾಂಶಗಳನ್ನು ಹೊಂದಿದೆ. ಮಕ್ಕಳಿಗೆ ಈ ಹಾಲು ಕುಡಿಸಿದರೆ ಬುದ್ಧಿಶಕ್ತಿ ಹೆಚ್ಚಾಗುತ್ತದೆ’ ಎಂದು ಬಮೂಲ್ ಅಧ್ಯಕ್ಷ ನರಸಿಂಹಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಖಾಸಗಿಯವರು ಲೀಟರ್ಗೆ ₹120ರಿಂದ ₹130 ಪಡೆದು ಮಾರಾಟ ಮಾಡುತ್ತಿದ್ದಾರೆ. ನಾವು ಕಲಬೆರಕೆಗೆ ಅವಕಾಶ ಇಲ್ಲದಂತೆ ಪ್ರತ್ಯೇಕವಾಗಿ ಸಂಸ್ಕರಿಸಿ ಲೀಟರ್ಗೆ ₹80ಕ್ಕೆ ಮಾರಾಟ ಮಾಡುತ್ತಿದ್ದೇವೆ’ ಎಂದು ಅವರು ಹೇಳಿದರು.</p>.<p class="Subhead">ದುಬೈನಲ್ಲಿ ನಂದಿನಿ ಉತ್ಪನ್ನಕ್ಕೆ ಬೇಡಿಕೆ: ‘ನಂದಿನಿ ಉತ್ಪನ್ನಗಳಿಗೆ ದುಬೈನಲ್ಲಿ ಬೇಡಿಕೆ ಇದ್ದು, ರಫ್ತು ಮಾಡುವ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.</p>.<p>‘ನಂದಿನಿ ತುಪ್ಪಕ್ಕೆ ಹೆಚ್ಚಿನ ಬೇಡಿಕೆ ಇದೆ ಎಂಬ ಮಾಹಿತಿಯನ್ನು ದುಬೈನಲ್ಲಿರುವ ಭಾರತೀಯ ಮೂಲದ ಉದ್ಯಮಿಗಳು ತಿಳಿಸಿದ್ದಾರೆ. ಅವರ ಮೂಲಕವೇ ದುಬೈಗೆ ನಂದಿನಿ ಉತ್ಪನ್ನಗಳನ್ನು ಕಳುಹಿಸಲು ವ್ಯವಹರಿಸಲಾಗುತ್ತಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಗ್ರಾಹಕರಿಗೆ ಆರೋಗ್ಯಪೂರ್ಣ ದೇಸಿ ಹಾಲು ಪೂರೈಸಲು ಕರ್ನಾಟಕ ಹಾಲು ಮಹಾಮಂಡಳಿ ಹರಿಯಾಣದ ನಾಟಿ ತಳಿಯ ಹಸುಗಳನ್ನು ತರಿಸಿ ರೈತರಿಗೆ ವಿತರಿಸುತ್ತಿದೆ. ಇದಕ್ಕೆ ಸರ್ಕಾರ ಶೇ 50ರಷ್ಟು ಸಹಾಯಧನವನ್ನೂ ನೀಡುತ್ತಿದೆ.</p>.<p>ಗಿರ್ ಮತ್ತು ಸಾಹಿವಾಲ್ ತಳಿಯ 500 ಹಸುಗಳನ್ನು ಬೆಂಗಳೂರು ಹಾಲು ಒಕ್ಕೂಟದಿಂದ ತರಿಸಲಾಗಿದ್ದು, ಕನಕಪುರ ಮತ್ತು ಮಾಗಡಿ ಭಾಗದ ಆಸಕ್ತ ರೈತರಿಗೆ ವಿತರಣೆ ಮಾಡಲಾಗಿದೆ. ಸರಾಸರಿ ₹80 ಸಾವಿರ ಮೌಲ್ಯದ ಈ ಹಸುಗಳನ್ನು ಖರೀದಿಸುವ ರೈತರಿಗೆ ₹40 ಸಾವಿರ ಸಹಾಯಧನ ಸಿಗಲಿದೆ.</p>.<p>‘ರಾಜ್ಯದ ನಾಟಿ ಹಸುಗಳು ಒಂದೂವರೆಯಿಂದ 2ಲೀಟರ್ ಹಾಲು ಕೊಡುತ್ತವೆ. ಸಾಹಿವಾಲ್ ಹಸುಗಳು 10ರಿಂದ 12 ಲೀಟರ್ ಹಾಲು ಕೊಡುತ್ತವೆ. ಎ–2 ಮಾದರಿಯ ಬಿಟಾ–ಕೇಸಿನ್ ಮತ್ತು ಇತರೆ ಪೋಷಕಾಂಶಗಳನ್ನು ಹೊಂದಿದೆ. ಮಕ್ಕಳಿಗೆ ಈ ಹಾಲು ಕುಡಿಸಿದರೆ ಬುದ್ಧಿಶಕ್ತಿ ಹೆಚ್ಚಾಗುತ್ತದೆ’ ಎಂದು ಬಮೂಲ್ ಅಧ್ಯಕ್ಷ ನರಸಿಂಹಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಖಾಸಗಿಯವರು ಲೀಟರ್ಗೆ ₹120ರಿಂದ ₹130 ಪಡೆದು ಮಾರಾಟ ಮಾಡುತ್ತಿದ್ದಾರೆ. ನಾವು ಕಲಬೆರಕೆಗೆ ಅವಕಾಶ ಇಲ್ಲದಂತೆ ಪ್ರತ್ಯೇಕವಾಗಿ ಸಂಸ್ಕರಿಸಿ ಲೀಟರ್ಗೆ ₹80ಕ್ಕೆ ಮಾರಾಟ ಮಾಡುತ್ತಿದ್ದೇವೆ’ ಎಂದು ಅವರು ಹೇಳಿದರು.</p>.<p class="Subhead">ದುಬೈನಲ್ಲಿ ನಂದಿನಿ ಉತ್ಪನ್ನಕ್ಕೆ ಬೇಡಿಕೆ: ‘ನಂದಿನಿ ಉತ್ಪನ್ನಗಳಿಗೆ ದುಬೈನಲ್ಲಿ ಬೇಡಿಕೆ ಇದ್ದು, ರಫ್ತು ಮಾಡುವ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.</p>.<p>‘ನಂದಿನಿ ತುಪ್ಪಕ್ಕೆ ಹೆಚ್ಚಿನ ಬೇಡಿಕೆ ಇದೆ ಎಂಬ ಮಾಹಿತಿಯನ್ನು ದುಬೈನಲ್ಲಿರುವ ಭಾರತೀಯ ಮೂಲದ ಉದ್ಯಮಿಗಳು ತಿಳಿಸಿದ್ದಾರೆ. ಅವರ ಮೂಲಕವೇ ದುಬೈಗೆ ನಂದಿನಿ ಉತ್ಪನ್ನಗಳನ್ನು ಕಳುಹಿಸಲು ವ್ಯವಹರಿಸಲಾಗುತ್ತಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>