<p><strong>ಬೆಂಗಳೂರು</strong>: ಭೂಗಳ್ಳರ ಪಾಲಾಗಿದ್ದ ಯಶವಂತಪುರ ಹೋಬಳಿ ಸಜ್ಜೆಪಾಳ್ಯದ 44 ಎಕರೆ 33 ಗುಂಟೆ ಜಮೀನು ರಂಗಮ್ಮ ಅವರ ಹೆಸರಿಗೆ ಬಂದಿದೆ ಎಂದು ಕೃಷ್ಣಪ್ಪ ರಂಗಮ್ಮ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಎಚ್.ಎನ್. ಅಶೋಕ (ತಮ್ಮಾಜಿ) ತಿಳಿಸಿದರು.</p>.<p>ಕೃಷ್ಣಪ್ಪ–ರಂಗಮ್ಮ ದಂಪತಿಗೆ ಮಕ್ಕಳಿರಲಿಲ್ಲ. ಕೃಷ್ಣಪ್ಪ ಅವರು ನಿಧನರಾದ ಬಳಿಕ ರಂಗಮ್ಮ ಅವರು ಸಮಾಜಕ್ಕಾಗಿ ಜಮೀನು ನೀಡಿದ್ದರು. ಅವರು ಐದು ದಶಕಗಳ ಹಿಂದೆ ನಿಧನರಾಗಿದ್ದು, ಆ ನಂತರ ಆ ಜಮೀನಿಗೆ ಸಂಬಂಧಪಡದವರು ದಾಖಲೆಗಳಲ್ಲಿ ಅವರ ಹೆಸರನ್ನು ಸೇರಿಸಿದ್ದರು. ಅದಕ್ಕೆ ಆಗಿನ ಅಧಿಕಾರಿಗಳು ಸಹಕಾರ ನೀಡಿದ್ದರು. ಒಕ್ಕಲಿಗರ ಸಂಘದ ಬೆಂಬಲದೊಂದಿಗೆ ಕೃಷ್ಣಪ್ಪ ರಂಗಮ್ಮ ಎಜುಕೇಶನ್ ಟ್ರಸ್ಟ್ ಇದರ ವಿರುದ್ಧ ಹೋರಾಟ ಮಾಡುತ್ತಾ ಬಂದಿತ್ತು ಎಂದು ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.</p>.<p>ಪಹಣಿಯಲ್ಲಿರುವ ಎಲ್ಲರ ಹೆಸರು ತೆಗೆದು ರಂಗಮ್ಮನ ಹೆಸರು ಮಾತ್ರ ದಾಖಲು ಮಾಡಿ. ಆ ನಂತರ ಯಾರಿಗೆ ಸೇರಿದ್ದು ಎಂಬುದನ್ನು ಇತ್ಯರ್ಥ ಮಾಡಿಕೊಳ್ಳಿ ಎಂದು ನ್ಯಾಯಾಲಯ ಆದೇಶಿಸಿತ್ತು. ಈಗ ರಂಗಮ್ಮ ಅವರ ಹೆಸರಿಗೆ ಪಹಣಿ ಬಂದಿದೆ. ಇದು ಹೋರಾಟಕ್ಕೆ ಸಂದ ಆರಂಭಿಕ ಜಯ ಎಂದರು. </p>.<p>ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ಕೆಂಚಪ್ಪ ಗೌಡ, ಪ್ರಧಾನ ಕಾರ್ಯದರ್ಶಿ ಟಿ. ಕೋನಪ್ಪ ರೆಡ್ಡಿ, ಪದಾಧಿಕಾರಿಗಳು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಭೂಗಳ್ಳರ ಪಾಲಾಗಿದ್ದ ಯಶವಂತಪುರ ಹೋಬಳಿ ಸಜ್ಜೆಪಾಳ್ಯದ 44 ಎಕರೆ 33 ಗುಂಟೆ ಜಮೀನು ರಂಗಮ್ಮ ಅವರ ಹೆಸರಿಗೆ ಬಂದಿದೆ ಎಂದು ಕೃಷ್ಣಪ್ಪ ರಂಗಮ್ಮ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಎಚ್.ಎನ್. ಅಶೋಕ (ತಮ್ಮಾಜಿ) ತಿಳಿಸಿದರು.</p>.<p>ಕೃಷ್ಣಪ್ಪ–ರಂಗಮ್ಮ ದಂಪತಿಗೆ ಮಕ್ಕಳಿರಲಿಲ್ಲ. ಕೃಷ್ಣಪ್ಪ ಅವರು ನಿಧನರಾದ ಬಳಿಕ ರಂಗಮ್ಮ ಅವರು ಸಮಾಜಕ್ಕಾಗಿ ಜಮೀನು ನೀಡಿದ್ದರು. ಅವರು ಐದು ದಶಕಗಳ ಹಿಂದೆ ನಿಧನರಾಗಿದ್ದು, ಆ ನಂತರ ಆ ಜಮೀನಿಗೆ ಸಂಬಂಧಪಡದವರು ದಾಖಲೆಗಳಲ್ಲಿ ಅವರ ಹೆಸರನ್ನು ಸೇರಿಸಿದ್ದರು. ಅದಕ್ಕೆ ಆಗಿನ ಅಧಿಕಾರಿಗಳು ಸಹಕಾರ ನೀಡಿದ್ದರು. ಒಕ್ಕಲಿಗರ ಸಂಘದ ಬೆಂಬಲದೊಂದಿಗೆ ಕೃಷ್ಣಪ್ಪ ರಂಗಮ್ಮ ಎಜುಕೇಶನ್ ಟ್ರಸ್ಟ್ ಇದರ ವಿರುದ್ಧ ಹೋರಾಟ ಮಾಡುತ್ತಾ ಬಂದಿತ್ತು ಎಂದು ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.</p>.<p>ಪಹಣಿಯಲ್ಲಿರುವ ಎಲ್ಲರ ಹೆಸರು ತೆಗೆದು ರಂಗಮ್ಮನ ಹೆಸರು ಮಾತ್ರ ದಾಖಲು ಮಾಡಿ. ಆ ನಂತರ ಯಾರಿಗೆ ಸೇರಿದ್ದು ಎಂಬುದನ್ನು ಇತ್ಯರ್ಥ ಮಾಡಿಕೊಳ್ಳಿ ಎಂದು ನ್ಯಾಯಾಲಯ ಆದೇಶಿಸಿತ್ತು. ಈಗ ರಂಗಮ್ಮ ಅವರ ಹೆಸರಿಗೆ ಪಹಣಿ ಬಂದಿದೆ. ಇದು ಹೋರಾಟಕ್ಕೆ ಸಂದ ಆರಂಭಿಕ ಜಯ ಎಂದರು. </p>.<p>ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ಕೆಂಚಪ್ಪ ಗೌಡ, ಪ್ರಧಾನ ಕಾರ್ಯದರ್ಶಿ ಟಿ. ಕೋನಪ್ಪ ರೆಡ್ಡಿ, ಪದಾಧಿಕಾರಿಗಳು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>