‘ಸಂಸ್ಕೃತಿ ಸಿರಿ’–2022 ಪ್ರಶಸ್ತಿಯನ್ನು ಭಾಜನರಾದ ಗಾಯಕಿ ಕಸ್ತೂರಿ ಶಂಕರ್, ವಾಗ್ಮಿ ಸುಧಾ ಬರಗೂರು, ಪರಿಸರ ತಜ್ಞ- ಲೇಖಕ ನಾಗೇಶ್ ಹೆಗಡೆ, ಕನ್ನಡಪರ ಹೋರಾಟಗಾರ ರಾಮಣ್ಣ ಕೋಡಿಹೊಸಳ್ಳಿ, ಸಾಹಿತಿ ಕೋಟಗಾನಹಳ್ಳಿ ರಾಮಯ್ಯ, ಕಾಡುಮಲೇಶ್ವರ ಗೆಳೆಯರ ಬಳಗದ ಸಂಸ್ಥಾಪಕ ಅಧ್ಯಕ್ಷ ಬಿ.ಕೆ. ಶಿವರಾಂ, ನೃತ್ಯ ಗುರು ಸುಪರ್ಣ ವೆಂಕಟೇಶ್, ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಕಡಿದಾಳ್ ಪ್ರಕಾಶ್ ಅವರಿಗೆ ನೀಡಲಾಯಿತು. ₹25 ಸಾವಿರ ನಗದು, ಫಲಕ ಮತ್ತು ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು.