‘ಬಾಲಕನ ಅಕ್ಕ, ಹೊಸಗುಡ್ಡದಹಳ್ಳಿಯಲ್ಲಿರುವ ಸೀರೆಗೆ ಪಾಲಿಶ್ ಮಾಡುವ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದರು. ಶನಿವಾರ ಮಧ್ಯಾಹ್ನ ಅಕ್ಕನಿಗೆ ಊಟ ಕೊಡಲೆಂದು ಬಾಲಕ ಸಚಿನ್, ಕೇಂದ್ರಕ್ಕೆ ಬಂದಿದ್ದ. ಊಟ ಕೊಟ್ಟು ವಾಪಸು ಹೋಗುವಾಗ ಆಕಸ್ಮಿಕವಾಗಿ ಯಂತ್ರದ ಬಳಿ ಕೈ ಇಟ್ಟಿದ್ದ. ಕೈ ಯಂತ್ರದೊಳಗೆ ಹೋಗಿ ಮುರಿದಿತ್ತು. ತಲೆಗೂ ಪೆಟ್ಟಾಗಿ ರಕ್ತ ಸೋರುತ್ತಿತ್ತು.’