<p><strong>ಬೆಂಗಳೂರು:</strong> ಅಂದಿನ ‘ಕತ್ತಲ ಯುಗ’ ದಲ್ಲಿ ಶಿಕ್ಷಕಿಯಾಗುವ ಧೈರ್ಯತಾಳಿ ಶಿಕ್ಷಣದ ಘನತೆಯನ್ನು ಎತ್ತಿ ಹಿಡಿದ ಸಾವಿತ್ರಿಬಾಯಿಫುಲೆಯವರ ಮಹತ್ವದ ಬಗ್ಗೆ ಭಾರತೀಯ ಸಮಾಜಕ್ಕೆಹೆಚ್ಚು ತಿಳಿವಳಿಕೆ ಮೂಡಿಸ ಬೇಕಿದೆ. ಹಾಗಾಗಿ ಇವರ ಜನ್ಮದಿನವನ್ನು ಸರ್ಕಾರವೇಆಚರಿಸುತ್ತಿರುವುದು ಶ್ಲಾಘ ನೀಯ ಎಂದು ಬೆಂಗಳೂರು ವಿಶ್ವವಿದ್ಯಾಲಯದಕುಲಸಚಿವ (ಮೌಲ್ಯಮಾಪನ) ಡಾ.ಸಿ.ಶಿವರಾಜು ಹೇಳಿದರು.</p>.<p>ವಿಶ್ವವಿದ್ಯಾಲಯದಮಹಿಳಾ ಅಧ್ಯಯನ ಕೇಂದ್ರ ಶುಕ್ರವಾರ ಆಯೋಜಿಸಿದ್ದ ಸಾವಿತ್ರಿಬಾಯಿಫುಲೆ ಅವರ ಜನ್ಮ ದಿನಾಚರಣೆ, ಕೇಂದ್ರದ ಹಳೆಯ ವಿದ್ಯಾರ್ಥಿಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದುಕೆಳವರ್ಗದ ಸಮಾಜದವರು ಹಾಗೂ ಮಹಿಳೆಯರು ಮುಕ್ತವಾಗಿ ವಿದ್ಯಾಭ್ಯಾಸ ಪಡೆಯುವಂತಾಗಿರುವುದರ ಹಿಂದೆ ಬಹು ದೊಡ್ಡ ಹೋರಾಟವೇ ಇದೆ ಎಂದರು.</p>.<p>ಕುಲಸಚಿವ ಡಾ.ಬಿ.ಕೆ.ರವಿ ಮಾತನಾಡಿ, ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಅವರುನೀಡಿದ ಅಕ್ಷರ ಸಂಸ್ಕೃತಿಯಿಂದ ಶಿಕ್ಷಣ ಜ್ಯೋತಿಇಂದು ಬೆಳಗುತ್ತಿದೆ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಅಂದಿನ ‘ಕತ್ತಲ ಯುಗ’ ದಲ್ಲಿ ಶಿಕ್ಷಕಿಯಾಗುವ ಧೈರ್ಯತಾಳಿ ಶಿಕ್ಷಣದ ಘನತೆಯನ್ನು ಎತ್ತಿ ಹಿಡಿದ ಸಾವಿತ್ರಿಬಾಯಿಫುಲೆಯವರ ಮಹತ್ವದ ಬಗ್ಗೆ ಭಾರತೀಯ ಸಮಾಜಕ್ಕೆಹೆಚ್ಚು ತಿಳಿವಳಿಕೆ ಮೂಡಿಸ ಬೇಕಿದೆ. ಹಾಗಾಗಿ ಇವರ ಜನ್ಮದಿನವನ್ನು ಸರ್ಕಾರವೇಆಚರಿಸುತ್ತಿರುವುದು ಶ್ಲಾಘ ನೀಯ ಎಂದು ಬೆಂಗಳೂರು ವಿಶ್ವವಿದ್ಯಾಲಯದಕುಲಸಚಿವ (ಮೌಲ್ಯಮಾಪನ) ಡಾ.ಸಿ.ಶಿವರಾಜು ಹೇಳಿದರು.</p>.<p>ವಿಶ್ವವಿದ್ಯಾಲಯದಮಹಿಳಾ ಅಧ್ಯಯನ ಕೇಂದ್ರ ಶುಕ್ರವಾರ ಆಯೋಜಿಸಿದ್ದ ಸಾವಿತ್ರಿಬಾಯಿಫುಲೆ ಅವರ ಜನ್ಮ ದಿನಾಚರಣೆ, ಕೇಂದ್ರದ ಹಳೆಯ ವಿದ್ಯಾರ್ಥಿಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದುಕೆಳವರ್ಗದ ಸಮಾಜದವರು ಹಾಗೂ ಮಹಿಳೆಯರು ಮುಕ್ತವಾಗಿ ವಿದ್ಯಾಭ್ಯಾಸ ಪಡೆಯುವಂತಾಗಿರುವುದರ ಹಿಂದೆ ಬಹು ದೊಡ್ಡ ಹೋರಾಟವೇ ಇದೆ ಎಂದರು.</p>.<p>ಕುಲಸಚಿವ ಡಾ.ಬಿ.ಕೆ.ರವಿ ಮಾತನಾಡಿ, ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಅವರುನೀಡಿದ ಅಕ್ಷರ ಸಂಸ್ಕೃತಿಯಿಂದ ಶಿಕ್ಷಣ ಜ್ಯೋತಿಇಂದು ಬೆಳಗುತ್ತಿದೆ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>