<p><strong>ಬೆಂಗಳೂರು:</strong> ‘ಭಾರತದಂಥ ಸಂಪ್ರದಾಯವಾದಿ ರಾಷ್ಟ್ರಗಳಲ್ಲಿ ಹೇರಲ್ಪಟ್ಟ ಮೌಲ್ಯಗಳು ಮಹಿಳೆಯರನ್ನು ಅವಕಾಶ ವಂಚಿತರನ್ನಾಗಿಸಿವೆ’ ಎಂದು ಬೆಂಗಳೂರಿನ ಭಾರತೀಯ ಖಭೌತ ವಿಜ್ಞಾನ ಸಂಸ್ಥೆಯ ನಿರ್ದೇಶಕ ಜಯಂತಮೂರ್ತಿ ಅಭಿಪ್ರಾಯಪಟ್ಟರು.</p>.<p>ವಿಜ್ಞಾನಕ್ಕಾಗಿ ವಿಶ್ವ ನಡಿಗೆ ಜಾಥದ ಅಂಗವಾಗಿ ಬ್ರೇಕ್ ಥ್ರೂ ಸೈನ್ಸ್ ಸಂಸ್ಥೆ ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ವಿಜ್ಞಾನದಲ್ಲಿ ಮಹಿಳೆ’ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.</p>.<p>‘ಮಹಿಳೆ ಮೊದಲು ಈ ಸಾಮಾಜಿಕ ಬೇಡಿಯನ್ನು ಕಳಚಿಕೊಂಡು ಹೊರಬರಬೇಕು. ಹೊರಬಂದ ಮೇಲೆ ತಾನು ಎದುರಿಸಿದ ಸಮಸ್ಯೆಗಳ ಕುರಿತು ಗಟ್ಟಿಯಾಗಿ ಮಾತನಾಡಬೇಕು. ಆಗ ಮಾತ್ರ ವೈಜ್ಞಾನಿಕ ಜೀವನಕ್ಕೆ ತೆರೆದುಕೊಳ್ಳಲು ಸಾಧ್ಯ’ ಎಂದು ಹೇಳಿದರು.</p>.<p>ಖಭೌತ ವಿಜ್ಞಾನಿ ಡಾ.ಪ್ರಜ್ವಲ್ ಶಾಸ್ತ್ರಿ ಮಾತನಾಡಿ,‘ವಿಜ್ಞಾನ ಎಂದರೆ ಕೇವಲ ವಿಷಯವಲ್ಲ. ಅದೊಂದುಜೀವನ ವಿಧಾನ ಮತ್ತು ಚಿಂತನಾ ಕ್ರಮ. ದಿನನಿತ್ಯದ ಜೀವನದಲ್ಲಿ ಅದರ ಪರಿಣಾಮ ಅಗಾಧ’ ಎಂದು ಹೇಳಿದರು.</p>.<p>‘ಮಹಿಳೆ ಸೀರೆ ತೊಡಬೇಕು ಎನ್ನುವುದು ಪ್ರಕೃತಿಯಿಂದ ಬಂದಿದ್ದಲ್ಲ. ಅದು ಪುರುಷ ಪ್ರಧಾನ ಸಮಾಜದಿಂದ ಹೇರಲ್ಪಟ್ಟಿದ್ದು. ಇಂದು ಲಿಂಗ ಅಸಮಾನತೆ ಜಗತ್ತಿನಾದ್ಯಂತ ವ್ಯಾಪಿಸಿಕೊಂಡಿದೆ. ಅದು ವಿಜ್ಞಾನ ಕ್ಷೇತ್ರವನ್ನೂ ಬಿಟ್ಟಿಲ್ಲ. ಹೆಣ್ಣು ಮಕ್ಕಳಿಗೆ ಹೆಚ್ಚು ಹೆಚ್ಚುವಿಜ್ಞಾನ ವಿಷಯ ಆಯ್ಕೆ ಮಾಡಿಕೊಳ್ಳಲು ಸೂಚಿಸಬೇಕು’ ಎಂದರು.</p>.<p>ಅಖಿಲ ಭಾರತ ಜನವಿಜ್ಞಾನ ಜಾಲದ ಅಧ್ಯಕ್ಷ ಎಸ್.ಚಟರ್ಜಿ, ‘ಜಗತ್ತಿಗೆ ಸ್ವಾತಂತ್ರ್ಯ, ಸಮಾನತೆ ಮತ್ತು ಭಾತೃತ್ವದ ಕಲ್ಪನೆ ನೀಡಿದ ಫ್ರಾನ್ಸ್ನಲ್ಲಿಯೂ ಅಸಮಾನತೆ ಇತ್ತು. 1666ರಲ್ಲಿ ಸ್ಥಾಪನೆಯಾದಫ್ರೆಂಚ್ ಅಕಾಡೆಮಿ ಆಫ್ ಸೈನ್ಸ್ನ 780 ಜನ ಸದಸ್ಯರಲ್ಲಿ ಕೇವಲ 6 ಮಹಿಳಾ ಸದಸ್ಯೆಯರು ಇದ್ದರು. ಇದರ ಮಧ್ಯೆಯೂ ಹಲವಾರು ಮಹಿಳೆಯರು ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಇನ್ನೂ ಹೆಚ್ಚು ಸಾಧಿಸಬೇಕಾದ ಅಗತ್ಯವಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಭಾರತದಂಥ ಸಂಪ್ರದಾಯವಾದಿ ರಾಷ್ಟ್ರಗಳಲ್ಲಿ ಹೇರಲ್ಪಟ್ಟ ಮೌಲ್ಯಗಳು ಮಹಿಳೆಯರನ್ನು ಅವಕಾಶ ವಂಚಿತರನ್ನಾಗಿಸಿವೆ’ ಎಂದು ಬೆಂಗಳೂರಿನ ಭಾರತೀಯ ಖಭೌತ ವಿಜ್ಞಾನ ಸಂಸ್ಥೆಯ ನಿರ್ದೇಶಕ ಜಯಂತಮೂರ್ತಿ ಅಭಿಪ್ರಾಯಪಟ್ಟರು.</p>.<p>ವಿಜ್ಞಾನಕ್ಕಾಗಿ ವಿಶ್ವ ನಡಿಗೆ ಜಾಥದ ಅಂಗವಾಗಿ ಬ್ರೇಕ್ ಥ್ರೂ ಸೈನ್ಸ್ ಸಂಸ್ಥೆ ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ವಿಜ್ಞಾನದಲ್ಲಿ ಮಹಿಳೆ’ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.</p>.<p>‘ಮಹಿಳೆ ಮೊದಲು ಈ ಸಾಮಾಜಿಕ ಬೇಡಿಯನ್ನು ಕಳಚಿಕೊಂಡು ಹೊರಬರಬೇಕು. ಹೊರಬಂದ ಮೇಲೆ ತಾನು ಎದುರಿಸಿದ ಸಮಸ್ಯೆಗಳ ಕುರಿತು ಗಟ್ಟಿಯಾಗಿ ಮಾತನಾಡಬೇಕು. ಆಗ ಮಾತ್ರ ವೈಜ್ಞಾನಿಕ ಜೀವನಕ್ಕೆ ತೆರೆದುಕೊಳ್ಳಲು ಸಾಧ್ಯ’ ಎಂದು ಹೇಳಿದರು.</p>.<p>ಖಭೌತ ವಿಜ್ಞಾನಿ ಡಾ.ಪ್ರಜ್ವಲ್ ಶಾಸ್ತ್ರಿ ಮಾತನಾಡಿ,‘ವಿಜ್ಞಾನ ಎಂದರೆ ಕೇವಲ ವಿಷಯವಲ್ಲ. ಅದೊಂದುಜೀವನ ವಿಧಾನ ಮತ್ತು ಚಿಂತನಾ ಕ್ರಮ. ದಿನನಿತ್ಯದ ಜೀವನದಲ್ಲಿ ಅದರ ಪರಿಣಾಮ ಅಗಾಧ’ ಎಂದು ಹೇಳಿದರು.</p>.<p>‘ಮಹಿಳೆ ಸೀರೆ ತೊಡಬೇಕು ಎನ್ನುವುದು ಪ್ರಕೃತಿಯಿಂದ ಬಂದಿದ್ದಲ್ಲ. ಅದು ಪುರುಷ ಪ್ರಧಾನ ಸಮಾಜದಿಂದ ಹೇರಲ್ಪಟ್ಟಿದ್ದು. ಇಂದು ಲಿಂಗ ಅಸಮಾನತೆ ಜಗತ್ತಿನಾದ್ಯಂತ ವ್ಯಾಪಿಸಿಕೊಂಡಿದೆ. ಅದು ವಿಜ್ಞಾನ ಕ್ಷೇತ್ರವನ್ನೂ ಬಿಟ್ಟಿಲ್ಲ. ಹೆಣ್ಣು ಮಕ್ಕಳಿಗೆ ಹೆಚ್ಚು ಹೆಚ್ಚುವಿಜ್ಞಾನ ವಿಷಯ ಆಯ್ಕೆ ಮಾಡಿಕೊಳ್ಳಲು ಸೂಚಿಸಬೇಕು’ ಎಂದರು.</p>.<p>ಅಖಿಲ ಭಾರತ ಜನವಿಜ್ಞಾನ ಜಾಲದ ಅಧ್ಯಕ್ಷ ಎಸ್.ಚಟರ್ಜಿ, ‘ಜಗತ್ತಿಗೆ ಸ್ವಾತಂತ್ರ್ಯ, ಸಮಾನತೆ ಮತ್ತು ಭಾತೃತ್ವದ ಕಲ್ಪನೆ ನೀಡಿದ ಫ್ರಾನ್ಸ್ನಲ್ಲಿಯೂ ಅಸಮಾನತೆ ಇತ್ತು. 1666ರಲ್ಲಿ ಸ್ಥಾಪನೆಯಾದಫ್ರೆಂಚ್ ಅಕಾಡೆಮಿ ಆಫ್ ಸೈನ್ಸ್ನ 780 ಜನ ಸದಸ್ಯರಲ್ಲಿ ಕೇವಲ 6 ಮಹಿಳಾ ಸದಸ್ಯೆಯರು ಇದ್ದರು. ಇದರ ಮಧ್ಯೆಯೂ ಹಲವಾರು ಮಹಿಳೆಯರು ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಇನ್ನೂ ಹೆಚ್ಚು ಸಾಧಿಸಬೇಕಾದ ಅಗತ್ಯವಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>