<p><strong>ಬೆಂಗಳೂರು: </strong>ಕಬ್ಬನ್ ಉದ್ಯಾನದಲ್ಲಿರುವ ಪ್ರತಿ ಮರದ ಹೆಸರು, ಮೂಲ, ವೈಶಿಷ್ಟ್ಯ ಒಳಗೊಂಡಂತೆ ಸಂಪೂರ್ಣ ವಿವರಗಳನ್ನು ದಾಖಲಿಸಿ, ಈ ಮೂಲಕ ಜನರಲ್ಲಿ ಅರಿವು ಮೂಡಿಸುವ ಉದ್ದೇಶದ ಯೋಜನೆಗೆ ಹಿನ್ನಡೆಯಾಗಿದೆ.</p>.<p>‘ಸ್ಮಾರ್ಟ್ಸಿಟಿ’ ಯೋಜನೆಯಡಿ ₹23 ಲಕ್ಷ ವೆಚ್ಚದಲ್ಲಿ ‘ಐಡೆಂಟಿಫಿಕೇಷನ್ ಆ್ಯಂಡ್ ಟ್ರೇಸಿಂಗ್’ ಹೆಸರಿನಲ್ಲಿ ಕಾಮಗಾರಿ ಕೈಗೊಳ್ಳಲಾಗಿತ್ತು. ಜುಲೈ 2021ರಲ್ಲಿ ಚಾಲನೆ ನೀಡಿದ್ದು, 2022ರ ಜೂನ್ನಲ್ಲೇ ಮುಗಿಯಬೇಕಾಗಿತ್ತು. ಆದರೆ, ಯೋಜನೆಯ ಜಾರಿ ಆಮೆಗತಿಯಲ್ಲಿ ಸಾಗಿದ್ದು, ಸಾರ್ವಜನಿಕರ ಅಸಮಾಧಾನಕ್ಕೆ ಗುರಿಯಾಗಿದೆ.</p>.<p>ಕಬ್ಬನ್ ಉದ್ಯಾನದಲ್ಲಿ ವಿವಿಧ ಜಾತಿಯ 8,837 ಮರಗಳಿವೆ. ಇವುಗಳಲ್ಲಿ 197ಕ್ಕೂ ಹೆಚ್ಚು ಪಾರಂಪರಿಕ ಪ್ರಭೇದಗಳು ಎಂದು ಗುರುತಿಸಲಾಗಿದೆ. ಆದರೆ, ಅವುಗಳ ಬಗ್ಗೆ ಸಾರ್ವಜನಿಕರಿಗೆ ಸಮರ್ಪಕ ಮಾಹಿತಿ ಇಲ್ಲ.</p>.<p>‘ಕಬ್ಬನ್ ಉದ್ಯಾನದ ಪ್ರತಿ ಮರವೂ ವಿಭಿನ್ನ ಗುಣಲಕ್ಷಣಗಳನ್ನು ಒಳಗೊಂಡಿದೆ. ಅವುಗಳ ಸಂಪೂರ್ಣ ವಿವರ ದಾಖಲಿಸುವ ಕಾರ್ಯವನ್ನು<br />ತ್ವರಿತಗತಿಯಲ್ಲಿ ಕೈಗೊಳ್ಳಬೇಕು. ಇದರಿಂದ ವಿದ್ಯಾರ್ಥಿಗಳು, ಪ್ರವಾಸಿಗರಿಗೆ ಮತ್ತು ವಾಯುವಿಹಾರಿಗಳಿಗೆ ಅನುಕೂಲವಾಗಲಿದೆ’ ಎಂದು ಕಬ್ಬನ್ ಉದ್ಯಾನ ನಡಿಗೆದಾರರ ಸಂಘದ ಅಧ್ಯಕ್ಷ ಉಮೇಶ ಒತ್ತಾಯಿಸಿದರು.</p>.<p class="Subhead">ಮರಕ್ಕೆ ಹಾನಿಯಾಗದಂತೆ ಫಲಕ: ‘ಯೋಜನೆಯಡಿ ಅಳವಡಿಸುವ ಫಲಕಗಳು ಮರಗಳಿಗೆ ಹಾನಿ<br />ಉಂಟುಮಾಡುವುದಿಲ್ಲ. ಮೊಳೆ ಹೊಡೆಯುವುದು, ರಾಸಾಯನಿಕ ಲೇಪನ ಸೇರಿ ಅಪಾಯಕಾರಿ ವಿಧಾನಗಳನ್ನು ಬಳಸುವುದಿಲ್ಲ. ಫಲಕ ಅಳವಡಿಕೆಗೆ ಆಧುನಿಕ ವಿಧಾನ ಅನುಸರಿಸಲಾಗುವುದು’ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ( ಕಬ್ಬನ್ ಉದ್ಯಾನ) ಎಚ್.ಪಿ.ಬಾಲಕೃಷ್ಣ ವಿವರಿಸಿದರು.</p>.<p>‘ಕಾಮಗಾರಿ ಕೈಗೊಂಡ ಸಂಸ್ಥೆ ಮರಗಳಿಗೆ ಜಿಪಿಎಸ್, ಕ್ಯೂಆರ್ ಕೋಡ್ ಅಳವಡಿಸುವ ಪ್ರಸ್ತಾವವನ್ನು<br />ಸ್ಮಾರ್ಟ್ಸಿಟಿಯವರಿಗೆ ಸಲ್ಲಿಸಲಾಗಿದೆ. ಅದು ಮಾತುಕತೆಯ ಹಂತದಲ್ಲಿದ್ದು, ಇನ್ನೂ ಅಂತಿಮಗೊಂಡಿಲ್ಲ’ ಎಂದು ಅವರು ಮಾಹಿತಿ ನೀಡಿದರು.</p>.<p><strong>ಕಬ್ಬನ್ ಉದ್ಯಾನ: ಮರಗಳ ಮಾಹಿತಿ ಸಿದ್ಧ</strong></p>.<p>‘ಯೋಜನೆಯ ಮೊದಲ ಹಂತದಲ್ಲಿ ಕಬ್ಬನ್ ಉದ್ಯಾನದ ಮರಗಳ ಗಣತಿ ಮತ್ತು ಹೆಸರು, ಅವುಗಳ ಮೂಲ, ವೈಶಿಷ್ಟ್ಯ ಹಾಗೂ ಪ್ರಭೇದದ ಮಾಹಿತಿ ಕಲೆಹಾಕಲಾಗಿದೆ’ ಎಂದು ಯೋಜನೆಯ ಗುತ್ತಿಗೆ ಪಡೆದಿರುವ ಫ್ಲಿಪ್ಪರ್ ಸಂಸ್ಥೆಯ ನಿರ್ದೇಶಕ ವಿವೇಕ್ ಮಹಾವೀರ್ ಮಾಹಿತಿ ನೀಡಿದರು.</p>.<p>‘20 ಸಸ್ಯವಿಜ್ಞಾನ ವಿದ್ಯಾರ್ಥಿಗಳ ನೆರವಿನಿಂದ ಪ್ರತಿ ಮರದ ಹೆಸರು, ವಯಸ್ಸು, ಗುಣ, ಮೂಲ ಒಳಗೊಂಡು ವಿಶೇಷಗಳ ಬಗ್ಗೆ 300 ಪುಟಗಳ ವರದಿ ಸಿದ್ಧವಾಗಿದೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಇಬ್ಬರೂ ಸಸ್ಯವಿಜ್ಞಾನ ತಜ್ಞರು ಇದನ್ನು ಅಂತಿಮಗೊಳಿಸಿದ್ದಾರೆ’ ಎಂದು<br />ತಿಳಿಸಿದರು.</p>.<p>ಉದ್ಯಾನವನ್ನು 18 ವಲಯಗಳನ್ನಾಗಿ ವಿಂಗಡಿಸಿದ್ದು, ವಲಯವಾರು ಮರಗಳಿಗೆ ಕ್ಯೂಆರ್ ಕೋಡ್ ಮತ್ತು ಫಲಕ ಅಳವಡಿಸುವ ಕಾರ್ಯ ಎರಡನೇ ಹಂತದಲ್ಲಿ ನಡೆಯಲಿದೆ’ ಎಂದು ತಿಳಿಸಿದರು.</p>.<p>***</p>.<p>ಕಬ್ಬನ್ ಉದ್ಯಾನದಲ್ಲಿ ಐಡೆಂಟಿಫಿಕೇಷನ್ ಆ್ಯಂಡ್ ಟ್ರೇಸಿಂಗ್ ಕಾಮಗಾರಿ ಪ್ರಗತಿಯಲ್ಲಿದ್ದು, ಡಿಸೆಂಬರ್ ಅಂತ್ಯದೊಳಗೆ ಮುಗಿಯಲಿದೆ.</p>.<p><strong>ಎಚ್.ಪಿ.ಬಾಲಕೃಷ್ಣ, ಉಪನಿರ್ದೇಶಕ, ತೋಟಗಾರಿಕೆ ಇಲಾಖೆಯ (ಕಬ್ಬನ್ ಉದ್ಯಾನ)</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಕಬ್ಬನ್ ಉದ್ಯಾನದಲ್ಲಿರುವ ಪ್ರತಿ ಮರದ ಹೆಸರು, ಮೂಲ, ವೈಶಿಷ್ಟ್ಯ ಒಳಗೊಂಡಂತೆ ಸಂಪೂರ್ಣ ವಿವರಗಳನ್ನು ದಾಖಲಿಸಿ, ಈ ಮೂಲಕ ಜನರಲ್ಲಿ ಅರಿವು ಮೂಡಿಸುವ ಉದ್ದೇಶದ ಯೋಜನೆಗೆ ಹಿನ್ನಡೆಯಾಗಿದೆ.</p>.<p>‘ಸ್ಮಾರ್ಟ್ಸಿಟಿ’ ಯೋಜನೆಯಡಿ ₹23 ಲಕ್ಷ ವೆಚ್ಚದಲ್ಲಿ ‘ಐಡೆಂಟಿಫಿಕೇಷನ್ ಆ್ಯಂಡ್ ಟ್ರೇಸಿಂಗ್’ ಹೆಸರಿನಲ್ಲಿ ಕಾಮಗಾರಿ ಕೈಗೊಳ್ಳಲಾಗಿತ್ತು. ಜುಲೈ 2021ರಲ್ಲಿ ಚಾಲನೆ ನೀಡಿದ್ದು, 2022ರ ಜೂನ್ನಲ್ಲೇ ಮುಗಿಯಬೇಕಾಗಿತ್ತು. ಆದರೆ, ಯೋಜನೆಯ ಜಾರಿ ಆಮೆಗತಿಯಲ್ಲಿ ಸಾಗಿದ್ದು, ಸಾರ್ವಜನಿಕರ ಅಸಮಾಧಾನಕ್ಕೆ ಗುರಿಯಾಗಿದೆ.</p>.<p>ಕಬ್ಬನ್ ಉದ್ಯಾನದಲ್ಲಿ ವಿವಿಧ ಜಾತಿಯ 8,837 ಮರಗಳಿವೆ. ಇವುಗಳಲ್ಲಿ 197ಕ್ಕೂ ಹೆಚ್ಚು ಪಾರಂಪರಿಕ ಪ್ರಭೇದಗಳು ಎಂದು ಗುರುತಿಸಲಾಗಿದೆ. ಆದರೆ, ಅವುಗಳ ಬಗ್ಗೆ ಸಾರ್ವಜನಿಕರಿಗೆ ಸಮರ್ಪಕ ಮಾಹಿತಿ ಇಲ್ಲ.</p>.<p>‘ಕಬ್ಬನ್ ಉದ್ಯಾನದ ಪ್ರತಿ ಮರವೂ ವಿಭಿನ್ನ ಗುಣಲಕ್ಷಣಗಳನ್ನು ಒಳಗೊಂಡಿದೆ. ಅವುಗಳ ಸಂಪೂರ್ಣ ವಿವರ ದಾಖಲಿಸುವ ಕಾರ್ಯವನ್ನು<br />ತ್ವರಿತಗತಿಯಲ್ಲಿ ಕೈಗೊಳ್ಳಬೇಕು. ಇದರಿಂದ ವಿದ್ಯಾರ್ಥಿಗಳು, ಪ್ರವಾಸಿಗರಿಗೆ ಮತ್ತು ವಾಯುವಿಹಾರಿಗಳಿಗೆ ಅನುಕೂಲವಾಗಲಿದೆ’ ಎಂದು ಕಬ್ಬನ್ ಉದ್ಯಾನ ನಡಿಗೆದಾರರ ಸಂಘದ ಅಧ್ಯಕ್ಷ ಉಮೇಶ ಒತ್ತಾಯಿಸಿದರು.</p>.<p class="Subhead">ಮರಕ್ಕೆ ಹಾನಿಯಾಗದಂತೆ ಫಲಕ: ‘ಯೋಜನೆಯಡಿ ಅಳವಡಿಸುವ ಫಲಕಗಳು ಮರಗಳಿಗೆ ಹಾನಿ<br />ಉಂಟುಮಾಡುವುದಿಲ್ಲ. ಮೊಳೆ ಹೊಡೆಯುವುದು, ರಾಸಾಯನಿಕ ಲೇಪನ ಸೇರಿ ಅಪಾಯಕಾರಿ ವಿಧಾನಗಳನ್ನು ಬಳಸುವುದಿಲ್ಲ. ಫಲಕ ಅಳವಡಿಕೆಗೆ ಆಧುನಿಕ ವಿಧಾನ ಅನುಸರಿಸಲಾಗುವುದು’ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ( ಕಬ್ಬನ್ ಉದ್ಯಾನ) ಎಚ್.ಪಿ.ಬಾಲಕೃಷ್ಣ ವಿವರಿಸಿದರು.</p>.<p>‘ಕಾಮಗಾರಿ ಕೈಗೊಂಡ ಸಂಸ್ಥೆ ಮರಗಳಿಗೆ ಜಿಪಿಎಸ್, ಕ್ಯೂಆರ್ ಕೋಡ್ ಅಳವಡಿಸುವ ಪ್ರಸ್ತಾವವನ್ನು<br />ಸ್ಮಾರ್ಟ್ಸಿಟಿಯವರಿಗೆ ಸಲ್ಲಿಸಲಾಗಿದೆ. ಅದು ಮಾತುಕತೆಯ ಹಂತದಲ್ಲಿದ್ದು, ಇನ್ನೂ ಅಂತಿಮಗೊಂಡಿಲ್ಲ’ ಎಂದು ಅವರು ಮಾಹಿತಿ ನೀಡಿದರು.</p>.<p><strong>ಕಬ್ಬನ್ ಉದ್ಯಾನ: ಮರಗಳ ಮಾಹಿತಿ ಸಿದ್ಧ</strong></p>.<p>‘ಯೋಜನೆಯ ಮೊದಲ ಹಂತದಲ್ಲಿ ಕಬ್ಬನ್ ಉದ್ಯಾನದ ಮರಗಳ ಗಣತಿ ಮತ್ತು ಹೆಸರು, ಅವುಗಳ ಮೂಲ, ವೈಶಿಷ್ಟ್ಯ ಹಾಗೂ ಪ್ರಭೇದದ ಮಾಹಿತಿ ಕಲೆಹಾಕಲಾಗಿದೆ’ ಎಂದು ಯೋಜನೆಯ ಗುತ್ತಿಗೆ ಪಡೆದಿರುವ ಫ್ಲಿಪ್ಪರ್ ಸಂಸ್ಥೆಯ ನಿರ್ದೇಶಕ ವಿವೇಕ್ ಮಹಾವೀರ್ ಮಾಹಿತಿ ನೀಡಿದರು.</p>.<p>‘20 ಸಸ್ಯವಿಜ್ಞಾನ ವಿದ್ಯಾರ್ಥಿಗಳ ನೆರವಿನಿಂದ ಪ್ರತಿ ಮರದ ಹೆಸರು, ವಯಸ್ಸು, ಗುಣ, ಮೂಲ ಒಳಗೊಂಡು ವಿಶೇಷಗಳ ಬಗ್ಗೆ 300 ಪುಟಗಳ ವರದಿ ಸಿದ್ಧವಾಗಿದೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಇಬ್ಬರೂ ಸಸ್ಯವಿಜ್ಞಾನ ತಜ್ಞರು ಇದನ್ನು ಅಂತಿಮಗೊಳಿಸಿದ್ದಾರೆ’ ಎಂದು<br />ತಿಳಿಸಿದರು.</p>.<p>ಉದ್ಯಾನವನ್ನು 18 ವಲಯಗಳನ್ನಾಗಿ ವಿಂಗಡಿಸಿದ್ದು, ವಲಯವಾರು ಮರಗಳಿಗೆ ಕ್ಯೂಆರ್ ಕೋಡ್ ಮತ್ತು ಫಲಕ ಅಳವಡಿಸುವ ಕಾರ್ಯ ಎರಡನೇ ಹಂತದಲ್ಲಿ ನಡೆಯಲಿದೆ’ ಎಂದು ತಿಳಿಸಿದರು.</p>.<p>***</p>.<p>ಕಬ್ಬನ್ ಉದ್ಯಾನದಲ್ಲಿ ಐಡೆಂಟಿಫಿಕೇಷನ್ ಆ್ಯಂಡ್ ಟ್ರೇಸಿಂಗ್ ಕಾಮಗಾರಿ ಪ್ರಗತಿಯಲ್ಲಿದ್ದು, ಡಿಸೆಂಬರ್ ಅಂತ್ಯದೊಳಗೆ ಮುಗಿಯಲಿದೆ.</p>.<p><strong>ಎಚ್.ಪಿ.ಬಾಲಕೃಷ್ಣ, ಉಪನಿರ್ದೇಶಕ, ತೋಟಗಾರಿಕೆ ಇಲಾಖೆಯ (ಕಬ್ಬನ್ ಉದ್ಯಾನ)</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>