ಲೇಖಕಿ ವನಮಾಲಾ ವಿಶ್ವನಾಥ, ‘ಒಂದು ಯುಗದ ವಿವೇಕವಿದ್ದ ಶ್ರೇಷ್ಠ ಸಂಶೋಧಕರಾಗಿದ್ದವರು ಶೆಟ್ಟರ್. ಸಂಶೋಧನೆಗೆ ಮಾರ್ಗದರ್ಶಕ ಸೂತ್ರಗಳನ್ನು ಒದಗಿಸಿದ ಅವರ ಹಲವು ಕ್ಷೇತ್ರಗಳಲ್ಲಿಯ ಸಾಧನೆ ಬೆರಗನ್ನು ಮೂಡಿಸುತ್ತದೆ. ಅವರ ಪಾಂಡಿತ್ಯವೇ ಹೊರೆಯಾಗದಂತೆ, ಒಬ್ಬ ಪುನರುತ್ಥಾನಕಾರರಂತೆ ಬದುಕಿದರು’ ಎಂದು ಬಣ್ಣಿಸಿದರು.