<p><strong>ಬೆಂಗಳೂರು</strong>: ‘ಹಿಂದಿನ ವೈಜ್ಞಾನಿಕ ಸಾಧನೆಯನ್ನು ಗೌರವಿಸುವುದು, ನೂತನ ತಂತ್ರಜ್ಞಾನದೊಂದಿಗೆ ಭವಿಷ್ಯವನ್ನು ಕಟ್ಟುವುದು ನಮ್ಮ ಗುರಿ’ ಎಂದು ಎಕ್ಸ್ಐಎಸ್ಎಸ್ ನಿರ್ದೇಶಕ ಜೋಸೆಫ್ ಮೇರಿಯಾನಸ್ ಕುಜುರ್ ಎಸ್.ಜೆ. ತಿಳಿಸಿದರು.</p>.<p>‘ಸುಸ್ಥಿರ ಭವಿಷ್ಯಕ್ಕಾಗಿ ಆಡಳಿತದ ಮರುಕಲ್ಪನೆ: ಎ.ಐ ಯುಗದಲ್ಲಿ ಲಾಭ, ಉದ್ದೇಶ ಮತ್ತು ಜನರ ಸಮತೋಲನ’ ಕುರಿತು ಕ್ಸೇವಿಯರ್ ಸಾಮಾಜಿಕ ಸೇವಾ ಸಂಸ್ಥೆ (ಎಕ್ಸ್ಐಎಸ್ಎಸ್) ಹಮ್ಮಿಕೊಂಡಿದ್ದ ಮೂರು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಕೃತಕ ಬುದ್ಧಿಮತ್ತೆಯ ಯುಗದಲ್ಲಿ ನೀತಿಶಾಸ್ತ್ರ, ಸುಸ್ಥಿರತೆ ಮತ್ತು ಮಾನವೀಯ ಮೌಲ್ಯಗಳು ಆಡಳಿತಕ್ಕೆ ಮಾರ್ಗದರ್ಶನವಾಗಲಿವೆ. ನೈತಿಕ ನಾಯಕತ್ವ, ಸಾಮಾಜಿಕ ನ್ಯಾಯ ಮತ್ತು ಜವಾಬ್ದಾರಿಯುತ ನಿರ್ವಹಣಾ ಶಿಕ್ಷಣ ಇಂದಿನ ಅಗತ್ಯ’ ಎಂದು ಹೇಳಿದರು.</p>.<p>ಎಕ್ಸ್ಐಎಸ್ಎಸ್–ಜಿಬಿ ಅಧ್ಯಕ್ಷ ಅಜಿತ್ ಕುಮಾರ್ ಕ್ಸೆಸ್ ಎಸ್.ಜೆ. ಮಾತನಾಡಿ, ‘ಸಂಸ್ಥೆಯು ತನ್ನ ಪ್ಲಾಟಿನಂ ಮಹೋತ್ಸವ ಆಚರಣೆಯ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಸಮ್ಮೇಳನವು ಮೆರುಗು ನೀಡಿದೆ. ನಿಜವಾದ ಆಡಳಿತವು ಮಾನವ-ಕೇಂದ್ರಿತ, ಅಂತರ್ಗತ ಮತ್ತು ನೈತಿಕವಾಗಿಬೇಕು’ ಎಂದರು.</p>.<p>ಪ್ರಬೀರ್ ಝಾ ಪೀಪಲ್ ಅಡ್ವೈಸರಿ ಸಂಸ್ಥೆಯ ಸ್ಥಾಪಕ ಪ್ರಬೀರ್ ಝಾ, ಅಮೆರಿಕದ ಸಿಯಾಟಲ್ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕ ಜೋಸೆಫ್ ಎಂ. ಫಿಲಿಪ್ಸ್, ಪ್ರಧಾನ ಮಂತ್ರಿ ಕರ್ಮ ಯೋಗಿ ಭಾರತ್ ಉಪಕ್ರಮದ ಸಹ-ಸಂಸ್ಥಾಪಕ ಪಂಕಜ್ ಬನ್ಸಾಲ್, ಕೋಲ್ ಇಂಡಿಯಾ ಲಿಮಿಟೆಡ್ ನಿರ್ದೇಶಕ ವಿನಯ್ ರಂಜನ್, ಡೀನ್ ಡಾ. ಅಮರ್ ಇ. ಟಿಗ್ಗಾ ವಿವಿಧ ವಿಚಾರಗಳ ಕುರಿತು ಮಾತನಾಡಿದರು. ಮೊದಲ ದಿನ 13 ಪ್ರಬಂಧಗಳ ಮಂಡನೆಯಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ಹಿಂದಿನ ವೈಜ್ಞಾನಿಕ ಸಾಧನೆಯನ್ನು ಗೌರವಿಸುವುದು, ನೂತನ ತಂತ್ರಜ್ಞಾನದೊಂದಿಗೆ ಭವಿಷ್ಯವನ್ನು ಕಟ್ಟುವುದು ನಮ್ಮ ಗುರಿ’ ಎಂದು ಎಕ್ಸ್ಐಎಸ್ಎಸ್ ನಿರ್ದೇಶಕ ಜೋಸೆಫ್ ಮೇರಿಯಾನಸ್ ಕುಜುರ್ ಎಸ್.ಜೆ. ತಿಳಿಸಿದರು.</p>.<p>‘ಸುಸ್ಥಿರ ಭವಿಷ್ಯಕ್ಕಾಗಿ ಆಡಳಿತದ ಮರುಕಲ್ಪನೆ: ಎ.ಐ ಯುಗದಲ್ಲಿ ಲಾಭ, ಉದ್ದೇಶ ಮತ್ತು ಜನರ ಸಮತೋಲನ’ ಕುರಿತು ಕ್ಸೇವಿಯರ್ ಸಾಮಾಜಿಕ ಸೇವಾ ಸಂಸ್ಥೆ (ಎಕ್ಸ್ಐಎಸ್ಎಸ್) ಹಮ್ಮಿಕೊಂಡಿದ್ದ ಮೂರು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಕೃತಕ ಬುದ್ಧಿಮತ್ತೆಯ ಯುಗದಲ್ಲಿ ನೀತಿಶಾಸ್ತ್ರ, ಸುಸ್ಥಿರತೆ ಮತ್ತು ಮಾನವೀಯ ಮೌಲ್ಯಗಳು ಆಡಳಿತಕ್ಕೆ ಮಾರ್ಗದರ್ಶನವಾಗಲಿವೆ. ನೈತಿಕ ನಾಯಕತ್ವ, ಸಾಮಾಜಿಕ ನ್ಯಾಯ ಮತ್ತು ಜವಾಬ್ದಾರಿಯುತ ನಿರ್ವಹಣಾ ಶಿಕ್ಷಣ ಇಂದಿನ ಅಗತ್ಯ’ ಎಂದು ಹೇಳಿದರು.</p>.<p>ಎಕ್ಸ್ಐಎಸ್ಎಸ್–ಜಿಬಿ ಅಧ್ಯಕ್ಷ ಅಜಿತ್ ಕುಮಾರ್ ಕ್ಸೆಸ್ ಎಸ್.ಜೆ. ಮಾತನಾಡಿ, ‘ಸಂಸ್ಥೆಯು ತನ್ನ ಪ್ಲಾಟಿನಂ ಮಹೋತ್ಸವ ಆಚರಣೆಯ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಸಮ್ಮೇಳನವು ಮೆರುಗು ನೀಡಿದೆ. ನಿಜವಾದ ಆಡಳಿತವು ಮಾನವ-ಕೇಂದ್ರಿತ, ಅಂತರ್ಗತ ಮತ್ತು ನೈತಿಕವಾಗಿಬೇಕು’ ಎಂದರು.</p>.<p>ಪ್ರಬೀರ್ ಝಾ ಪೀಪಲ್ ಅಡ್ವೈಸರಿ ಸಂಸ್ಥೆಯ ಸ್ಥಾಪಕ ಪ್ರಬೀರ್ ಝಾ, ಅಮೆರಿಕದ ಸಿಯಾಟಲ್ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕ ಜೋಸೆಫ್ ಎಂ. ಫಿಲಿಪ್ಸ್, ಪ್ರಧಾನ ಮಂತ್ರಿ ಕರ್ಮ ಯೋಗಿ ಭಾರತ್ ಉಪಕ್ರಮದ ಸಹ-ಸಂಸ್ಥಾಪಕ ಪಂಕಜ್ ಬನ್ಸಾಲ್, ಕೋಲ್ ಇಂಡಿಯಾ ಲಿಮಿಟೆಡ್ ನಿರ್ದೇಶಕ ವಿನಯ್ ರಂಜನ್, ಡೀನ್ ಡಾ. ಅಮರ್ ಇ. ಟಿಗ್ಗಾ ವಿವಿಧ ವಿಚಾರಗಳ ಕುರಿತು ಮಾತನಾಡಿದರು. ಮೊದಲ ದಿನ 13 ಪ್ರಬಂಧಗಳ ಮಂಡನೆಯಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>