‘ಶಿವಕುಮಾರ ಸ್ವಾಮೀಜಿ ಅವರು ಅನಂತ ನೋವುಗಳನ್ನುಂಡು, ಸಿದ್ದಗಂಗಾ ಮಠವನ್ನು ಬೆಳೆಸಿದರು. ಮಠದ ಕೀರ್ತಿಯನ್ನು ರಾಷ್ಟ್ರಮಟ್ಟಕ್ಕೆ ಪಸರಿಸಿದರು. ಪ್ರತಿ ನಿತ್ಯ ಹತ್ತಾರು ಸಾವಿರ ವಿದ್ಯಾರ್ಥಿಗಳಿಗೆ ಆಶ್ರಯ, ಅನ್ನ ಹಾಗೂ ವಿದ್ಯೆಯನ್ನು ನೀಡಿದರು. ತಮ್ಮ ಈ ಕಾರ್ಯದಿಂದ ಲಕ್ಷಾಂತರ ಜನರ ಬಾಳನ್ನು ಬೆಳಗಿದರು’ ಎಂದು ಹೇಳಿದರು.