<p><strong>ಬೆಂಗಳೂರು</strong>: ವೀರಲೋಕ ಪ್ರತಿಷ್ಠಾನವು ‘ಕಥಾ ಸಂಕ್ರಾಂತಿ 2024’ ಸ್ಪರ್ಧೆಗೆ ಕಥೆಗಳನ್ನು ಆಹ್ವಾನಿಸಿದೆ.</p>.<p>ಸ್ಪರ್ಧೆಗೆ ಮೊದಲ ಬಹುಮಾನ ₹ 55 ಸಾವಿರ, ದ್ವಿತೀಯ ಬಹುಮಾನ ₹ 30 ಸಾವಿರ ಹಾಗೂ ತೃತೀಯ ಬಹುಮಾನ ₹ 20 ಸಾವಿರ ನಿಗದಿಪಡಿಸಲಾಗಿದೆ. ಈ ಕಥಾ ಸ್ಪರ್ಧೆಯ ಸಂಪಾದಕತ್ವವನ್ನು ಕಥೆಗಾರ ಕೇಶವ ಮಳಗಿ ವಹಿಸಿಕೊಂಡಿದ್ದಾರೆ. </p>.<p>ಮೂರು ಬಹುಮಾನಿತ ಮತ್ತು ತೀರ್ಪುಗಾರರು ಮೆಚ್ಚಿದ ಏಳು ಕಥೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುತ್ತದೆ. ಹತ್ತೂ ಕಥೆಗಳನ್ನು ಇಂಗ್ಲಿಷ್ ಮತ್ತು ಇನ್ನೆರಡು ದ್ರಾವಿಡ ಭಾಷೆಗಳಿಗೆ ಅನುವಾದಿಸಿ, ಏಕಕಾಲದಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ಪ್ರತಿಷ್ಠಾನದ ಸಂಸ್ಥಾಪಕ ವೀರಕಪುತ್ರ ಶ್ರೀನಿವಾಸ್ ತಿಳಿಸಿದ್ದಾರೆ. </p>.<p>ಸ್ಪರ್ಧೆಗೆ ವಯಸ್ಸಿನ ಮಿತಿಯಿಲ್ಲ. ಮೂರು ಸಾವಿರ ಪದಗಳ ಮಿತಿಯಲ್ಲಿ ಕಥೆಗಳನ್ನು ಬರೆಯಬೇಕು. ಮೊದಲ ಬಹುಮಾನಕ್ಕೆ ಅರ್ಹ ಕಥೆಗಳಿಲ್ಲವೆಂದು ತೀರ್ಪುಗಾರರು ನಿರ್ಣಯಿಸಿದರೆ, ಬಹುಮಾನವನ್ನು ಹಂಚಿಕೆ ಮಾಡಲಾಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವವರು ಈವರೆಗೆ ಕಥಾ ಸಂಕಲನ ಪ್ರಕಟಿಸಿರಬಾರದು. </p>.<p>ಕಥೆಗಾರರ ಹೆಸರು, ವಿಳಾಸ ಹಾಗೂ ದೂರವಾಣಿ ವಿವರವನ್ನು ಪ್ರತ್ಯೇಕ ಹಾಳೆಯಲ್ಲಿ ಬರೆಯಬೇಕು. ಸ್ಪರ್ಧೆಗೆ ಕಥೆಯ ಸಾಫ್ಟ್ ಪ್ರತಿಗಳನ್ನು ಮಾತ್ರ ಸ್ವೀಕರಿಸಲಾಗುತ್ತದೆ. ಕಥೆಗಳನ್ನು ಕಳುಹಿಸಲು ಸೆ.5 ಕೊನೆಯ ದಿನವಾಗಿದ್ದು, ಕಥೆಗಳನ್ನು veeralokakathasankranti@gmail.com ಈ ವಿಳಾಸಕ್ಕೆ ಕಳುಹಿಸಬೇಕು ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ. </p>.<p><strong>ಸಂಪರ್ಕಕ್ಕೆ</strong>: 7022122121</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ವೀರಲೋಕ ಪ್ರತಿಷ್ಠಾನವು ‘ಕಥಾ ಸಂಕ್ರಾಂತಿ 2024’ ಸ್ಪರ್ಧೆಗೆ ಕಥೆಗಳನ್ನು ಆಹ್ವಾನಿಸಿದೆ.</p>.<p>ಸ್ಪರ್ಧೆಗೆ ಮೊದಲ ಬಹುಮಾನ ₹ 55 ಸಾವಿರ, ದ್ವಿತೀಯ ಬಹುಮಾನ ₹ 30 ಸಾವಿರ ಹಾಗೂ ತೃತೀಯ ಬಹುಮಾನ ₹ 20 ಸಾವಿರ ನಿಗದಿಪಡಿಸಲಾಗಿದೆ. ಈ ಕಥಾ ಸ್ಪರ್ಧೆಯ ಸಂಪಾದಕತ್ವವನ್ನು ಕಥೆಗಾರ ಕೇಶವ ಮಳಗಿ ವಹಿಸಿಕೊಂಡಿದ್ದಾರೆ. </p>.<p>ಮೂರು ಬಹುಮಾನಿತ ಮತ್ತು ತೀರ್ಪುಗಾರರು ಮೆಚ್ಚಿದ ಏಳು ಕಥೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುತ್ತದೆ. ಹತ್ತೂ ಕಥೆಗಳನ್ನು ಇಂಗ್ಲಿಷ್ ಮತ್ತು ಇನ್ನೆರಡು ದ್ರಾವಿಡ ಭಾಷೆಗಳಿಗೆ ಅನುವಾದಿಸಿ, ಏಕಕಾಲದಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ಪ್ರತಿಷ್ಠಾನದ ಸಂಸ್ಥಾಪಕ ವೀರಕಪುತ್ರ ಶ್ರೀನಿವಾಸ್ ತಿಳಿಸಿದ್ದಾರೆ. </p>.<p>ಸ್ಪರ್ಧೆಗೆ ವಯಸ್ಸಿನ ಮಿತಿಯಿಲ್ಲ. ಮೂರು ಸಾವಿರ ಪದಗಳ ಮಿತಿಯಲ್ಲಿ ಕಥೆಗಳನ್ನು ಬರೆಯಬೇಕು. ಮೊದಲ ಬಹುಮಾನಕ್ಕೆ ಅರ್ಹ ಕಥೆಗಳಿಲ್ಲವೆಂದು ತೀರ್ಪುಗಾರರು ನಿರ್ಣಯಿಸಿದರೆ, ಬಹುಮಾನವನ್ನು ಹಂಚಿಕೆ ಮಾಡಲಾಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವವರು ಈವರೆಗೆ ಕಥಾ ಸಂಕಲನ ಪ್ರಕಟಿಸಿರಬಾರದು. </p>.<p>ಕಥೆಗಾರರ ಹೆಸರು, ವಿಳಾಸ ಹಾಗೂ ದೂರವಾಣಿ ವಿವರವನ್ನು ಪ್ರತ್ಯೇಕ ಹಾಳೆಯಲ್ಲಿ ಬರೆಯಬೇಕು. ಸ್ಪರ್ಧೆಗೆ ಕಥೆಯ ಸಾಫ್ಟ್ ಪ್ರತಿಗಳನ್ನು ಮಾತ್ರ ಸ್ವೀಕರಿಸಲಾಗುತ್ತದೆ. ಕಥೆಗಳನ್ನು ಕಳುಹಿಸಲು ಸೆ.5 ಕೊನೆಯ ದಿನವಾಗಿದ್ದು, ಕಥೆಗಳನ್ನು veeralokakathasankranti@gmail.com ಈ ವಿಳಾಸಕ್ಕೆ ಕಳುಹಿಸಬೇಕು ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ. </p>.<p><strong>ಸಂಪರ್ಕಕ್ಕೆ</strong>: 7022122121</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>