<p><strong>ಬೆಂಗಳೂರು</strong>: ‘ಕೋವಿಡ್ ಮೊದಲ ಬಾರಿ ಕಾಣಿಸಿಕೊಂಡಾಗ, ಅಂದರೆ ಕಳೆದ ವರ್ಷ ಯಾವುದೇ ವ್ಯವಸ್ಥೆ ಸರಿಯಾಗಿರಲಿಲ್ಲ. ಸರ್ಕಾರಕ್ಕೂ ಈ ಮಾದರಿಯ ಸಮಸ್ಯೆ ಹೊಸದಾಗಿದ್ದರಿಂದ ಎಲ್ಲರಿಗೂ ಹೆಚ್ಚು ಆತಂಕವಿತ್ತು. ಪಿಪಿಇ ಕಿಟ್, ಮಾಸ್ಕ್, ಸ್ಯಾನಿಟೈಸರ್ ಸೌಲಭ್ಯ ಒದಗಿಸುವವರೆಗೆ ಅಳುಕಿನಿಂದಲೇ ರೋಗಿಗಳ ಶುಶ್ರೂಷೆ ಮಾಡಬೇಕಾಯಿತು. ಹಿರಿಯ ವೈದ್ಯರು, ಸೂಪರಿಂಟೆಂಡೆಂಟ್ ಎಲ್ಲರೂ ಧೈರ್ಯ ನೀಡಿದ್ದರಿಂದ ಕೆಲಸ ಸುಲಭವಾಯಿತು.’</p>.<p>‘ಈ ಬಾರಿ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೆವು. ಆದರೆ, ರೋಗಿಗಳ ಸಂಖ್ಯೆ ನಿರೀಕ್ಷೆಗೂ ಮೀರಿ ಹೆಚ್ಚಾಗಿದೆ. ಹಲವು ಆಸ್ಪತ್ರೆಗಳಲ್ಲಿ ತಂದೆ–ತಾಯಿ ಮಕ್ಕಳು ಎಲ್ಲರಿಗೂ ಏಕಕಾಲಕ್ಕೆ ಚಿಕಿತ್ಸೆ ಪಡೆಯುವ ಸ್ಥಿತಿ ನಿರ್ಮಾಣವಾಗಿದೆ.’</p>.<p>‘ನಾನು ಕೆಲಸ ಮಾಡುತ್ತಿರುವ ಇಂದಿರಾನಗರದ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯಲ್ಲಿ ಪರಪ್ಪನ ಅಗ್ರಹಾರದಲ್ಲಿರುವ ಕೈದಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರಲ್ಲಿಯೂ ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಸದ್ಯ 45 ಕೈದಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ’</p>.<p>‘ಈ ಕೈದಿಗಳು ಅಪರಾಧ ಹಿನ್ನೆಲೆ ಹೊಂದಿರುವುದರಿಂದ ಆತಂಕ ಇದ್ದೇ ಇರುತ್ತದೆ. ಅವರಿಗೆ ಏನೇ ಚಿಕಿತ್ಸೆ, ಔಷಧ ಕೊಡಬೇಕಾದರೆ ಪೊಲೀಸರ ಉಪಸ್ಥಿತಿ ಇರಬೇಕು. ಪೊಲೀಸರು ಜೊತೆಗಿದ್ದರೂ ಅಳಕು ಇದ್ದೇ ಇರುತ್ತದೆ. ಸೋಂಕು ಹರಡುವ ಭೀತಿಯೊಂದಿಗೆ ಇಂತಹ ಅಳಕನ್ನೂ ನಾವು ಎದುರಿಸಿದ್ದೇವೆ’</p>.<p>‘ನನ್ನ ಪತಿ ಬಿಬಿಎಂಪಿ ಶಾಲೆಯಲ್ಲಿ ಶಿಕ್ಷಕರಾಗಿದ್ದು, ಅವರೂ ಈಗ ಕೋವಿಡ್ ಕರ್ತವ್ಯ ಮಾಡುತ್ತಿದ್ದಾರೆ. ಒಂದೇ ಮನೆಯಲ್ಲಿ ಇಬ್ಬರು ಕೊರೊನಾ ಸೇನಾನಿಗಳು ಇದ್ದೇವೆ. ಕರ್ತವ್ಯ ನಿಭಾಯಿಸುವುದರೊಂದಿಗೆ ಮಕ್ಕಳ ಬಗ್ಗೆಯೂ ಕಾಳಜಿ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ’</p>.<p>‘1992ರಲ್ಲಿ ನನ್ನ ವೃತ್ತಿ ಜೀವನ ಆರಂಭವಾಯಿತು. ಸಿ.ವಿ. ರಾಮನ್ ನಗರದಲ್ಲಿರುವ ಕ್ಷಯರೋಗ ಆಸ್ಪತ್ರೆಯಲ್ಲಿ ಕೆಲಸ ಆರಂಭಿಸಿದೆ. ಈಗ ಇಂದಿರಾನಗರದ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯಲ್ಲಿ ಹಿರಿಯ ಶುಶ್ರೂಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ’</p>.<p>‘ಸೋಂಕಿನ ಸೌಮ್ಯ ಸ್ವಭಾವದ ಲಕ್ಷಣ ಹೊಂದಿರುವಂಥವರಿಗೆ ಮಾತ್ರ ಚಿಕಿತ್ಸೆ ನೀಡಲಾಗುತ್ತಿದೆ. ಗಂಭೀರ ಪರಿಸ್ಥಿತಿಗೆ ತಲುಪಿಸಿದರೆ ಆ ರೋಗಿಗಳನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತಿದೆ. ಸೋಂಕು ತೀವ್ರವಾಗಿ ಹರಡುತ್ತಿರುವುದರಿಂದ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ನನಗೂ ಸೋಂಕು ತಗುಲಿದ್ದು ಸದ್ಯ ಹೋಂ ಐಸೊಲೇಷನ್ನಲ್ಲಿದ್ದೇನೆ. ಸೋಂಕಿನ ಬಗ್ಗೆ ಆತಂಕ ಪಡುವುದಕ್ಕಿಂತ ಎಚ್ಚರಿಕೆಯಿಂದಿರುವುದು ಉತ್ತಮ’.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ಕೋವಿಡ್ ಮೊದಲ ಬಾರಿ ಕಾಣಿಸಿಕೊಂಡಾಗ, ಅಂದರೆ ಕಳೆದ ವರ್ಷ ಯಾವುದೇ ವ್ಯವಸ್ಥೆ ಸರಿಯಾಗಿರಲಿಲ್ಲ. ಸರ್ಕಾರಕ್ಕೂ ಈ ಮಾದರಿಯ ಸಮಸ್ಯೆ ಹೊಸದಾಗಿದ್ದರಿಂದ ಎಲ್ಲರಿಗೂ ಹೆಚ್ಚು ಆತಂಕವಿತ್ತು. ಪಿಪಿಇ ಕಿಟ್, ಮಾಸ್ಕ್, ಸ್ಯಾನಿಟೈಸರ್ ಸೌಲಭ್ಯ ಒದಗಿಸುವವರೆಗೆ ಅಳುಕಿನಿಂದಲೇ ರೋಗಿಗಳ ಶುಶ್ರೂಷೆ ಮಾಡಬೇಕಾಯಿತು. ಹಿರಿಯ ವೈದ್ಯರು, ಸೂಪರಿಂಟೆಂಡೆಂಟ್ ಎಲ್ಲರೂ ಧೈರ್ಯ ನೀಡಿದ್ದರಿಂದ ಕೆಲಸ ಸುಲಭವಾಯಿತು.’</p>.<p>‘ಈ ಬಾರಿ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೆವು. ಆದರೆ, ರೋಗಿಗಳ ಸಂಖ್ಯೆ ನಿರೀಕ್ಷೆಗೂ ಮೀರಿ ಹೆಚ್ಚಾಗಿದೆ. ಹಲವು ಆಸ್ಪತ್ರೆಗಳಲ್ಲಿ ತಂದೆ–ತಾಯಿ ಮಕ್ಕಳು ಎಲ್ಲರಿಗೂ ಏಕಕಾಲಕ್ಕೆ ಚಿಕಿತ್ಸೆ ಪಡೆಯುವ ಸ್ಥಿತಿ ನಿರ್ಮಾಣವಾಗಿದೆ.’</p>.<p>‘ನಾನು ಕೆಲಸ ಮಾಡುತ್ತಿರುವ ಇಂದಿರಾನಗರದ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯಲ್ಲಿ ಪರಪ್ಪನ ಅಗ್ರಹಾರದಲ್ಲಿರುವ ಕೈದಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರಲ್ಲಿಯೂ ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಸದ್ಯ 45 ಕೈದಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ’</p>.<p>‘ಈ ಕೈದಿಗಳು ಅಪರಾಧ ಹಿನ್ನೆಲೆ ಹೊಂದಿರುವುದರಿಂದ ಆತಂಕ ಇದ್ದೇ ಇರುತ್ತದೆ. ಅವರಿಗೆ ಏನೇ ಚಿಕಿತ್ಸೆ, ಔಷಧ ಕೊಡಬೇಕಾದರೆ ಪೊಲೀಸರ ಉಪಸ್ಥಿತಿ ಇರಬೇಕು. ಪೊಲೀಸರು ಜೊತೆಗಿದ್ದರೂ ಅಳಕು ಇದ್ದೇ ಇರುತ್ತದೆ. ಸೋಂಕು ಹರಡುವ ಭೀತಿಯೊಂದಿಗೆ ಇಂತಹ ಅಳಕನ್ನೂ ನಾವು ಎದುರಿಸಿದ್ದೇವೆ’</p>.<p>‘ನನ್ನ ಪತಿ ಬಿಬಿಎಂಪಿ ಶಾಲೆಯಲ್ಲಿ ಶಿಕ್ಷಕರಾಗಿದ್ದು, ಅವರೂ ಈಗ ಕೋವಿಡ್ ಕರ್ತವ್ಯ ಮಾಡುತ್ತಿದ್ದಾರೆ. ಒಂದೇ ಮನೆಯಲ್ಲಿ ಇಬ್ಬರು ಕೊರೊನಾ ಸೇನಾನಿಗಳು ಇದ್ದೇವೆ. ಕರ್ತವ್ಯ ನಿಭಾಯಿಸುವುದರೊಂದಿಗೆ ಮಕ್ಕಳ ಬಗ್ಗೆಯೂ ಕಾಳಜಿ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ’</p>.<p>‘1992ರಲ್ಲಿ ನನ್ನ ವೃತ್ತಿ ಜೀವನ ಆರಂಭವಾಯಿತು. ಸಿ.ವಿ. ರಾಮನ್ ನಗರದಲ್ಲಿರುವ ಕ್ಷಯರೋಗ ಆಸ್ಪತ್ರೆಯಲ್ಲಿ ಕೆಲಸ ಆರಂಭಿಸಿದೆ. ಈಗ ಇಂದಿರಾನಗರದ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯಲ್ಲಿ ಹಿರಿಯ ಶುಶ್ರೂಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ’</p>.<p>‘ಸೋಂಕಿನ ಸೌಮ್ಯ ಸ್ವಭಾವದ ಲಕ್ಷಣ ಹೊಂದಿರುವಂಥವರಿಗೆ ಮಾತ್ರ ಚಿಕಿತ್ಸೆ ನೀಡಲಾಗುತ್ತಿದೆ. ಗಂಭೀರ ಪರಿಸ್ಥಿತಿಗೆ ತಲುಪಿಸಿದರೆ ಆ ರೋಗಿಗಳನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತಿದೆ. ಸೋಂಕು ತೀವ್ರವಾಗಿ ಹರಡುತ್ತಿರುವುದರಿಂದ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ನನಗೂ ಸೋಂಕು ತಗುಲಿದ್ದು ಸದ್ಯ ಹೋಂ ಐಸೊಲೇಷನ್ನಲ್ಲಿದ್ದೇನೆ. ಸೋಂಕಿನ ಬಗ್ಗೆ ಆತಂಕ ಪಡುವುದಕ್ಕಿಂತ ಎಚ್ಚರಿಕೆಯಿಂದಿರುವುದು ಉತ್ತಮ’.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>