ವಿದ್ವಾಂಸ ಟಿ.ವಿ. ವೆಂಕಟಾಚಲಶಾಸ್ತ್ರಿ, ‘ಈ ಪ್ರಶಸ್ತಿಗೆ ರಾಮಸ್ವಾಮಿ ಅವರಿಗಿಂತ ಹಿರಿಯರು ಮತ್ತು ಅರ್ಹರು ಸಿಗುವುದು ಕಷ್ಟ. ರಾಮಸ್ವಾಮಿ ಅವರು ಗೋಖಲೆ ಸಂಸ್ಥೆಯ ಕಾರ್ಯದರ್ಶಿಯಾಗಿ ಜವಾಬ್ದಾರಿ ವಹಿಸಿಕೊಂಡ ಮೇಲೆ ಭಾರತೀಯ ಸಂಸ್ಕೃತಿ, ಇತಿಹಾಸ, ಸಾಹಿತ್ಯ ಅಧ್ಯಯನಗಳಿಗೆ ಸಂಸ್ಥೆ ಹೆಚ್ಚು ತೊಡಗಿಸಿಕೊಂಡಿತು. ಡಿ.ವಿ.ಜಿ ಅವರು ಕಟ್ಟಿದ ಸಂಸ್ಥೆಯ ಧ್ಯೇಯೋದ್ದೇಶಗಳನ್ನು ಹಿರಿಯರ ಹಾದಿಯಲ್ಲಿಯೇ ಸಾಗಿ, ಅಕ್ಷಯಗೊಳಿಸಿದ್ದಾರೆ. ರಾಮಸ್ವಾಮಿ ಅವರು ತೆರೆದ ಪುಸ್ತಕ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.