ಮಂಡ್ಯ ಜಿಲ್ಲೆಯ ಚುಂಚನಹಳ್ಳಿಯ ಬಾಲಕ ನಿಶ್ಚಿತ್ ಮನೆಯ ಬಾಗಿಲ ಮೂಲೆಯಲ್ಲಿದ್ದ ಹಾವನ್ನು ಕತ್ತಲಲ್ಲಿ ತುಳಿದಿದ್ದ. ಆತನ ಕಾಲು ಬೆರಳುಗಳಿಗೆ ಹಾವು ಕಡಿದಿತ್ತು. ಪಾಲಕರು ಹಾವನ್ನು ಗುರುತಿಸಿ, ಬಾಲಕನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿಯೇ ದೇಹದೊಳಗೆ ವಿಷ ವ್ಯಾಪಿಸಿಕೊಂಡಿತ್ತು. ಇದರಿಂದಾಗಿ ಬಾಲಕ ಕೋಮಾಕ್ಕೆ ಜಾರಿ, ಪಾರ್ಶ್ವವಾಯುವಿಗೆ ಒಳಗಾಗಿದ್ದ. ಸ್ಥಳೀಯ ವೈದ್ಯರು ಕೈಚೆಲ್ಲಿದ ಪರಿಣಾಮ ಕೃತಕ ಉಸಿರಾಟದ ನೆರವಿನಿಂದ ಆಂಬುಲೆನ್ಸ್ನಲ್ಲಿ 2 ಗಂಟೆಗಳ ಅವಧಿಯಲ್ಲಿ ನಗರದ ಆಸ್ಟರ್ ಸಿಎಂಐ ಆಸ್ಪತ್ರೆಗೆ ಕರೆತಂದು, ದಾಖಲಿಸಲಾಯಿತು.